<p><strong>ದಾವಣಗೆರೆ:</strong> ಆಧುನಿಕ ಸಮಾಜದಲ್ಲಿ ಆಸ್ತಿ, ಹಣ, ಅಧಿಕಾರ, ಜಾತಿ, ಧರ್ಮಕ್ಕಾಗಿ ಸಂಘರ್ಷ ಹೆಚ್ಚಾಗಿವೆ. ಈ ಕದನ ತಪ್ಪಿಸಲು ವಚನಗಳ ಅನುಷ್ಠಾನವಾಗಬೇಕು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ದೊಡ್ಡಪೇಟೆಯ ವಿರಕ್ತಮಠದಲ್ಲಿ ಬಸವಕೇಂದ್ರ, ಜಗದ್ಗುರು ಮುರುಘಾರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನಡೆದ ವಚನಾನುಷ್ಠಾನ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ದೇಶ– ದೇಶಗಳ ನಡುವಿನ ಯುದ್ಧಗಳನ್ನು ಅಂತ್ಯಗೊಳಿಸಲು ವಚನಗಳ ಪಾಲನೆ ಅವಶ್ಯವಿದೆ. ಬಸವಾದಿ ಶರಣರ ವಚನ ನಮಗೆ ಪಚನವಾದರೆ ಕದನವೇ ಇರುವುದಿಲ್ಲ. ಬದಲಾಗಿ ಸ್ವರ್ಗ ಸೃಷ್ಟಿಯಾಗುತ್ತದೆ’ ಎಂದರು.</p>.<p>‘ಜೀವಂತವಾಗಿರುವಾಗಲೇ ಸ್ವರ್ಗ– ನರಕವನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎಂಬುದನ್ನು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಬಸವಣ್ಣನವರ ವಚನ ಹೇಳುತ್ತದೆ. ವಚನಗಳನ್ನು ಓದುವುದು ಮಾತ್ರವಲ್ಲದೇ, ಬದುಕಿನಲ್ಲಿ ಪಾಲಿಸಬೇಕು. ವಚನಗಳಲ್ಲಿನ ಅರಿವು, ಆಚಾರ, ಅನುಭಾವದಿಂದ ವ್ಯಕ್ತಿತ್ವದಲ್ಲಿ ಸುಧಾರಣೆ ಕಾಣಬಹುದು’ ಎಂದರು.</p>.<p>‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಈ ಸಪ್ತಶೀಲ ವಚನ ಪಾಲಿಸಿದರೆ ಬದುಕು ಭವ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಭಕ್ತಿಯ ನಾಡು, ದಾನದ ತವರೂರು, ಕೈಗಾರಿಕೆ, ವ್ಯಾಪಾರೋದ್ಯಮಕ್ಕೆ ಹೆಸರಾದ ದಾವಣಗೆರೆಯಲ್ಲಿನ ವಿರಕ್ತಮಠದಲ್ಲಿ ತಿಂಗಳಿಡೀ ಪ್ರವಚನ ನಡೆಯಲಿದೆ. ಹೆಚ್ಚಿನ ಭಕ್ತರು ಭಾಗವಹಿಸಬೇಕು’ ಎಂದು ಪ್ರವಚನಕಾರ ಬಿ.ಎಂ.ಪಂಚಾಕ್ಷರಿ ಶಾಸ್ತ್ರಿ ಮನವಿ ಮಾಡಿದರು.</p>.<p>ಮುಖಂಡರಾದ ಎಂ.ಜಯಕುಮಾರ್, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಹಾಸಭಾವಿ ಕರಿಬಸಪ್ಪ, ಚಿಗಟೇರಿ ಜಯದೇವ, ವೀರಯ್ಯ ಕಾಡದೇವರ ಮಠ, ನಾಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಇದ್ದರು.</p>.<div><blockquote>ಯುವಜನತೆ ನಟರು ಕ್ರಿಕೆಟ್ ಆಟಗಾರರ ಮೇಲೆ ಅತಿಯಾದ ಅಭಿಮಾನ ಹೊಂದುವುದು ಸರಿಯಲ್ಲ. ಶ್ರಮ ವಹಿಸಿ ಅಭ್ಯಾಸದಲ್ಲಿ ತೊಡಗಿದರೆ ಸರ್ಕಾರ ಮಾತ್ರವಲ್ಲದೇ ಆಯಾ ಸಮುದಾಯಗಳೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತವೆ </blockquote><span class="attribution">ದಿನೇಶ್ ಶೆಟ್ಟಿ ‘ಧೂಡಾ’ ಅಧ್ಯಕ್ಷ</span></div>.<h2>ವಚನ ಚಳವಳಿಗೆ ಕೊಡುಗೆ ನೀಡಿದ ನೆಲ </h2>.<p>ದಾವಣಗೆರೆಯ ಮಣ್ಣಿಗೆ ವಿಶೇಷ ಗುಣ ಇದೆ. ವಚನ ಚಳವಳಿಗೆ ಈ ನೆಲವು ಸಾಕಷ್ಟು ಕೊಡುಗೆ ನೀಡಿದೆ. ಮುರುಘಾ ಮಠವೂ ವಚನ ಚಳವಳಿಗೆ ಪ್ರೋತ್ಸಾಹ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು. ವಚನಗಳನ್ನು ರಚಿಸಿದಂತೆ ಅವುಗಳನ್ನು ಉಳಿಸುವುದೂ ಶ್ರೇಷ್ಠ ಕಾರ್ಯವಾಗಿದೆ. ವಚನಗಳು ಜೀವನಾಮೃತವಿದ್ದಂತೆ. ಒಂದೊಂದು ವಚನಗಳಲ್ಲೂ ಜೀವನ ಪ್ರೀತಿ ಸನ್ಮಾರ್ಗದ ಪಾಠವಿದೆ. ಅವುಗಳ ಅಧ್ಯಯನದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಹೇಳಿದರು. </p><p>ಯುವಜನತೆ ಒತ್ತಡ ಮಾನಸಿಕ ತಳಮಳದಿಂದ ಬಳಲುತ್ತಿದೆ. ವಚನ ಸಾಹಿತ್ಯ ಮಹಾತ್ಮರ ಆತ್ಮಚರಿತ್ರೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶಾಸ ವೃದ್ಧಿಯಾಗುತ್ತದೆ. ಮೊಬೈಲ್ ಬಿಟ್ಟು ಅಧ್ಯಯನ ಕ್ರೀಡೆಯಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಆಧುನಿಕ ಸಮಾಜದಲ್ಲಿ ಆಸ್ತಿ, ಹಣ, ಅಧಿಕಾರ, ಜಾತಿ, ಧರ್ಮಕ್ಕಾಗಿ ಸಂಘರ್ಷ ಹೆಚ್ಚಾಗಿವೆ. ಈ ಕದನ ತಪ್ಪಿಸಲು ವಚನಗಳ ಅನುಷ್ಠಾನವಾಗಬೇಕು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ದೊಡ್ಡಪೇಟೆಯ ವಿರಕ್ತಮಠದಲ್ಲಿ ಬಸವಕೇಂದ್ರ, ಜಗದ್ಗುರು ಮುರುಘಾರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನಡೆದ ವಚನಾನುಷ್ಠಾನ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ದೇಶ– ದೇಶಗಳ ನಡುವಿನ ಯುದ್ಧಗಳನ್ನು ಅಂತ್ಯಗೊಳಿಸಲು ವಚನಗಳ ಪಾಲನೆ ಅವಶ್ಯವಿದೆ. ಬಸವಾದಿ ಶರಣರ ವಚನ ನಮಗೆ ಪಚನವಾದರೆ ಕದನವೇ ಇರುವುದಿಲ್ಲ. ಬದಲಾಗಿ ಸ್ವರ್ಗ ಸೃಷ್ಟಿಯಾಗುತ್ತದೆ’ ಎಂದರು.</p>.<p>‘ಜೀವಂತವಾಗಿರುವಾಗಲೇ ಸ್ವರ್ಗ– ನರಕವನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎಂಬುದನ್ನು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಬಸವಣ್ಣನವರ ವಚನ ಹೇಳುತ್ತದೆ. ವಚನಗಳನ್ನು ಓದುವುದು ಮಾತ್ರವಲ್ಲದೇ, ಬದುಕಿನಲ್ಲಿ ಪಾಲಿಸಬೇಕು. ವಚನಗಳಲ್ಲಿನ ಅರಿವು, ಆಚಾರ, ಅನುಭಾವದಿಂದ ವ್ಯಕ್ತಿತ್ವದಲ್ಲಿ ಸುಧಾರಣೆ ಕಾಣಬಹುದು’ ಎಂದರು.