‘ಚರಂಡಿ ನೀರು ಸೇರುವುದನ್ನು ತಡೆದು, ಮಳೆ ನೀರು ಮಾತ್ರ ಸೇರುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಸುತ್ತಲಿನ ಪ್ರದೇಶಗಳಿಂದ ಹಲವು ದಿಕ್ಕುಗಳಿಂದ ಚರಂಡಿ ನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಜಲಕಳೆ ಹೆಚ್ಚಳದ ಜತೆಗೆ, ಜಲಚರ ಪ್ರಾಣಿಗಳು ಸೂರ್ಯನ ಕಿರಣದ ಲಭ್ಯತೆಯ ಕೊರತೆ, ಆಮ್ಲಜನಕದ ಕೊರತೆ ಎದುರಿಸುತ್ತಿವೆ. ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಜಿ. ಹೇಳಿದರು.