'ಈಶ್ವರಪ್ಪ ಅವರ ವಿಚಾರ ಮುಗಿದ ಅಧ್ಯಾಯ. ಯಾರೋ ಕೆಲವರು ಪಕ್ಷ ತೊರೆದರೆ ಯಾವುದೇ ತೊಂದರೆ ಇಲ್ಲ. ಕೇಂದ್ರ ಚುನಾವಣಾ ಸಮಿತಿಯು ಸಮರ್ಥ ಅಭ್ಯರ್ಥಿ ಹುಡುಕಿ, ಟಿಕೆಟ್ ನೀಡಿದೆ. ಅಂತೆಯೇ, ಕೇಂದ್ರದಲ್ಲಿ ಸಮರ್ಥವಾಗಿ ಸಚಿವ ಸ್ಥಾನ ನಿರ್ವಹಿಸಿದ, ಎಲ್ಲ ಸಮಾಜವನ್ನೂ ಒಗ್ಗೂಡಿಸಿಕೊಂಡು ಬಂದ ಪ್ರಲ್ಹಾದ ಜೋಶಿ ಅವರಿಗೆ ಆದ್ಯತೆ ನೀಡಲಾಯಿತು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಪ್ರಲ್ಹಾದ ಜೋಶಿ ಅವರು ಈ ಭಾಗಕ್ಕೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ನಾನು ಸಚಿವನಾಗಿದ್ದಾಗ ಹುಬ್ಬಳ್ಳಿ-ಧಾರವಾಡದ ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ನೀಡಿದ್ದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಅಂತರದಿಂದ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಲು ಜನರೇ ಉತ್ಸುಕರಾಗಿದ್ದಾರೆ' ಎಂದರು.
'ಹಾಲುಮತ ಸಮಾಜ ಸೇರಿದಂತೆ ಎಲ್ಲಾ ಸಮಾಜದವರೊಂದಿಗೂ ಸಭೆ ನಡೆಸಲಾಗಿದೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾವು ಗ್ಯಾರಂಟಿ ಬಗ್ಗೆ ಯೋಚಿಸುತ್ತಿಲ್ಲ, ದೇಶದ ಭವಿಷ್ಯದ ಬಗ್ಗೆ ಯೋಚಿಸಿರುವುದಾಗಿ ಮಹಿಳೆಯರು ಹೇಳುತ್ತಿದ್ದಾರೆ' ಎಂದರು.
'ರಜಾ ದಿನಗಳಲ್ಲಿ ಚುನಾವಣೆ ನಡೆಸಿದರೆ, ಬಹುತೇಕರು ಮತದಾನ ಮಾಡವುದಿಲ್ಲ. ಈ ಬಗ್ಗೆ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಂಡರೆ ಮತದಾನ ಪ್ರಮಾಣ ಹೆಚ್ಚಾಗಲಿದೆ' ಎಂದು ಅವರು ತಿಳಿಸಿದರು