<p><strong>ಸಿರಿಗೆರೆ:</strong> ಫೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದ ಹಿಂದೂ ಆಶ್ರಮವೊಂದರಲ್ಲಿ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ವಚನ ಸಾಹಿತ್ಯದ ಕಂಪನ್ನು ಪಸರಿಸಿದರು.</p>.<p>ಅಮೆರಿಕ ಪ್ರವಾಸದಲ್ಲಿರುವ ಶ್ರೀಗಳು ಹವಾಯಿ ದ್ವೀಪದ ಹಿಂದೂ ಆಶ್ರಮಕ್ಕೆ ಭೇಟಿ ನೀಡಿ, ಅನೌಪಚಾರಿಕ ಮಾತುಕತೆಯ ನಂತರ 12ನೇ ಶತಮಾನದ ಹೋರಾಟ, ಸಾಮಾಜಿಕ ಸಂಘರ್ಷ, ವಚನ ಸಾಹಿತ್ಯ, ಶರಣರ ಬದುಕು ಕುರಿತ ವಿವರಗಳನ್ನು ಅಲ್ಲಿನ ಸನ್ಯಾಸಿಗಳೊಂದಿಗೆ ಹಂಚಿಕೊಂಡರು.</p>.<p>ಇತ್ತೀಚೆಗೆ ವಿವಿಧ ಶರಣರ 22 ಸಾವಿರ ವಚನಗಳನ್ನು ಗಣಕೀಕರಣಗೊಳಿಸಿ ರೂಪಿಸಿರುವ ವಚನ ಸಂಪುಟದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಆಶ್ರಯಮದಲ್ಲಿನ ಹಿರಿಯ, ಕಿರಿಯ ಸನ್ಯಾಸಿಗಳು ತದೇಕಚಿತ್ತದಿಂದ ಶ್ರೀಗಳ ವಿವರಣೆಯನ್ನು ಆಲಿಸಿದರು. ಕೆಲವರು ಬಸವಣ್ಣನವರ ಕೆಲವು ಸರಳ ವಚನಗಳಿಗೆ ಶ್ರೀಗಳಿಂದ ವ್ಯಾಖ್ಯಾನ ಪಡೆದುಕೊಂಡರು.</p>.<p>ಸುದೀರ್ಘ ಒಂದು ಘಂಟೆಯ ಕಾಲದ ಚರ್ಚೆಯ ನಂತರ ಪ್ರಖ್ಯಾತ ʼಹಿಂದೂಯಿಸಂ ಟುಡೆʼ ಪತ್ರಿಕೆಗೆ ಲೇಖನವೊಂದನ್ನು ಬರೆಯಬೇಕಾಗಿ ಮನವಿ ಮಾಡಿದರು. ಶಾಲಾ ಮಕ್ಕಳು ಹಾಡುವ ವಚನಗಳನ್ನು ಕೇಳುವ ಹಂಬಲವನ್ನು ವ್ಯಕ್ತಪಡಿಸಿದರು.</p>.<p>ಆಶ್ರಮಕ್ಕೆ ಆಗಮಿಸಿದ ತರಳಬಾಳು ಶ್ರೀಗಳಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಆಶ್ರಮದಲ್ಲಿ 18 ಜನ ಅಮೆರಿಕ ಮೂಲದ ಸನ್ಯಾಸಿಗಳು ನೆಲೆಸಿದ್ದಾರೆ. ಆಶ್ರಮವು 300 ಎಕರೆ ಭೂಪ್ರದೇಶದಲ್ಲಿ ಹರಡಿಕೊಂಡಿದೆ. ರುದ್ರಾಕ್ಷಿ ಹಾರ ನೀಡಿ ಗೌರವ: ಆಶ್ರಮದ ಸಸ್ಯ ರಾಶಿಗಳಲ್ಲಿ ರುದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ರುದ್ರಾಕ್ಷಿ ಹಾರವೊಂದನ್ನು ಶ್ರೀಗಳಿಗೆ ಹಾಕಿ ಗೌರವಿಸಲಾಯಿತು ಎಂದು ಮಠದ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ಫೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದ ಹಿಂದೂ ಆಶ್ರಮವೊಂದರಲ್ಲಿ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ವಚನ ಸಾಹಿತ್ಯದ ಕಂಪನ್ನು ಪಸರಿಸಿದರು.