<p><strong>ದಾವಣಗೆರೆ: </strong>ಕಸಾಯಿಖಾನೆಗಳಿಗೆ ಜಾನುವಾರನ್ನು ದೂಡುತ್ತಿದ್ದಾಗ ರಕ್ಷಣೆಗೆ ತೆರಳಿದ ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ಇಲ್ಲಿನ ಬಾಷಾ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದು, ಈ ಸಂದರ್ಭ ನಾಲ್ವರು ಮಹಿಳಾ ಇನ್ಸ್ಪೆಕ್ಟರ್ಗಳಿಗೆ ಗಾಯಗಳಾಗಿವೆ.</p>.<p>ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ಜಾನುವಾರು ರಕ್ಷಿಸಲು ಮುಂದಾದಾಗ ಅಡ್ಡಿಪಡಿಸಿದ ಸ್ಥಳೀಯರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನವೂ ಜಖಂಗೊಂಡಿದೆ.</p>.<p>ಜಾನುವಾರು ರಕ್ಷಣೆ ಮಾಡಿ ಸಾಗಿಸಲು ಪೊಲೀಸರು ಕೊಂಡೊಯ್ದಿದ್ದ ಲಾರಿಯೊಳಗೆ ಅನೇಕರು ನುಗ್ಗಲೆತ್ನಿಸಿದರು. ಸ್ಥಳದಲ್ಲಿ ನೂರಾರು ಜನ ಜಮಾಯಿದ್ದರಿಂದ ಉದ್ರಿಕ್ತ ವಾತಾವರಣ ಕಂಡುಬಂತು. ಆದರೂ 26 ಜಾನುವಾರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಾಷಾ ನಗರದಲ್ಲಿ 30ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಕಲ್ಲು ತೂರಿದ ಸ್ಥಳೀಯರೊಂದಿಗೆ ಮಾತನಾಡಿ ತಿಳಿ ಹೇಳಲಾಗಿದೆ’ ಎಂದು ಜಾನುವಾರು ರಕ್ಷಣೆಗೆ ತೆರಳಿದ್ದ ಪೊಲೀಸ್ ತಂಡದ ನೇತೃತ್ವವಹಿಸಿದ್ದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಕಸಾಯಿಖಾನೆಗಳಿಗೆ ಜಾನುವಾರನ್ನು ದೂಡುತ್ತಿದ್ದಾಗ ರಕ್ಷಣೆಗೆ ತೆರಳಿದ ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ಇಲ್ಲಿನ ಬಾಷಾ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದು, ಈ ಸಂದರ್ಭ ನಾಲ್ವರು ಮಹಿಳಾ ಇನ್ಸ್ಪೆಕ್ಟರ್ಗಳಿಗೆ ಗಾಯಗಳಾಗಿವೆ.</p>.<p>ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ಜಾನುವಾರು ರಕ್ಷಿಸಲು ಮುಂದಾದಾಗ ಅಡ್ಡಿಪಡಿಸಿದ ಸ್ಥಳೀಯರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನವೂ ಜಖಂಗೊಂಡಿದೆ.</p>.<p>ಜಾನುವಾರು ರಕ್ಷಣೆ ಮಾಡಿ ಸಾಗಿಸಲು ಪೊಲೀಸರು ಕೊಂಡೊಯ್ದಿದ್ದ ಲಾರಿಯೊಳಗೆ ಅನೇಕರು ನುಗ್ಗಲೆತ್ನಿಸಿದರು. ಸ್ಥಳದಲ್ಲಿ ನೂರಾರು ಜನ ಜಮಾಯಿದ್ದರಿಂದ ಉದ್ರಿಕ್ತ ವಾತಾವರಣ ಕಂಡುಬಂತು. ಆದರೂ 26 ಜಾನುವಾರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಾಷಾ ನಗರದಲ್ಲಿ 30ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಕಲ್ಲು ತೂರಿದ ಸ್ಥಳೀಯರೊಂದಿಗೆ ಮಾತನಾಡಿ ತಿಳಿ ಹೇಳಲಾಗಿದೆ’ ಎಂದು ಜಾನುವಾರು ರಕ್ಷಣೆಗೆ ತೆರಳಿದ್ದ ಪೊಲೀಸ್ ತಂಡದ ನೇತೃತ್ವವಹಿಸಿದ್ದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>