ಅಣ್ಣಿಗೇರಿ: ಕೋವಿಡ್ ಮೂರನೇ ಅಲೆಯ ಕಾರಣ ಜ.8, 9ರಂದು ಜರುಗಬೇಕಿದ್ದ ಸ್ಥಳೀಯ ದಾಸೋಹ ಮಠದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ರದ್ದುಪಡಿಸಲಾಗಿದೆ.
ಜಿಲ್ಲಾಡಳಿತದ ಆದೇಶದ ಮೇರೆಗೆ ಜಾತ್ರೆ ರದ್ದುಗೊಳಿಸಲಾಗಿದೆ ಎಂದು ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ, ಜಾತ್ರಾ ಸಮಿತಿ, ನಿರಂತರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.