ಅಮರಗೋಳದವರಾದ ಕಲ್ಲಪ್ಪ ಹಡಪದ, ಈತನ ಹೆಂಡತಿ ಶೇಖವ್ವ ಹಡಪದ, ಮಗ ವಿಜಯ ಹಡಪದ, ಮಗಳು ಗಂಗವ್ವ ಹಡಪದ ಹಾಗೂ ಕಲ್ಲಪ್ಪನ ಸಹೋದರನ ಮಗ ರವಿ ಹಡಪದ ಬೆಣ್ಣೆ ಹಳ್ಳದ ಪ್ರವಾಹದ ಸಿಲುಕಿದ್ದರು.ಎಲ್ಲರೂ ಒಂದೇ ಕುಟುಂಬದವರಾಗಿದ್ದು ಸೋಮವಾರ ಹೆಸರು ಕಾಳು ಬಿಡಿಸಲು ಸೊಟಕನಾಳ ಗ್ರಾಮದ ಬಳಿ ಇರುವ ಹೊಲಕ್ಕೆ ಹೋಗಿದ್ದರು. ಆದರೆ ಸಂಜೆ ಆಗುತ್ತಿದ್ದಂತೆಯೇ ಹಳ್ಳದ ಪ್ರವಾಹ ಹೆಚ್ಚಾದ ಕಾರಣ ಸೋಮವಾರ ಈಡಿ ರಾತ್ರಿ ಹೊಲದಲ್ಲಿಯೇ ಉಪವಾಸ ಕಳೆದಿದ್ದಾರೆ. ಹಳ್ಳದ ಪ್ರವಾಹ ಕಡಿಮೆಯಾಗಬಹುದೆಂದು ಯಾರಿಗೂ ಸುದ್ದಿ ತಿಳಿಸಿರಲಿಲ್ಲ. ಆದರೆ ಮಂಗಳವಾರ ಬೆಳಗಿನ ಜಾವ ಪ್ರವಾಹ ಇಳಿಮುಖವಾಗದ ಕಾರಣ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಸುದ್ದಿಯನ್ನು ಗ್ರಾಮಸ್ಥರಿಗೆ ತಿಳಿಸಿದ ನಂತರವೇ ತಾಲ್ಲೂಕಾ ಆಡಳಿತಕ್ಕೆ ಸುದ್ದಿ ತಿಳಿದಿತ್ತು.