‘ಆಧುನಿಕ ಯುಗದಲ್ಲಿ ಪಾಲಕರು ಮಕ್ಕಳಿಗೆ ಶಾಲೆಯಲ್ಲಿ ಮೊದಲ ಸ್ಥಾನವನ್ನೇ ಪಡೆಯಬೇಕೆಂದು ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಅಸೂಯೆ, ದ್ವೇಷ ಬಿತ್ತಿದ ಹಾಗೆ ಆಗುತ್ತಿದೆ. ಇದರ ಬದಲು ಸಾಹಿತ್ಯ ಓದುವುದನ್ನು ಕಲಿಸಿ, ಶಾಸ್ತ್ರೀಯ ನೃತ್ಯದಲ್ಲಿ ತೊಡಗುವಂತೆ ಮಾಡಿ, ರಂಗಭೂಮಿಯ ಆಸಕ್ತಿ ಬೆಳೆಸಿ. ಇದು ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುತ್ತದೆ’ ಎಂದರು.