ಕಲಘಟಗಿ: ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.
ಗ್ರಾಮದ ಮನೆ- ಮನೆ ಭೇಟಿ ನೀಡಿ ಸದರಿ ಅಭಿಯಾನದ ಬಗ್ಗೆ ಮಾಹಿತಿ ವೈಯಕ್ತಿಕ ಕಾಮಗಾರಿ ಬೇಡಿಕೆ ಪಟ್ಟಿಗೆಯಲ್ಲಿ ಸಾರ್ವಜನಿಕರಿಂದ ಹಾಗೂ ರೈತರಿಂದ ಕಾಮಗಾರಿ ಬೇಡಿಕೆ ಅರ್ಜಿ ಸಂಗ್ರಹಣೆ ಮಾಡಿದರು. ಪಂಚಾಯ್ತಿ ಸ್ವಚ್ಛ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಪ್ಪ ಉಳಾಗಡ್ಡಿ ಮಾತನಾಡಿ, ‘ಜನರು ನರೇಗಾ ಯೋಜನೆಯಡಿ ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಅರ್ಜಿ ಬರೆದು ಕಾಮಗಾರಿ ಪೆಟ್ಟಿಗೆಗೆ ಹಾಕಿದರೆ ಗ್ರಾಮ ಸಭೆ ನಡೆಸಿ ಕ್ರಿಯಾಯೋಜನೆಗೆ ಸೇರ್ಪಡೆ ಮಾಡುತ್ತೇವೆ’ ಎಂದರು.