<p><strong>ದಾವಣಗೆರೆ: </strong>ಫೆ. 18ರಂದು ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ದಾವಣಗೆರೆ– ಹೊಸಪೇಟೆ ಮಾರ್ಗದಲ್ಲಿ ಫೆ. 16ರಿಂದ 19ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.</p>.<p>ಕೊಟ್ಟೂರು ಜಾತ್ರೆ ಅಂಗವಾಗಿ ವಿಶೇಷರೈಲು ಸೌಲಭ್ಯ ಕಲ್ಪಿಸುವಂತೆಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದರು. ಬೇಡಿಕೆಗೆ ಸ್ಪಂದಿಸಿರುವಸುರೇಶ್ ಅಂಗಡಿ ರೈಲು ಓಡಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು.</p>.<p>ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 06231/06232) ದಾವಣಗೆರೆ–ಹೊಸಪೇಟೆ–ದಾವಣಗೆರೆ ಮಾರ್ಗದಲ್ಲಿ ನಾಲ್ಕು ದಿನಗಳು ಸಂಚರಿಸಲಿವೆ.</p>.<p>ರೈಲು ಸಂಖ್ಯೆ – 06231 ದಾವಣಗೆರೆ–ಹೊಸಪೇಟೆ ಪ್ಯಾಸೆಂಜರ್ ರೈಲು ನಾಲ್ಕು ದಿನಗಳು ದಾವಣಗೆರೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 2.45 ಕ್ಕೆ ಹೊಸಪೇಟೆ ತಲುಪಲಿದೆ.</p>.<p>ರೈಲು ಅಮರಾವತಿ ಕಾಲೊನಿ, ತೆಲಿಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲವಿ, ಹಗರಿ ಬೊಮ್ಮನಹಳ್ಳಿ, ಹಂಪಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೊನಿ, ವ್ಯಾಸಂಕೇರಿ, ತುಂಗಭದ್ರಾ ಅಣೆಕಟ್ಟು ಮಾರ್ಗದಲ್ಲಿ ಸಂಚರಿಸಲಿದೆ.</p>.<p>ಇದೇ ಮಾರ್ಗದಲ್ಲಿಹೊಸಪೇಟೆ-ದಾವಣಗೆರೆ ರೈಲು ಸಂಖ್ಯೆ –06232 ಹೊಸಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.40ಕ್ಕೆ ದಾವಣಗೆರೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಫೆ. 18ರಂದು ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ದಾವಣಗೆರೆ– ಹೊಸಪೇಟೆ ಮಾರ್ಗದಲ್ಲಿ ಫೆ. 16ರಿಂದ 19ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.</p>.<p>ಕೊಟ್ಟೂರು ಜಾತ್ರೆ ಅಂಗವಾಗಿ ವಿಶೇಷರೈಲು ಸೌಲಭ್ಯ ಕಲ್ಪಿಸುವಂತೆಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದರು. ಬೇಡಿಕೆಗೆ ಸ್ಪಂದಿಸಿರುವಸುರೇಶ್ ಅಂಗಡಿ ರೈಲು ಓಡಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು.</p>.<p>ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 06231/06232) ದಾವಣಗೆರೆ–ಹೊಸಪೇಟೆ–ದಾವಣಗೆರೆ ಮಾರ್ಗದಲ್ಲಿ ನಾಲ್ಕು ದಿನಗಳು ಸಂಚರಿಸಲಿವೆ.</p>.<p>ರೈಲು ಸಂಖ್ಯೆ – 06231 ದಾವಣಗೆರೆ–ಹೊಸಪೇಟೆ ಪ್ಯಾಸೆಂಜರ್ ರೈಲು ನಾಲ್ಕು ದಿನಗಳು ದಾವಣಗೆರೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 2.45 ಕ್ಕೆ ಹೊಸಪೇಟೆ ತಲುಪಲಿದೆ.</p>.<p>ರೈಲು ಅಮರಾವತಿ ಕಾಲೊನಿ, ತೆಲಿಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲವಿ, ಹಗರಿ ಬೊಮ್ಮನಹಳ್ಳಿ, ಹಂಪಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೊನಿ, ವ್ಯಾಸಂಕೇರಿ, ತುಂಗಭದ್ರಾ ಅಣೆಕಟ್ಟು ಮಾರ್ಗದಲ್ಲಿ ಸಂಚರಿಸಲಿದೆ.</p>.<p>ಇದೇ ಮಾರ್ಗದಲ್ಲಿಹೊಸಪೇಟೆ-ದಾವಣಗೆರೆ ರೈಲು ಸಂಖ್ಯೆ –06232 ಹೊಸಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.40ಕ್ಕೆ ದಾವಣಗೆರೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>