‘ನಿಮ್ಮಂಥ ಎಡಬಿಡಂಗಿ ಸಾಹಿತಿಗಳು ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿದ್ದೀರಿ. ನಮ್ಮ ಮಕ್ಕಳು ನಿಮ್ಮ ಗದ್ಯ, ಪದ್ಯ ಮರೆತು ದೇಶಭಕ್ತಿಯ ಪಾಠ ಕಲಿಯಲಿ. ಶ್ರೀಕೃಷ್ಣ, ಕುವೆಂಪು ಹೇಳಿದಂತೆ ‘ಸರ್ವೇ ಜನೋ ಸುಖಿನೋಭವಂತು’, ‘ಮನುಜಮತ ವಿಶ್ವಪಥ’ ಎಂಬುದನ್ನು ನಮ್ಮ ಮಕ್ಕಳು ತಿಳಿಯಲಿ. ನಿಮ್ಮಂಥ ದುರುಳರು ಅಳಿಯಲಿ’ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಕೊನೆಯಲ್ಲಿ ‘ಸಹಿಷ್ಣು ಹಿಂದೂ’ ಎಂದು ಬರೆಯಲಾಗಿದೆ.