<p><strong>ಧಾರವಾಡ</strong>: ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಪ್ರದರ್ಶನ ಗಮನ ಸಳೆಯುತ್ತಿದೆ. ಸಸ್ಯಗಳ ‘ಕ್ಯುಆರ್’ ಕೋಡ್ ಹಾಳೆ ಇಡಲಾಗಿದ್ದು, ಸ್ಕ್ಯಾನ್ ಮಾಡಿ ಸಸ್ಯಗಳ ಉಪಯೋಗ ತಿಳಿದುಕೊಳ್ಳಬಹುದು.<br><br> ವಿಶ್ವವಿದ್ಯಾಲಯದ ಸೈದಾಪುರ್ ಫಾರ್ಮನ್ ಹೈಟೆಕ್ ತೋಟಗಾರಿಕೆ ಘಟಕ ಈ ಸಸ್ಯಗಳನ್ನು ಅನಾವರಣಗೊಳಿಸಿದೆ. ಮೇಳದ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. </p>.<p>ಸೈದಾಪುರ ಫಾರ್ಮ್ನಲ್ಲಿ 150 ಕ್ಕೂ ಹೆಚ್ಚು ವಿವಿಧ ಪ್ರಭೇದದ ಸಸ್ಯಗಳಿವೆ. ಈ ಪೈಕಿ ಸುಮಾರು 60 ಔಷಧೀಯ ಸಸ್ಯಗಳು ಮಾರಾಟಕ್ಕೆ ಲಭ್ಯ ಇವೆ. ಸಸಿಗೆ ₹ 30 ರಿಂದ ₹ 80 ದರ ನಿಗದಿಪಡಿಸಲಾಗಿದೆ.</p>.<p>ಲವಂಗ ತುಳಸಿ, ಲೋಳೆಸರ, ಕಕ್ಕೆ, ಗುಲಗಂಜಿ, ನಿಂಬೆ ಹುಲ್ಲು, ಲಾವಂಚ, ಗುಗ್ಗಳ, ಬಸವೆ, ರೋಸಮೇರಿ, ಭೃಂಗರಾಜ, ಶಾತವರಿ, ಕಚೀರ, ಸಪೇದ ಮುಸ್ಲಿ, ಶಂಕಪುಷ್ಟಿ, ನೆಲಬೇವು... ಸಹಿತ ಅನೇಕ ಸಸ್ಯಗಳು ಪ್ರದರ್ಶನದಲ್ಲಿ ಇವೆ. ಮಾಹಿತಿ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದಾರೆ.<br><br> ಮಧುಮೇಹ ನಿಯಂತ್ರಣ, ಜ್ವರ ನಿವಾರಕ, ಅತಿಸಾರ ನಿಯಂತ್ರಣ, ಸೊಳ್ಳೆ ನಿರೋಧಕ, ಮೂತ್ರಕೋಶದ ಕಲ್ಲು, ಹೊಟ್ಟೆ ನೋವು, ರಕ್ತದ ಒತ್ತಡ ನಿಯಂತ್ರಣ, ಪೌಷ್ಟಿಕಾಂಶ ವೃದ್ಧಿ, ನಿದ್ರಾಹೀನತೆ ನಿಯಂತ್ರಣ, ಜಂತುನಾಶಕ ಮೊದಲಾದವುಗಳಿಗೆ ಸಂಬಂಧಿಸಿದ ಔಷಧೀಯ ಗಿಡಗಳಿವೆ.</p>.<p>‘ಮೇಳದಲ್ಲಿ 60 ಔಷಧೀಯ ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಲೋಳೆಸರ, ಇನ್ಸುಲಿನ್ ಗಿಡ, ನೆಲಬೇವು, ತುಳಸಿ, ಚಕ್ರಮಣಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಸರಸ್ವತಿ ಸಂಪಗಾವಿ ತಿಳಿಸಿದರು.</p>.<p>‘ತುಳಸಿ ಎಲೆ, ಬೀಜ ಬೇರುಗಳು ಅಸ್ತಮಾ, ಚರ್ಮರೋಗ, ನೆಗಡಿ, ಕಿವಿನೋವು ಗುಣಪಡಿಸುತ್ತವೆ. ಭೃಂಗರಾಜ ಎಲೆ ಕೇಶವರ್ಧನೆಗೆ ಸಹಕಾರಿಯಾಗಿದೆ. ಈ ಸಸ್ಯಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು. ವೈದ್ಯರ ಸಲಹೆ ಪಡೆದು ಈ ಔಷಧೀಯ ಸಸ್ಯಗಳನ್ನು ಬಳಸಬಹುದು’ ಎಂದು ವಿದ್ಯಾರ್ಥಿಗಳು ತಿಳಿಸಿದರು.