<p><strong>ಹುಬ್ಬಳ್ಳಿ:</strong> ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಎಐ ಕನೆಕ್ಟ್’ ಎಂಬ ಕೃತಕ ಬುದ್ಧಿಮತ್ತೆ (ಎಐ) ಪ್ರದರ್ಶನದಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎ.ಎಂ. ಖಾನ್, ‘ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯಕ್ರಮ’ ಎಂದು ಶ್ಲಾಘಿಸಿದರು.</p>.<p>ಪ್ರಾಯೋಗಿಕ ಎಐ ಪರಿಕರಗಳ ಪ್ರದರ್ಶನ, ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ಎಐ ಆಧಾರಿತ ಮಾದರಿಗಳು, ಎಐ ಪ್ರವೃತ್ತಿಗಳು, ನೈತಿಕತೆ ಮತ್ತು ಅನ್ವಯಗಳ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ವಿವರಣೆ ನೀಡಿದರು.</p>.<p>ಆರೋಗ್ಯ, ಶಿಕ್ಷಣ, ವ್ಯವಹಾರ ವಿಶ್ಲೇಷಣೆ, ರೋಬೊಟ್, ಸಂವಹನ ಮತ್ತಿತರ ನಿತ್ಯ ಜೀವನದ ಸಂಗತಿಗಳಲ್ಲಿ ಕೃತಕ ಬುದ್ಧಿಮತ್ತೆಗಳು ಹೇಗೆ ಆಮೂಲಾಗ್ರವಾಗಿ ಬದಲಾವಣೆ ತರುತ್ತಿವೆ ಎಂಬ ಅಂಶವನ್ನು ಪ್ರದರ್ಶನವು ತೆರೆದಿಟ್ಟಿತು.</p>.<p>ಬೋಧಕ ಸಿಬ್ಬಂದಿ ಶಿಲ್ಪಾ ಸವದತ್ತಿ, ಮಹೇಶ ಹುಡೇದ, ಶ್ರೀದೇವಿ ಅರಳಿಕಟ್ಟಿ, ರಮಾಕಾಂತ ದೇವಗೋಜಿ, ಬಸಿತ್ ಬಿನ್ನಲ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಎಐ ಕನೆಕ್ಟ್’ ಎಂಬ ಕೃತಕ ಬುದ್ಧಿಮತ್ತೆ (ಎಐ) ಪ್ರದರ್ಶನದಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎ.ಎಂ. ಖಾನ್, ‘ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯಕ್ರಮ’ ಎಂದು ಶ್ಲಾಘಿಸಿದರು.</p>.<p>ಪ್ರಾಯೋಗಿಕ ಎಐ ಪರಿಕರಗಳ ಪ್ರದರ್ಶನ, ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ಎಐ ಆಧಾರಿತ ಮಾದರಿಗಳು, ಎಐ ಪ್ರವೃತ್ತಿಗಳು, ನೈತಿಕತೆ ಮತ್ತು ಅನ್ವಯಗಳ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ವಿವರಣೆ ನೀಡಿದರು.</p>.<p>ಆರೋಗ್ಯ, ಶಿಕ್ಷಣ, ವ್ಯವಹಾರ ವಿಶ್ಲೇಷಣೆ, ರೋಬೊಟ್, ಸಂವಹನ ಮತ್ತಿತರ ನಿತ್ಯ ಜೀವನದ ಸಂಗತಿಗಳಲ್ಲಿ ಕೃತಕ ಬುದ್ಧಿಮತ್ತೆಗಳು ಹೇಗೆ ಆಮೂಲಾಗ್ರವಾಗಿ ಬದಲಾವಣೆ ತರುತ್ತಿವೆ ಎಂಬ ಅಂಶವನ್ನು ಪ್ರದರ್ಶನವು ತೆರೆದಿಟ್ಟಿತು.</p>.<p>ಬೋಧಕ ಸಿಬ್ಬಂದಿ ಶಿಲ್ಪಾ ಸವದತ್ತಿ, ಮಹೇಶ ಹುಡೇದ, ಶ್ರೀದೇವಿ ಅರಳಿಕಟ್ಟಿ, ರಮಾಕಾಂತ ದೇವಗೋಜಿ, ಬಸಿತ್ ಬಿನ್ನಲ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>