</p>.<p>ಅಮೆರಿಕ ಪ್ರವಾಸದಲ್ಲಿರುವ ಶ್ರೀಗಳು ಹವಾಯಿ ದ್ವೀಪದ ಹಿಂದೂ ಆಶ್ರಮಕ್ಕೆ ಭೇಟಿ ನೀಡಿ, ಅನೌಪಚಾರಿಕ ಮಾತುಕತೆಯ ನಂತರ 12ನೇ ಶತಮಾನದ ಹೋರಾಟ, ಸಾಮಾಜಿಕ ಸಂಘರ್ಷ, ವಚನ ಸಾಹಿತ್ಯ, ಶರಣರ ಬದುಕು ಕುರಿತ ವಿವರಗಳನ್ನು ಅಲ್ಲಿನ ಸನ್ಯಾಸಿಗಳೊಂದಿಗೆ ಹಂಚಿಕೊಂಡರು.</p>.<p>ಇತ್ತೀಚೆಗೆ ವಿವಿಧ ಶರಣರ 22 ಸಾವಿರ ವಚನಗಳನ್ನು ಗಣಕೀಕರಣಗೊಳಿಸಿ ರೂಪಿಸಿರುವ ವಚನ ಸಂಪುಟದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಆಶ್ರಯಮದಲ್ಲಿನ ಹಿರಿಯ, ಕಿರಿಯ ಸನ್ಯಾಸಿಗಳು ತದೇಕಚಿತ್ತದಿಂದ ಶ್ರೀಗಳ ವಿವರಣೆಯನ್ನು ಆಲಿಸಿದರು. ಕೆಲವರು ಬಸವಣ್ಣನವರ ಕೆಲವು ಸರಳ ವಚನಗಳಿಗೆ ಶ್ರೀಗಳಿಂದ ವ್ಯಾಖ್ಯಾನ ಪಡೆದುಕೊಂಡರು.</p>.<p>ಸುದೀರ್ಘ ಒಂದು ಘಂಟೆಯ ಕಾಲದ ಚರ್ಚೆಯ ನಂತರ ಪ್ರಖ್ಯಾತ ʼಹಿಂದೂಯಿಸಂ ಟುಡೆʼ ಪತ್ರಿಕೆಗೆ ಲೇಖನವೊಂದನ್ನು ಬರೆಯಬೇಕಾಗಿ ಮನವಿ ಮಾಡಿದರು. ಶಾಲಾ ಮಕ್ಕಳು ಹಾಡುವ ವಚನಗಳನ್ನು ಕೇಳುವ ಹಂಬಲವನ್ನು ವ್ಯಕ್ತಪಡಿಸಿದರು.</p>.<p>ಆಶ್ರಮಕ್ಕೆ ಆಗಮಿಸಿದ ತರಳಬಾಳು ಶ್ರೀಗಳಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಆಶ್ರಮದಲ್ಲಿ 18 ಜನ ಅಮೆರಿಕ ಮೂಲದ ಸನ್ಯಾಸಿಗಳು ನೆಲೆಸಿದ್ದಾರೆ. ಆಶ್ರಮವು 300 ಎಕರೆ ಭೂಪ್ರದೇಶದಲ್ಲಿ ಹರಡಿಕೊಂಡಿದೆ. ರುದ್ರಾಕ್ಷಿ ಹಾರ ನೀಡಿ ಗೌರವ: ಆಶ್ರಮದ ಸಸ್ಯ ರಾಶಿಗಳಲ್ಲಿ ರುದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ರುದ್ರಾಕ್ಷಿ ಹಾರವೊಂದನ್ನು ಶ್ರೀಗಳಿಗೆ ಹಾಕಿ ಗೌರವಿಸಲಾಯಿತು ಎಂದು ಮಠದ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>