</p>.<p>ಮಧುಮೇಹ ನಿರ್ವಹಣೆ, ಮೂತ್ರ ಕೋಶದ ಕಲ್ಲು ಸಮಸ್ಯೆಗೆ ಪರಿಹಾರ, ಬಾಯಿಹುಣ್ಣು ನಿವಾರಣೆ, ತೆಲೆನೋವು ನಿವಾರಣೆ ಮೊದಲಾದವುಗಳಿಗೆ ಔಷಧೀಯ ಸಸ್ಯಗಳ ಮಾಹಿತಿಯನ್ನು ಪ್ರದರ್ಶಿಸಲಾಗಿದೆ.</p>.<div><blockquote>ಮನೆ ಅಂಗಳ ಅಥವಾ ಚಾವಣಿಯ ಕುಂಡಗಳಲ್ಲಿ ಔಷಧೀಯ ಸಸ್ಯ ಬೆಳೆಸಬಹುದು. ಕೆಲವು ಸಸ್ಯಗಳ ಎಲೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ </blockquote><span class="attribution">–ಸರಸ್ವತಿ ಸಂಪಗಾವಿ, ಕೃಷಿ ವಿವಿ ತೋಟಗಾರಿಕೆ ವಿಜ್ಞಾನಿ</span></div>.<div><blockquote>ಔಷಧೀಯ ಸಸ್ಯಗಳ ಪಕ್ಕ ಕ್ಯುಆರ್ ಕೋಡ್ ಇಡುವುದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮಾಹಿತಿ ಫಲಕ ಅಳವಡಿಸಬೇಕಿತ್ತು. ಮೊಬೈಲ್ ಫೋನ್ ಇಲ್ಲದವರೂ ಮಾಹಿತಿ ಪಡೆಯಬಹುದಿತ್ತು </blockquote><span class="attribution">–ವಿಶ್ವನಾಥ ತೆಂಗಳ್ಳಿ, ರೈತ ಕಲಬುರಗಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಪ್ರದರ್ಶನ ಗಮನ ಸಳೆಯುತ್ತಿದೆ. ಸಸ್ಯಗಳ ‘ಕ್ಯುಆರ್’ ಕೋಡ್ ಹಾಳೆ ಇಡಲಾಗಿದ್ದು, ಸ್ಕ್ಯಾನ್ ಮಾಡಿ ಸಸ್ಯಗಳ ಉಪಯೋಗ ತಿಳಿದುಕೊಳ್ಳಬಹುದು.<br><br> ವಿಶ್ವವಿದ್ಯಾಲಯದ ಸೈದಾಪುರ್ ಫಾರ್ಮನ್ ಹೈಟೆಕ್ ತೋಟಗಾರಿಕೆ ಘಟಕ ಈ ಸಸ್ಯಗಳನ್ನು ಅನಾವರಣಗೊಳಿಸಿದೆ. ಮೇಳದ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. </p>.<p>ಸೈದಾಪುರ ಫಾರ್ಮ್ನಲ್ಲಿ 150 ಕ್ಕೂ ಹೆಚ್ಚು ವಿವಿಧ ಪ್ರಭೇದದ ಸಸ್ಯಗಳಿವೆ. ಈ ಪೈಕಿ ಸುಮಾರು 60 ಔಷಧೀಯ ಸಸ್ಯಗಳು ಮಾರಾಟಕ್ಕೆ ಲಭ್ಯ ಇವೆ. ಸಸಿಗೆ ₹ 30 ರಿಂದ ₹ 80 ದರ ನಿಗದಿಪಡಿಸಲಾಗಿದೆ.</p>.<p>ಲವಂಗ ತುಳಸಿ, ಲೋಳೆಸರ, ಕಕ್ಕೆ, ಗುಲಗಂಜಿ, ನಿಂಬೆ ಹುಲ್ಲು, ಲಾವಂಚ, ಗುಗ್ಗಳ, ಬಸವೆ, ರೋಸಮೇರಿ, ಭೃಂಗರಾಜ, ಶಾತವರಿ, ಕಚೀರ, ಸಪೇದ ಮುಸ್ಲಿ, ಶಂಕಪುಷ್ಟಿ, ನೆಲಬೇವು... ಸಹಿತ ಅನೇಕ ಸಸ್ಯಗಳು ಪ್ರದರ್ಶನದಲ್ಲಿ ಇವೆ. ಮಾಹಿತಿ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದಾರೆ.<br><br> ಮಧುಮೇಹ ನಿಯಂತ್ರಣ, ಜ್ವರ ನಿವಾರಕ, ಅತಿಸಾರ ನಿಯಂತ್ರಣ, ಸೊಳ್ಳೆ ನಿರೋಧಕ, ಮೂತ್ರಕೋಶದ ಕಲ್ಲು, ಹೊಟ್ಟೆ ನೋವು, ರಕ್ತದ ಒತ್ತಡ ನಿಯಂತ್ರಣ, ಪೌಷ್ಟಿಕಾಂಶ ವೃದ್ಧಿ, ನಿದ್ರಾಹೀನತೆ ನಿಯಂತ್ರಣ, ಜಂತುನಾಶಕ ಮೊದಲಾದವುಗಳಿಗೆ ಸಂಬಂಧಿಸಿದ ಔಷಧೀಯ ಗಿಡಗಳಿವೆ.</p>.<p>‘ಮೇಳದಲ್ಲಿ 60 ಔಷಧೀಯ ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಲೋಳೆಸರ, ಇನ್ಸುಲಿನ್ ಗಿಡ, ನೆಲಬೇವು, ತುಳಸಿ, ಚಕ್ರಮಣಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಸರಸ್ವತಿ ಸಂಪಗಾವಿ ತಿಳಿಸಿದರು.</p>.<p>‘ತುಳಸಿ ಎಲೆ, ಬೀಜ ಬೇರುಗಳು ಅಸ್ತಮಾ, ಚರ್ಮರೋಗ, ನೆಗಡಿ, ಕಿವಿನೋವು ಗುಣಪಡಿಸುತ್ತವೆ. ಭೃಂಗರಾಜ ಎಲೆ ಕೇಶವರ್ಧನೆಗೆ ಸಹಕಾರಿಯಾಗಿದೆ. ಈ ಸಸ್ಯಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು. ವೈದ್ಯರ ಸಲಹೆ ಪಡೆದು ಈ ಔಷಧೀಯ ಸಸ್ಯಗಳನ್ನು ಬಳಸಬಹುದು’ ಎಂದು ವಿದ್ಯಾರ್ಥಿಗಳು ತಿಳಿಸಿದರು.</p>.<p>ಮಧುಮೇಹ ನಿರ್ವಹಣೆ, ಮೂತ್ರ ಕೋಶದ ಕಲ್ಲು ಸಮಸ್ಯೆಗೆ ಪರಿಹಾರ, ಬಾಯಿಹುಣ್ಣು ನಿವಾರಣೆ, ತೆಲೆನೋವು ನಿವಾರಣೆ ಮೊದಲಾದವುಗಳಿಗೆ ಔಷಧೀಯ ಸಸ್ಯಗಳ ಮಾಹಿತಿಯನ್ನು ಪ್ರದರ್ಶಿಸಲಾಗಿದೆ.</p>.<div><blockquote>ಮನೆ ಅಂಗಳ ಅಥವಾ ಚಾವಣಿಯ ಕುಂಡಗಳಲ್ಲಿ ಔಷಧೀಯ ಸಸ್ಯ ಬೆಳೆಸಬಹುದು. ಕೆಲವು ಸಸ್ಯಗಳ ಎಲೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ </blockquote><span class="attribution">–ಸರಸ್ವತಿ ಸಂಪಗಾವಿ, ಕೃಷಿ ವಿವಿ ತೋಟಗಾರಿಕೆ ವಿಜ್ಞಾನಿ</span></div>.<div><blockquote>ಔಷಧೀಯ ಸಸ್ಯಗಳ ಪಕ್ಕ ಕ್ಯುಆರ್ ಕೋಡ್ ಇಡುವುದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮಾಹಿತಿ ಫಲಕ ಅಳವಡಿಸಬೇಕಿತ್ತು. ಮೊಬೈಲ್ ಫೋನ್ ಇಲ್ಲದವರೂ ಮಾಹಿತಿ ಪಡೆಯಬಹುದಿತ್ತು </blockquote><span class="attribution">–ವಿಶ್ವನಾಥ ತೆಂಗಳ್ಳಿ, ರೈತ ಕಲಬುರಗಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>