ಈ ಹಿಂದೆ ಪೊಲೀಸ್ ಇಲಾಖೆಯಿಂದ ಮಹಾಂತೇಶ್ವರ ರಸ್ತೆಯಿಂದ ಹೋಗುವ ವಾಹನಗಳು ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಮೂಲಕ ಹಾಗೂ ಸುರಹೊನ್ನೆ ಕಡೆಯಿಂದ ಬರುವ ವಾಹನಗಳು ಮಾಜಿ ಶಾಸಕ ಗಂಗಪ್ಪನವರ ಮನೆಯ ತಿರುವಿನ ಮೂಲಕ ಸಂಚರಿಸುವ ನಿಯಮ ಜಾರಿಗೆ ತಂದಿದ್ದರು. ಬಳಿಕ ಅದು ಪಾಲನೆಯಾಗಲಿಲ್ಲ. ಈಗ ಅದೇ ನಿಯಮ ಪಾಲಿಸಿದರೆ ಸಂಚಾರ ನಿಯಂತ್ರಣ ಸಾಧ್ಯ ಎಂದು ಕಸಾಪ ಸದಸ್ಯರಾದ ಜಿ. ನಿಜಲಿಂಗಪ್ಪ, ಚಂದ್ರೇಗೌಡ, ಎಂ.ಎಸ್.ಜಗದೀಶ, ಬಂಡಿ ಈಶ್ವರಪ್ಪ ಅವರ ಅಭಿಪ್ರಾಯ.