ದಾವಣಗೆರೆ: ಫೆ. 18ರಂದು ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ದಾವಣಗೆರೆ– ಹೊಸಪೇಟೆ ಮಾರ್ಗದಲ್ಲಿ ಫೆ. 16ರಿಂದ 19ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
ಕೊಟ್ಟೂರು ಜಾತ್ರೆ ಅಂಗವಾಗಿ ವಿಶೇಷರೈಲು ಸೌಲಭ್ಯ ಕಲ್ಪಿಸುವಂತೆಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದರು. ಬೇಡಿಕೆಗೆ ಸ್ಪಂದಿಸಿರುವಸುರೇಶ್ ಅಂಗಡಿ ರೈಲು ಓಡಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು.
ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 06231/06232) ದಾವಣಗೆರೆ–ಹೊಸಪೇಟೆ–ದಾವಣಗೆರೆ ಮಾರ್ಗದಲ್ಲಿ ನಾಲ್ಕು ದಿನಗಳು ಸಂಚರಿಸಲಿವೆ.
ರೈಲು ಸಂಖ್ಯೆ – 06231 ದಾವಣಗೆರೆ–ಹೊಸಪೇಟೆ ಪ್ಯಾಸೆಂಜರ್ ರೈಲು ನಾಲ್ಕು ದಿನಗಳು ದಾವಣಗೆರೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 2.45 ಕ್ಕೆ ಹೊಸಪೇಟೆ ತಲುಪಲಿದೆ.
ರೈಲು ಅಮರಾವತಿ ಕಾಲೊನಿ, ತೆಲಿಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲವಿ, ಹಗರಿ ಬೊಮ್ಮನಹಳ್ಳಿ, ಹಂಪಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೊನಿ, ವ್ಯಾಸಂಕೇರಿ, ತುಂಗಭದ್ರಾ ಅಣೆಕಟ್ಟು ಮಾರ್ಗದಲ್ಲಿ ಸಂಚರಿಸಲಿದೆ.
ಇದೇ ಮಾರ್ಗದಲ್ಲಿಹೊಸಪೇಟೆ-ದಾವಣಗೆರೆ ರೈಲು ಸಂಖ್ಯೆ –06232 ಹೊಸಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.40ಕ್ಕೆ ದಾವಣಗೆರೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.