ಕಲಘಟಗಿ: ಗುಣಾತ್ಮಕ ಕೌಶಲಗಳ ಶಿಕ್ಷಣದ ಮೂಲಕ ಯುವಕರಿಗೆ ಉದ್ಯೋಗಗಳ ಅವಕಾಶ ಕಲ್ಪಿಸುವುದೇ ಎನ್ಎಸ್ಕ್ಯುಎಫ್ ಉದ್ದೇಶವಾಗಿದೆ ಎಂದು ಶಿಕ್ಷಕಿ ಪೂರ್ಣಿಮಾ ಕಟಗಿ ಹೇಳಿದರು.
ತಾಲ್ಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ತರಬೇತಿ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿ ‘ಜಾಗತಿಕ ಮಾರುಕಟ್ಟೆ ಹಾಗೂ ದೇಶದ ವಿವಿಧ ಕ್ಷೇತ್ರಗಳ ವೃತ್ತಿಗೆ ಅಗತ್ಯವಿರುವ ಕೌಶಲ ಕಲಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಕುಮಾರ ಕೆ.ಎಫ್ ಮಾತನಾಡಿ ‘ನಮ್ಮ ಪ್ರೌಢಶಾಲೆಯಲ್ಲಿ 2021-22ರ ಸಾಲಿನ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಕೋರ್ಸ್ ಪ್ರಾರಂಭಿಸಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.
ಎಲೆಕ್ಟ್ರಾನಿಕ್, ಹಾರ್ಡ್ವೇರ್, ಆಟೋಮೊಬೈಲ್ ಎರಡು ಸೆಕ್ಟರ್ಗಳಿವೆ. ಒಂದು ಸೆಕ್ಟರ್ಗೆ 25 ವಿದ್ಯಾರ್ಥಿಗಳ ಹೆಸರು ನೋಂದಾಯಿಸಲಾಗಿದೆ.