ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಂಬಿಸಿ ಮೋಸ ಮಾಡುತ್ತಾರೆ. ಅವರ ನಡೆವಳಿಕೆ ವಿರೋಧಿಸಿ ಹೋರಾಟಕ್ಕೆ ಇಳಿದಿದ್ದೇನೆ ಎಂದು ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸಾಧನಕೇರಿಯ ಸೇವಾಲಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ಹೋರಾಟಕ್ಕೆ ನ್ಯಾಯ ಸಿಗುವವರೆಗೆ ವೇದಿಕೆಯಲ್ಲಿ ಮಾಲಾರ್ಪಣೆ ಮಾಡಿಸಿಕೊಳ್ಳದಿರಲು ಸಂಕಲ್ಪ ಮಾಡಿದ್ದೇನೆ ಎಂದರು.
ಪ್ರಲ್ಹಾದ ಜೋಶಿ ಅವರು ಪಾಪ ಕಾರ್ಯ ಮಾಡಿ ಅದನ್ನು ಬೇರೆಯವರ ತಲೆಗೆ ಕಟ್ಟುವ ಕೆಲಸ ಮಾಡುತ್ತಾರೆ. ಈ ಭಾಗದ ಲಿಂಗಾಯತ ನಾಯಕರು ನಾಶವಾಗಿದ್ದಾರೆ. ಅವರ ಹೊಡೆತಕ್ಕೆ ಬಹುಸಂಖ್ಯಾತರು ನುಚ್ಚುನೂರಾಗಿದ್ದಾರೆ ಎಂದು ಹೇಳಿದರು.