ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ ಬಳಿಯ ಹತ್ತೂರು ಗ್ರಾಮದಲ್ಲಿ ಮೈಸೂರು ಒಡೆಯರ ಕಾಲದ ಬಂಗಾರದ ನಾಣ್ಯ ಪತ್ತೆ

Last Updated 25 ಫೆಬ್ರುವರಿ 2021, 3:58 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಮೈಸೂರಿನ ಮೂರನೇ ಕೃಷ್ಣರಾಜ ಒಡೆಯರ ಕಾಲಾವಧಿಯ ಬಂಗಾರದ ನಾಣ್ಯ ಪತ್ತೆಯಾಗಿದೆ.

ಇತ್ತೀಚೆಗೆ ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ಶಿವಾಚಾರ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ಕ್ಷೇತ್ರ ಕಾರ್ಯ ಕೈಗೊಂಡಾಗ ಬಂಗಾರದ ನಾಣ್ಯ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರವೀಣ ದೊಡ್ಡಗೌಡ್ರ, ‘ಈ ನಾಣ್ಯವು ಹತ್ತೂರು ಗ್ರಾಮದ ಹೊಸ್‍ಮನೆ ವಂಶದವರ (ಪಾರಂಪರಿಕವಾಗಿ ಬಂದಿರುವ ನಾಣ್ಯ) ಬಳಿ ಇದ್ದು, ಇದು ನಾಣ್ಯವೆಂದು ಅರಿವು ಇಲ್ಲದೆ ಪೂಜೆ ಸಲ್ಲಿಸುತ್ತಿದ್ದರು. ಕ್ಷೇತ್ರ ಕಾರ್ಯಕ್ಕೆ ಹೋದ ಸಂದರ್ಭದಲ್ಲಿ ಈ ನಾಣ್ಯ ಕಂಡುಬಂದಿತು’ ಎಂದು ತಿಳಿಸಿದ್ದಾರೆ.

‘ಈ ನಾಣ್ಯ ಬಂಗಾರದ ಪಗೋಡವಾಗಿದ್ದು, ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ (ಕ್ರಿ.ಶ 1810-1868) ಹೊರಡಿಸಿದ ನಾಣ್ಯ. ನಾಣ್ಯದ ಮುಮ್ಮುಖದಲ್ಲಿ ಶಿವ ಮತ್ತು ಪಾರ್ವತಿ ಕುಳಿತಿರುವಂತೆ ಮುದ್ರಿಸಲಾಗಿದೆ. ಶಿವನು ಡಮರು ಮತ್ತು ತ್ರಿಶೂಲ ಹಿಡಿದಿದ್ದು, ಪಾರ್ವತಿಯು ಬಲ ತೊಡೆಯ ಮೇಲೆ ಕುಳಿತಿದ್ದಾಳೆ. ನಾಣ್ಯದ ಹಿಮ್ಮುಖದಲ್ಲಿ ದೇವನಾಗರಿ ಲಿಪಿಯಲ್ಲಿ ಶ್ರೀ/ಕೃಷ್ಣ ರಾ/ಜ ಎಂಬ ಲೇಖ್ಯ ಇದೆ. ನಾಣ್ಯವು 3.34 ಗ್ರಾಂ ತೂಗುತ್ತದೆ. ಇದರ ಸುತ್ತಳತೆ 12.02 ಮಿ.ಮೀ ಇದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT