‘ಚುನಾವಣೆಗೆ ಪಕ್ಷದಿಂದಲೂ ಹಣ ಕೇಳಿಲ್ಲ. ಪಕ್ಷವೂ ನಮಗೆ ಹಣ ಕೊಟ್ಟಿಲ್ಲ. ನಾವು ಯಾರಿಗೂ ಹಣ ಹಂಚಿಲ್ಲ. ₹ 500 ಕೊಟ್ಟಿದ್ರೆ ಗೆಲ್ಲುತ್ತಿದ್ರಿ ಎಂದು ಕಾರ್ಯಕರ್ತ ಹೇಳಿರುವುದು ಸುಳ್ಳು. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ ಹಾಗೂ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಂದಲೇ ಕ್ಷೇತ್ರದಲ್ಲಿ 6 ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ. ನಮ್ಮ ವಿರೋಧಿಗಳು ಬೇಕಂತಲೇ ನಕಲಿ ಆಡಿಯೊ ಮಾಡಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.