<p><strong>ಹುಬ್ಬಳ್ಳಿ:</strong> ‘ಜ್ಞಾನದ ಕಣಜವಾಗಿರುವ ಭಗವದ್ಗೀತೆಯನ್ನು ಶಾಲೆ, ಕಾಲೇಜುಗಳಲ್ಲಿ ಕಲಿಸುವ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ. ಶಾಲಾ ಹಂತದಲ್ಲಿಯೇ ಗೀತೆಯ ಸಾರವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ಭಗವದ್ಗೀತಾ ಜ್ಞಾನಲೋಕ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಭಗವದ್ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವ ಭ್ರಾತೃತ್ವ ಸಂದೇಶ, ನೈತಿಕ, ಮಾನವೀಯ, ಜೀವನ ಮೌಲ್ಯಗಳನ್ನು ಭಗವದ್ಗೀತೆ ನೀಡಿದೆ. ಇದು ಜ್ಞಾನದ ಕಣಜ’ ಎಂದರು.</p>.<p>ಆಧುನಿಕತೆಯ ಭರಾಟೆಯಲ್ಲಿ ದೇವರ ಮೇಲಿನ ವಿಶ್ವಾಸ, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಯುವ ಪೀಳಿಗೆ ಮರೆತಿದೆ. ಭಗವದ್ಗೀತೆಯನ್ನು ಬೋಧಿಸದಿದ್ದರೆ ನವಭಾರತ ನಿರ್ಮಾಣ ಕಷ್ಟ ಎಂದು ಹೇಳಿದರು.</p>.<p>ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮದ ದುರುಪಯೋಗವಾಗುತ್ತಿದೆ. ಮನೆ ಮನಗಳಲ್ಲಿ ಗೀತೆಯ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಹಿಂದೂಗಳ ಮನೆಯಲ್ಲಿ ಧರ್ಮದ ಅನುಷ್ಠಾನ ಆಗಬೇಕು ಎಂದರು.</p>.<p>ಕಾವ್ಯ ಚೂಡಾಮಣಿ ವೇಣೀಮಾಧವಶಾಸ್ತ್ರಿ ಬಿ.ಜೋಶಿ ಮಾತನಾಡಿ, ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗದ ಮೂಲಕ ಭಗವಂತನನ್ನು ಕಾಣಬಹುದು. ಶ್ರದ್ಧಾಭಕ್ತಿಯಿಂದ ನಡೆದುಕೊಂಡರೆ ದೇವರ ಅನುಗ್ರಹಕ್ಕೆ ಪಾತ್ರವಾಗಬಹುದು ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಸಂದೇಶ ಪ್ರಸಾರ ಮಾಡಲಾಯಿತು. ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಇಂದಿಗೂ ಉತ್ತಮ ಜೀವನಕ್ಕೆ ದಾರಿದೀಪವಾಗಿವೆ. ಸನಾತನ ಹಿಂದೂ ಧರ್ಮಕ್ಕೆ ಭಗವದ್ಗೀತೆ ಆಧಾರವಾಗಿದೆ’ ಎಂದು ರಾಜ್ಯಪಾಲರು ಸಂದೇಶದಲ್ಲಿ ತಿಳಿಸಿದರು.</p>.<p>‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವೆ ಅನನ್ಯವಾದದ್ದು. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಹೇಳಿದರು.</p>.<p>ಸ್ನೇಹಾ ಶಿಕಾರಿಪುರ ಮಾತನಾಡಿದರು. ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ಉಸ್ತುವಾರಿ ನಿರ್ಮಲಾ, ವಾಚಸ್ಪತಿ ಆರ್.