ಮುಗಿಬಿದ್ದ ಜನ: ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ನಗರದ ಜನತಾ ಬಜಾರ್, ದುರ್ಗದ ಬೈಲ್, ಶಿರೂರ ಪಾರ್ಕ್, ಸಿದ್ಧೇಶ್ವರ ಪಾರ್ಕ್, ಕೇಶ್ವಾಪುರ ವೃತ್ತ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಹಾಲು, ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಹೊಸೂರು ಕ್ರಾಸ್ನಲ್ಲಿ ಬುಧವಾರದಿಂದ ಪಡಿತರ ವಿತರಣೆ ಆರಂಭವಾಗಿದ್ದು, ಖರೀದಿಸಲು ಜನ ಸಾಲಾಗಿ ನಿಂತಿದ್ದ ಚಿತ್ರಣ ಕಂಡು ಬಂತು.