ಬದ್ಕು ಬದಲಾಗಿಲ್ರಿ: ‘ಬೆಳಿಗ್ಗಿ ನಿದ್ದಿಯಿಂದ ಏಳಾಕೆ ಮುಂಚೆ ಓಣ್ಯಾಗೆ ನೀರು ನುಗ್ಗೈತ್ರಿ. ಎದ್ವೊ ಬಿದ್ವೊ ಅಂತ ನೆಲದಲ್ಲಿದ್ದ ಸಾಮಾನುಗಳನ್ನು ಮ್ಯಾಲಕ್ಕೆ ಇಟ್ಟೆವ್ರಿ. ಆದ್ರೂ, ಪಾತ್ರಿ, ಮೇವು, ಕೆಲ ಸಾಮಾನು ನೀರಿನ್ಯಾಗ ತೋಯ್ದಾವ್ರಿ. ಮಿನಿಸ್ಟ್ರು, ಶಾಸಕ್ರು, ಪಂಚಾಯ್ತಿಯವ್ರ ಹಿಂಗ ಬಂದ್, ಹಂಗ ನೋಡ್ಕೊಂಡ್ ಹೋಗ್ತಾರೆ. ಆದ್ರ, ನಮ್ಮ ಬದ್ಕು ಮಾತ್ರ ಬದಲಾಗಿಲ್ರಿ’ ಎಂದು ಕಲ್ಲವ್ವ ಅವರ ಪಕ್ಕದ ಮನೆಯ ಮೀನಾಕ್ಷಿ ಬೂದಣ್ಣವರ ಅಸಮಾಧಾನ ವ್ಯಕ್ತಪಡಿಸಿದರು.