ಜೋಶಿ, ಸೂರ್ಯನಾರಾಯಣ ಭಟ್, ಕಂಠಪಲ್ಲಿ ಸಮೀರಣಾಚಾರ್ಯ, ವೀಣಾ, ಜಯಂತಿ, ಲೀಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಜ್ಞಾನದ ಕಣಜವಾಗಿರುವ ಭಗವದ್ಗೀತೆಯನ್ನು ಶಾಲೆ, ಕಾಲೇಜುಗಳಲ್ಲಿ ಕಲಿಸುವ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ. ಶಾಲಾ ಹಂತದಲ್ಲಿಯೇ ಗೀತೆಯ ಸಾರವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಹೇಳಿದರು.</p>.<p>ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ಭಗವದ್ಗೀತಾ ಜ್ಞಾನಲೋಕ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಭಗವದ್ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವ ಭ್ರಾತೃತ್ವ ಸಂದೇಶ, ನೈತಿಕ, ಮಾನವೀಯ, ಜೀವನ ಮೌಲ್ಯಗಳನ್ನು ಭಗವದ್ಗೀತೆ ನೀಡಿದೆ. ಇದು ಜ್ಞಾನದ ಕಣಜ’ ಎಂದರು.</p>.<p>ಆಧುನಿಕತೆಯ ಭರಾಟೆಯಲ್ಲಿ ದೇವರ ಮೇಲಿನ ವಿಶ್ವಾಸ, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಯುವ ಪೀಳಿಗೆ ಮರೆತಿದೆ. ಭಗವದ್ಗೀತೆಯನ್ನು ಬೋಧಿಸದಿದ್ದರೆ ನವಭಾರತ ನಿರ್ಮಾಣ ಕಷ್ಟ ಎಂದು ಹೇಳಿದರು.</p>.<p>ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮದ ದುರುಪಯೋಗವಾಗುತ್ತಿದೆ. ಮನೆ ಮನಗಳಲ್ಲಿ ಗೀತೆಯ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಹಿಂದೂಗಳ ಮನೆಯಲ್ಲಿ ಧರ್ಮದ ಅನುಷ್ಠಾನ ಆಗಬೇಕು ಎಂದರು.</p>.<p>ಕಾವ್ಯ ಚೂಡಾಮಣಿ ವೇಣೀಮಾಧವಶಾಸ್ತ್ರಿ ಬಿ.ಜೋಶಿ ಮಾತನಾಡಿ, ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗದ ಮೂಲಕ ಭಗವಂತನನ್ನು ಕಾಣಬಹುದು. ಶ್ರದ್ಧಾಭಕ್ತಿಯಿಂದ ನಡೆದುಕೊಂಡರೆ ದೇವರ ಅನುಗ್ರಹಕ್ಕೆ ಪಾತ್ರವಾಗಬಹುದು ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಸಂದೇಶ ಪ್ರಸಾರ ಮಾಡಲಾಯಿತು. ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಇಂದಿಗೂ ಉತ್ತಮ ಜೀವನಕ್ಕೆ ದಾರಿದೀಪವಾಗಿವೆ. ಸನಾತನ ಹಿಂದೂ ಧರ್ಮಕ್ಕೆ ಭಗವದ್ಗೀತೆ ಆಧಾರವಾಗಿದೆ’ ಎಂದು ರಾಜ್ಯಪಾಲರು ಸಂದೇಶದಲ್ಲಿ ತಿಳಿಸಿದರು.</p>.<p>‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವೆ ಅನನ್ಯವಾದದ್ದು. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಹೇಳಿದರು.</p>.<p>ಸ್ನೇಹಾ ಶಿಕಾರಿಪುರ ಮಾತನಾಡಿದರು. ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ಉಸ್ತುವಾರಿ ನಿರ್ಮಲಾ, ವಾಚಸ್ಪತಿ ಆರ್.ಜೋಶಿ, ಸೂರ್ಯನಾರಾಯಣ ಭಟ್, ಕಂಠಪಲ್ಲಿ ಸಮೀರಣಾಚಾರ್ಯ, ವೀಣಾ, ಜಯಂತಿ, ಲೀಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>