‘ದಕ್ಷಿಣ ಭಾರತದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುನಲ್ಲಿ ಕಪ್ಪು ಎರೆ ಮಣ್ಣಿನ ಜಮೀನು ಮುಂಗಾರಿನಲ್ಲಿ ಡಿಡಿಸಿಸಿ–1 ಬೆಳೆಯಲು ಸೂಕ್ತ. ಬಿಳಿ ಹತ್ತಿ ತಳಿಗೆ ಹೋಲಿಸಿದಲ್ಲಿ ಇದು 1.3ಪಟ್ಟು ಇಳುವರಿ ಅಧಿಕ ಮತ್ತು ಕೀಟ, ರೋಗ ನಿರೋಧಕ ಗುಣವನ್ನು ಹೊಂದಿದೆ. ರಿಜಿಸ್ಟ್ರೀ ಆಫ್ ಸ್ಯಾರೀಸ್ ಸಂಸ್ಥೆ ಸದ್ಯ ಇದನ್ನು ಬೆಂಗಳೂರು ಭಾಗದಲ್ಲಿ ಬೆಳೆಯಲಿದೆ’ ಎಂದು ಹತ್ತಿ ವಿಭಾಗದ ಹಿರಿಯ ವಿಜ್ಞಾನಿ ಡಾ. ರಾಜೇಶ್ ಎಸ್. ಪಾಟೀಲ ವಿವರಿಸಿದರು.