<p><strong>ಹುಬ್ಬಳ್ಳಿ:</strong> ಅನ್ನದಾತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅವುಗಳ ಬಗ್ಗೆ ಮುಂದಿನ ತಿಂಗಳು ನಡೆಯುವ ಪಕ್ಷದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈತ ಮೋರ್ಚಾದಿಂದ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳ ಮೂಲಕ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತಿದೆ. ರೈತರು ಹಾಗೂ ಸರ್ಕಾರದ ನಡುವೆ ಮೋರ್ಚಾ ಸೇತುವೆಯಾಗಿ ಕೆಲಸ ಮಾಡಲಿದೆ’ ಎಂದರು.</p>.<p>‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಧಾರವಾಡ ಜಿಲ್ಲೆಗೆ 2019ರಲ್ಲಿ ₹95.85 ಕೋಟಿ ಹಣ ಬಂದಿದೆ. ಈ ವರ್ಷ ಇದುವರೆಗೆ ₹20.69 ಕೋಟಿ ಬಿಡುಗಡೆಯಾಗಿದೆ. ಗೋವಿನ ಜೋಳವನ್ನು ನೇರವಾಗಿ ಕಾರ್ಖಾನೆಗಳೇ ಖರೀದಿಸಲು ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ’ ಎಂದರು.</p>.<p><strong>ಕೊರತೆಯಿಲ್ಲ: </strong>ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವಕ್ಕಿಂತಲೂ ಶೇ 10ರಷ್ಟು ಹೆಚ್ಚು ಯೂರಿಯಾ ಗೊಬ್ಬರ ರಾಜ್ಯಕ್ಕೆ ಸಿಕ್ಕಿದೆ. ಆದ್ದರಿಂದ ಗೊಬ್ಬರದ ಅಭಾವವಿಲ್ಲ ಎಂದರು.</p>.<p>ಹಾಗಾದರೆ ರೈತರಿಗೆ ಏಕೆ ಗೊಬ್ಬರ ಸಿಗುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಕೋವಿಡ್ ಕಾರಣದಿಂದ ಸರಿಯಾದ ಸಮಯಕ್ಕೆ ರೈತರಿಗೆ ಗೊಬ್ಬರ ತಲುಪಿಸಲಾಗದ ಕಾರಣ ಸಮಸ್ಯೆಯಾಗಿದೆ. ಯೂರಿಯಾ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ಕೋವಿಡ್ನಿಂದಾಗಿ ದೇಶದ ಬಹುತೇಕ ಚಟುವಟಿಕೆಗಳು ಸ್ಥಗಿತವಾಗಿದ್ದ ಸಮಯದಲ್ಲಿಯೂ ರೈತರು ತಮ್ಮ ಕೆಲಸ ಬಿಟ್ಟಿಲ್ಲ. ಈ ಬಾರಿ ಶೇ 7ರಷ್ಟು ಆಹಾರ ಉತ್ಪಾದನೆ ಹೆಚ್ಚಾಗಿದೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ತೋಟಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ಇಮ್ಮಡಿಗೊಂಡಿದೆ’ ಎಂದರು.</p>.<p>ಧಾರವಾಡ–ಬೆಳಗಾವಿ ನೇರ ಹೊಸ ರೈಲು ಮಾರ್ಗಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಸಂಪರ್ಕ ಸುಲಭಗೊಳಿಸಲು ಈ ರೈಲು ಮಾರ್ಗ ಅನಿವಾರ್ಯ. ಇಲ್ಲವಾದರೆ, ಬೆಳಗಾವಿಯಿಂದ–ಧಾರವಾಡಕ್ಕೆ ಬರಲು ಮೂರ್ನಾಲ್ಕು ಗಂಟೆ ಕಾಯಬೇಕಾಗುತ್ತದೆ. ಈ ಕಾಮಗಾರಿಯಿಂದ ರೈತರ ಫಲವತ್ತಾದ ಭೂಮಿ ಹಾಳಾಗುವ ಅಪಾಯವಿದ್ದರೆ ಹೆದ್ದಾರಿಯ ಸಮೀಪದ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಿಸಬಹುದು’ ಎಂದು ಅಭಿಪ್ರಾಯಪಟ್ಟರು.</p>.<p><strong>ಮೂರು ಜಿಲ್ಲೆಗಳ ಸದಸ್ಯರ ಸಭೆ</strong></p>.<p>ಹುಬ್ಬಳ್ಳಿಯ ಕೃಷ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ಕಡಾಡಿ ಅವರು ಧಾರವಾಡ, ಗದಗ ಮತ್ತು ಹಾವೇರಿ ವಿಭಾಗದ ರೈತ ಮೋರ್ಚಾ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಪಕ್ಷ ಹಾಗೂ ರೈತರ ಸಂಘಟನೆಗೆ ಒತ್ತು ಕೊಡುವಂತೆ ಹೇಳಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ, ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗುರಿಕಾರ, ಪ್ರಮುಖರಾದ ಎಸ್. ಶಿವಪ್ರಸಾದ, ಗುರು ಲಿಂಗೇಗೌಡ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳ, ಈಶ್ವರಗೌಡ ಪಾಟೀಲ, ರಾಜಣ್ಣ ಕುಲಕರ್ಣಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಅನ್ನದಾತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅವುಗಳ ಬಗ್ಗೆ ಮುಂದಿನ ತಿಂಗಳು ನಡೆಯುವ ಪಕ್ಷದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈತ ಮೋರ್ಚಾದಿಂದ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳ ಮೂಲಕ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತಿದೆ. ರೈತರು ಹಾಗೂ ಸರ್ಕಾರದ ನಡುವೆ ಮೋರ್ಚಾ ಸೇತುವೆಯಾಗಿ ಕೆಲಸ ಮಾಡಲಿದೆ’ ಎಂದರು.</p>.<p>‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಧಾರವಾಡ ಜಿಲ್ಲೆಗೆ 2019ರಲ್ಲಿ ₹95.85 ಕೋಟಿ ಹಣ ಬಂದಿದೆ. ಈ ವರ್ಷ ಇದುವರೆಗೆ ₹20.69 ಕೋಟಿ ಬಿಡುಗಡೆಯಾಗಿದೆ. ಗೋವಿನ ಜೋಳವನ್ನು ನೇರವಾಗಿ ಕಾರ್ಖಾನೆಗಳೇ ಖರೀದಿಸಲು ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ’ ಎಂದರು.</p>.<p><strong>ಕೊರತೆಯಿಲ್ಲ: </strong>ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವಕ್ಕಿಂತಲೂ ಶೇ 10ರಷ್ಟು ಹೆಚ್ಚು ಯೂರಿಯಾ ಗೊಬ್ಬರ ರಾಜ್ಯಕ್ಕೆ ಸಿಕ್ಕಿದೆ. ಆದ್ದರಿಂದ ಗೊಬ್ಬರದ ಅಭಾವವಿಲ್ಲ ಎಂದರು.</p>.<p>ಹಾಗಾದರೆ ರೈತರಿಗೆ ಏಕೆ ಗೊಬ್ಬರ ಸಿಗುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಕೋವಿಡ್ ಕಾರಣದಿಂದ ಸರಿಯಾದ ಸಮಯಕ್ಕೆ ರೈತರಿಗೆ ಗೊಬ್ಬರ ತಲುಪಿಸಲಾಗದ ಕಾರಣ ಸಮಸ್ಯೆಯಾಗಿದೆ. ಯೂರಿಯಾ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ಕೋವಿಡ್ನಿಂದಾಗಿ ದೇಶದ ಬಹುತೇಕ ಚಟುವಟಿಕೆಗಳು ಸ್ಥಗಿತವಾಗಿದ್ದ ಸಮಯದಲ್ಲಿಯೂ ರೈತರು ತಮ್ಮ ಕೆಲಸ ಬಿಟ್ಟಿಲ್ಲ. ಈ ಬಾರಿ ಶೇ 7ರಷ್ಟು ಆಹಾರ ಉತ್ಪಾದನೆ ಹೆಚ್ಚಾಗಿದೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ತೋಟಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ಇಮ್ಮಡಿಗೊಂಡಿದೆ’ ಎಂದರು.</p>.<p>ಧಾರವಾಡ–ಬೆಳಗಾವಿ ನೇರ ಹೊಸ ರೈಲು ಮಾರ್ಗಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಸಂಪರ್ಕ ಸುಲಭಗೊಳಿಸಲು ಈ ರೈಲು ಮಾರ್ಗ ಅನಿವಾರ್ಯ. ಇಲ್ಲವಾದರೆ, ಬೆಳಗಾವಿಯಿಂದ–ಧಾರವಾಡಕ್ಕೆ ಬರಲು ಮೂರ್ನಾಲ್ಕು ಗಂಟೆ ಕಾಯಬೇಕಾಗುತ್ತದೆ. ಈ ಕಾಮಗಾರಿಯಿಂದ ರೈತರ ಫಲವತ್ತಾದ ಭೂಮಿ ಹಾಳಾಗುವ ಅಪಾಯವಿದ್ದರೆ ಹೆದ್ದಾರಿಯ ಸಮೀಪದ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಿಸಬಹುದು’ ಎಂದು ಅಭಿಪ್ರಾಯಪಟ್ಟರು.</p>.<p><strong>ಮೂರು ಜಿಲ್ಲೆಗಳ ಸದಸ್ಯರ ಸಭೆ</strong></p>.<p>ಹುಬ್ಬಳ್ಳಿಯ ಕೃಷ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ಕಡಾಡಿ ಅವರು ಧಾರವಾಡ, ಗದಗ ಮತ್ತು ಹಾವೇರಿ ವಿಭಾಗದ ರೈತ ಮೋರ್ಚಾ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಪಕ್ಷ ಹಾಗೂ ರೈತರ ಸಂಘಟನೆಗೆ ಒತ್ತು ಕೊಡುವಂತೆ ಹೇಳಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ, ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗುರಿಕಾರ, ಪ್ರಮುಖರಾದ ಎಸ್. ಶಿವಪ್ರಸಾದ, ಗುರು ಲಿಂಗೇಗೌಡ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳ, ಈಶ್ವರಗೌಡ ಪಾಟೀಲ, ರಾಜಣ್ಣ ಕುಲಕರ್ಣಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>