‘ಸರ್ಕಾರದ ಆಸ್ತಿಯಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಅದಿರು ಗಣಿ, ಬಂದರು, ಕ್ರೀಡಾಂಗಣ ಹೀಗೆ ಪ್ರತಿಯೊಂದನ್ನು ನಿರ್ಹಹಣೆ ಹೆಸರಲ್ಲಿ ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಆಸ್ತಿಯನ್ನು, ಇವರು ಏಳು ವರ್ಷದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಖಾಸಗೀಕರಣ ಯಾರಿಗಾಗಿ’ ಎಂದು ಪ್ರಶ್ನಿಸಿದ, ಎಚ್.ಕೆ. ಪಾಟೀಲ, ‘ಜನರ ಹಕ್ಕು ಕಿತ್ತುಕೊಳ್ಳುವ ಹುನ್ನಾರ ಇದಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.