ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಅಮರಗೋಳ | ಗಿಜಿಗುಡುವ ಮಾರುಕಟ್ಟೆ: ಲಕ್ಷಾಂತರ ವಹಿವಾಟು

Published : 9 ಜೂನ್ 2025, 6:38 IST
Last Updated : 9 ಜೂನ್ 2025, 6:38 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ತರಕಾರಿ ಮಾರಾಟ
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ತರಕಾರಿ ಮಾರಾಟ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ತರಕಾರಿ ಖರೀದಿಸಿ ಆಟೊದಲ್ಲಿ ಹಾಕುತ್ತಿರುವುದು

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ತರಕಾರಿ ಖರೀದಿಸಿ ಆಟೊದಲ್ಲಿ ಹಾಕುತ್ತಿರುವುದು

  –ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವೃದ್ಧರೊಬ್ಬರು ತರಕಾರಿಯನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು ಕಂಡು ಬಂದಿತು

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವೃದ್ಧರೊಬ್ಬರು ತರಕಾರಿಯನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು ಕಂಡು ಬಂದಿತು   

   –ಪ್ರಜಾವಾಣಿ ಚಿತ್ರ: ಗುರು ಹಬೀಬ

ಮಹಿಳೆಯೊಬ್ಬರು ವಾಹನದಲ್ಲಿ ತರಕಾರಿಯನ್ನು ತೆಗೆದುಕೊಂಡು ಹೋಗುವಾಗ ಕಂಡಿದ್ದು ಹೀಗೆ.... –

ಮಹಿಳೆಯೊಬ್ಬರು ವಾಹನದಲ್ಲಿ ತರಕಾರಿಯನ್ನು ತೆಗೆದುಕೊಂಡು ಹೋಗುವಾಗ ಕಂಡಿದ್ದು ಹೀಗೆ.... –

ಪ್ರಜಾವಾಣಿ ಚಿತ್ರ: ಗುರು ಹಬೀಬ 

ತರಕಾರಿ ಹರಾಜು ಸಗಟು ವ್ಯಾಪಾರದ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಸಿದ ರೈತರಿಗೆ ಅರ್ಧ ಹಣವನ್ನು ಕೊಡುತ್ತೇವೆ. ಉಳಿದ ಹಣವನ್ನು ಮತ್ತೊಂದು ದಿನ ಕೊಡುತ್ತೇವೆ. ಇದು ಹೀಗೆಯೇ ನಡೆಯುತ್ತದೆ ‌
ಇಮ್ತಿಯಾಜ್‌ ಸವಣೂರು ತರಕಾರಿ ಸಗಟು ವ್ಯಾಪಾರಿ ಎಪಿಎಂಸಿ
ಗೋಕಾಕ್‌ನ ಮಮದಾಪುರ ಗ್ರಾಮದಿಂದ ಬೀಟ್ರೂಟ್ ತರುತ್ತೇವೆ. ದಲ್ಲಾಳಿಗಳು ಹೋಲ್‌ಸೆಲ್‌ನಲ್ಲಿ ಖರೀದಿಸುತ್ತಾರೆ. ಲಾಭ ಅಷ್ಟಕಷ್ಟೆ. 6 ಕ್ವಿಂಟಾಲ್‌ ಬೀಟ್ರೊಟ್‌ ಮಾರಾಟ ಮಾಡಿದೆ. ₹5 ಸಾವಿರ ಕೊಟ್ಟಿದ್ದಾರೆ. 
ಶಂಕರ್‌ ರೈತ ಗೋಕಾಕ್‌. 
ಎಪಿಎಂಸಿಯ ತರಕಾರಿ ವಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಮುಖ್ಯ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಲ್ಲ. ನೀರಿನ ಟ್ಯಾಂಕ್‌ ಇದೆ. ಆದರೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಪೋಲಿಸ್‌ ಠಾಣೆಯನ್ನು ಆರಂಭಿಸಬೇಕು. 
ವಿಶ್ವನಾಥ ತರಕಾರಿ ವ್ಯಾಪಾರಿ. ಎಪಿಎಂಸಿ
‘ಲಕ್ಷಾಂತರ ವಹಿವಾಟು: ಅಭಿವೃದ್ಧಿ ಆಗಬೇಕಿದೆ’
‘ಕಳೆದ ಎರಡು ವರ್ಷಗಳಿಂದ ಅಮರಗೋಳದ ಎಪಿಎಂಸಿ ಅಧ್ಯಕ್ಷ ಸ್ಥಾನ ಖಾಲಿಯಿದ್ದು ಇದುವರೆಗೆ ಚುನಾವಣೆ ನಡೆದಿಲ್ಲ. ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಎಪಿಎಂಸಿಯ ನಿತ್ಯ ಲಕ್ಷಾಂತರ ವಹಿವಾಟು ನಡೆಯುತ್ತದೆ. ಇನ್ನೂ ಕೆಲ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಮುಖ್ಯ ರಸ್ತೆ ಸೇರಿದಂತೆ ಜನದಟ್ಟಣೆಯ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪೊಲೀಸ್‌ ಸ್ಟೇಷನ್‌ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದ್ಯಾವುದೂ ಆಗಿಲ್ಲ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ. 
ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ: ಶ್ರೀಧರ್‌ ಮನ್ನೂರು
‘ಅಮರಗೋಳದ ಎಪಿಎಂಸಿಯಲ್ಲಿ ನಿತ್ಯ 30ಕ್ಕೂ ಹೆಚ್ಚು ಟನ್‌ ತರಕಾರಿ ಮಾರಾಟವಾಗುವ ಮೂಲಕ ಅಂದಾಜು ₹25 ಲಕ್ಷ ವಹಿವಾಟು ನಡೆಯುತ್ತದೆ. ರೈತರಿಗೆ ಹಾಗೂ ಹಮಾಲರಿಗಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕಿದೆ. ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕಾಗಿ ಸಮಿತಿಯಿಂದ ಜಾಗ ನೀಡಲಾಗಿದೆ. ‍‍‍ಪೊಲೀಸ್‌ ಇಲಾಖೆಯವರು ಕಟ್ಟಡ ನಿರ್ಮಿಸಬೇಕು. ಎಪಿಎಂಸಿ ಪ್ರಾಂಗಣವು 434.04 ಎಕರೆ ವಿಸ್ತೀರ್ಣ ಹೊಂದಿದ್ದು ಈಗಾಗಲೇ ಪ್ರಾಂಗಣದ 3 ಗೇಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮಾರುಕಟ್ಟೆ ಪ್ರಾಂಗಣದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಅಮರಗೋಳದ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಶ್ರೀಧರ್‌ ಮನ್ನೂರು.  ‘ಎಪಿಎಂಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸುವುದು ಸರ್ಕಾರದ ನಿರ್ಣಯ. ಮಾರುಕಟ್ಟೆ ಪ್ರಾಂಗಣದಲ್ಲಿ ರೈತಭವನ ಶುದ್ಧ ಕುಡಿಯುವ ನೀರಿನ ಘಟಕ ಶೌಚಾಲಯ ವ್ಯವಸ್ಥೆ ಹಮಾಲರಿಗೆ ವಸತಿ ಸೌಲಭ್ಯ ಸೇರಿದಂತೆ ಕೆಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಕ್ರಮವಹಿಸಲಾಗಿದೆ’ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT