ಶನಿವಾರ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಶ್ರೀಶೈಲ್ ನರಗುಂದ ಹೊಸೂರು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಮಾಸ್ಕ್ ಧರಿಸದೆ ಕಾರು ಚಲಾಯಿಸಿಕೊಂಡು ಬಂದಉತ್ತರ ಪ್ರದೇಶದ ಗೋರಖಪುರದ ಪ್ರಕಾಶ ಸಿಂಗ್ ಎಂಬಾತನನ್ನು ಪ್ರಯಾಣದ ಪರವಾನಗಿ ಬಗ್ಗೆ ವಿಚಾರಿಸಿದಾಗ; ಪ್ರಕಾಶ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿ ಬಂದು ಆರೋಪಿಯನ್ನು ಕಾರು ಸಮೇತ ಬಂಧಿಸಿದ್ದಾರೆ.