ಅವಳಿ ನಗರದಲ್ಲಿ ವಾರದ ಏಳೂ ದಿನ ಒಂದಿಲ್ಲೊಂದು ಬಡಾವಣೆಯಲ್ಲಿ ವಾರದ ಸಂತೆ ನಡೆಯುತ್ತಿತ್ತು. ನೂರಾರು ಸಣ್ಣ ರೈತರು, ಚಿಲ್ಲರೆ ವ್ಯಾಪಾರಿಗಳು ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದರು. ನಿರ್ಬಂಧದ ಬಳಿಕ ಹಲವರು ತರಕಾರಿ ಮಾರಾಟವನ್ನೇ ನಿಲ್ಲಿಸಿದರೆ, ಬೆರಳೆಣಿಕೆ ಮಂದಿ ಮಾತ್ರ ರಸ್ತೆ ಬದಿ, ವಾಹನಗಳ ಮೂಲಕ ಮಾರಾಟಕ್ಕೆ ಇಳಿದರು. ಇನ್ನು ಹೊಸ ವ್ಯಾಪಾರಿಗಳ ಸಂಖ್ಯೆ ಹೆಚ್ಚಾದ ಪರಿಣಾಮ ಆದಾಯ ಕ್ಷೀಣಿಸಿತು ಎಂಬುದು ಕಾಯಂ ವ್ಯಾಪಾರಿಗಳ ಅಳಲು.