</p>.<p>‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಈ ಸಪ್ತಶೀಲ ವಚನ ಪಾಲಿಸಿದರೆ ಬದುಕು ಭವ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಭಕ್ತಿಯ ನಾಡು, ದಾನದ ತವರೂರು, ಕೈಗಾರಿಕೆ, ವ್ಯಾಪಾರೋದ್ಯಮಕ್ಕೆ ಹೆಸರಾದ ದಾವಣಗೆರೆಯಲ್ಲಿನ ವಿರಕ್ತಮಠದಲ್ಲಿ ತಿಂಗಳಿಡೀ ಪ್ರವಚನ ನಡೆಯಲಿದೆ. ಹೆಚ್ಚಿನ ಭಕ್ತರು ಭಾಗವಹಿಸಬೇಕು’ ಎಂದು ಪ್ರವಚನಕಾರ ಬಿ.ಎಂ.ಪಂಚಾಕ್ಷರಿ ಶಾಸ್ತ್ರಿ ಮನವಿ ಮಾಡಿದರು.</p>.<p>ಮುಖಂಡರಾದ ಎಂ.ಜಯಕುಮಾರ್, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಹಾಸಭಾವಿ ಕರಿಬಸಪ್ಪ, ಚಿಗಟೇರಿ ಜಯದೇವ, ವೀರಯ್ಯ ಕಾಡದೇವರ ಮಠ, ನಾಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಇದ್ದರು.</p>.<div><blockquote>ಯುವಜನತೆ ನಟರು ಕ್ರಿಕೆಟ್ ಆಟಗಾರರ ಮೇಲೆ ಅತಿಯಾದ ಅಭಿಮಾನ ಹೊಂದುವುದು ಸರಿಯಲ್ಲ. ಶ್ರಮ ವಹಿಸಿ ಅಭ್ಯಾಸದಲ್ಲಿ ತೊಡಗಿದರೆ ಸರ್ಕಾರ ಮಾತ್ರವಲ್ಲದೇ ಆಯಾ ಸಮುದಾಯಗಳೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತವೆ </blockquote><span class="attribution">ದಿನೇಶ್ ಶೆಟ್ಟಿ ‘ಧೂಡಾ’ ಅಧ್ಯಕ್ಷ</span></div>.<h2>ವಚನ ಚಳವಳಿಗೆ ಕೊಡುಗೆ ನೀಡಿದ ನೆಲ </h2>.<p>ದಾವಣಗೆರೆಯ ಮಣ್ಣಿಗೆ ವಿಶೇಷ ಗುಣ ಇದೆ. ವಚನ ಚಳವಳಿಗೆ ಈ ನೆಲವು ಸಾಕಷ್ಟು ಕೊಡುಗೆ ನೀಡಿದೆ. ಮುರುಘಾ ಮಠವೂ ವಚನ ಚಳವಳಿಗೆ ಪ್ರೋತ್ಸಾಹ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು. ವಚನಗಳನ್ನು ರಚಿಸಿದಂತೆ ಅವುಗಳನ್ನು ಉಳಿಸುವುದೂ ಶ್ರೇಷ್ಠ ಕಾರ್ಯವಾಗಿದೆ. ವಚನಗಳು ಜೀವನಾಮೃತವಿದ್ದಂತೆ. ಒಂದೊಂದು ವಚನಗಳಲ್ಲೂ ಜೀವನ ಪ್ರೀತಿ ಸನ್ಮಾರ್ಗದ ಪಾಠವಿದೆ. ಅವುಗಳ ಅಧ್ಯಯನದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಹೇಳಿದರು. </p><p>ಯುವಜನತೆ ಒತ್ತಡ ಮಾನಸಿಕ ತಳಮಳದಿಂದ ಬಳಲುತ್ತಿದೆ. ವಚನ ಸಾಹಿತ್ಯ ಮಹಾತ್ಮರ ಆತ್ಮಚರಿತ್ರೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶಾಸ ವೃದ್ಧಿಯಾಗುತ್ತದೆ. ಮೊಬೈಲ್ ಬಿಟ್ಟು ಅಧ್ಯಯನ ಕ್ರೀಡೆಯಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>