ಅಗಸ ವೃತ್ತಿಯ 60 ಸಾವಿರ ಜನರಿಗೆ, ಸವಿತಾ ಸಮಾಜದ ವೃತ್ತಿನಿರತ 2.30 ಲಕ್ಷ ಮಂದಿಗೆ ಒಂದು ಬಾರಿ ಪರಿಹಾರ
ವಾಗಿ ರಾಜ್ಯ ಸರ್ಕಾರ ತಲಾ ₹5,000 ಪರಿಹಾರ ಘೋಷಿಸಿತ್ತು. ಅದರಂತೆ, ಎರಡೂ ವರ್ಗದವರಿಂದ 1,31,241 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 20,287 ಸವಿತ ಸಮಾಜದ ವೃತ್ತಿನಿರತರಿಗೆ, 19,887 ಅಗಸರಿಗೆ ಪರಿಹಾರ ದೊರೆತಿದೆ. ಸದ್ಯ 33,732 ಜನರಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಉಳಿದವರ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.