<p>ಧಾರವಾಡ: ಯುವ ಜನೋತ್ಸವವು ವರ್ಣರಂಜಿತ ಪುಟ್ಟ ಭಾರತವನ್ನೇ ತೆರೆದಿಟ್ಟಿದೆ. ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ಜಾನಪದ ನೃತ್ಯವು ಇದನ್ನು ಸಾಕ್ಷೀಕರಿಸಿದೆ.</p>.<p>ಭಾನುವಾರ ಬೆಳಿಗ್ಗೆಯಿಂದಲೇ ಸೃಜನಾ ರಂಗಮಂದಿರವು ದೇಶದ ವಿವಿಧ ಭಾಗಗಳ ತೊಡುಗೆ, ಜಾನಪದ ನೃತ್ಯಗಳಿಗೆ ವೇದಿಕೆ ಆಯಿತು. ಕಣ್ಣು ಕೋರೈಸುವಂತಹ ಬಣ್ಣ ಬಣ್ಣಗಳ ಉಡುಗೆ ತೊಟ್ಟ ಕಲಾವಿದರ ಉತ್ಸಾಹ ಮೇರೆ ಮೀರಿತ್ತು.</p>.<p>ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಕರ್ನಾಟಕ, ಚಂಡೀಗಢ, ಛತ್ತೀಸಗಢ, ಅಸ್ಸಾಂ ಯುವ ಕಲಾವಿದರು ತಮ್ಮ ತಮ್ಮ ರಾಜ್ಯಗಳ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರು.</p>.<p>ಛತ್ತೀಸಗಢದ ಯುವಕ ಯುವತಿಯರು ಮರದ ಕಾಲುಗಳನ್ನು ಕಟ್ಟಿಕೊಂಡು ನರ್ತಿಸುತ್ತಿದ್ದರೆ ನೋಡಲೆರಡು ಕಣ್ಣುಗಳೇ ಸಾಲುತ್ತಿರಲಿಲ್ಲ. ಸಭಿಕರ ಕಡೆಯಿಂದ ಕರತಾಡನ, ಶಿಳ್ಳೆಗಳು ಇನ್ನಿಲ್ಲದಂತೆ ತೂರಿ ಬರುತ್ತಲೇ ಇದ್ದವು.</p>.<p>ಚಂಡೀಗಢದ ಕಲಾವಿದರು ‘ಪಂಜಾಬಿ’ ಹೋಲುವ ಲುಂಡಿ ನೃತ್ಯ ಪ್ರದರ್ಶಿಸಿದರು. ಉತ್ತರಾಖಂಡದ ಕಲಾವಿದರು ಕೃಷಿ–ಗ್ರಾಮೀಣ ಹಿನ್ನೆಲೆಯ ನೃತ್ಯ ಪ್ರದರ್ಶಿಸಿದರೆ ಮುಂದಿನದು ತಮಿಳುನಾಡಿನ ತಂಡದ ಸರದಿ.</p>.<p>ತಮಿಳುನಾಡು ಕಲಾವಿದರು ದೇವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಪ್ರದರ್ಶಿಸುವ ನೃತ್ಯವನ್ನು ಪ್ರಸ್ತುತಡಿಸಿದರು. ಐದು ಜಾನಪದ ನೃತ್ಯಗಳ ಸಮ್ಮಿಳನ ಅದು. ಯಾವ ಸರ್ಕಸ್ಗೂ ಕಡಿಮೆ ಇಲ್ಲದಂತೆ, ಸಭಿಕರನ್ನು ಆಸನದ ಅಂಚಿಗೆ ತಂದು ಕೂರಿಸುವ ಸಾಹಸವೂ ಅದರಲ್ಲಿ ಇದ್ದುದು ವಿಶೇಷ.</p>.<p>ಅತ್ತ ವೇದಿಕೆಯಲ್ಲಿ ಕೊಂಚ ಬಿಡುವು ಸಿಗುತ್ತಿದ್ದಂತೆ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಹಾಡಿಗೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಯುವಕರು ಹುಚ್ಚೆದ್ದು ಕುಣಿದು ಮನ ತಣಿಸಿಕೊಂಡರು.</p>.<p class="Briefhead"><strong>ತುಳುನಾಡಿನ ಕಂಗಿಲು ಕುಣಿತ</strong></p>.<p>ದಕ್ಷಿಣ ಕನ್ನಡ ಭಾಗದ ಕಲಾವಿದರು ತಮ್ಮ ನೆಲದ ದೈವಗಳಲ್ಲಿ ಒಂದಾಗಿರುವ ಸ್ವಾಮಿ ಕೊರಗಜ್ಜನ ಬಗೆಗಿನ ನೃತ್ಯ ಪ್ರದರ್ಶಿಸಿ ಮನಸೂರೆಗೊಂಡರು.</p>.<p>ತಮ್ಮ ಉಡುಪಿನ ಮೇಲೆ ತೆಂಗಿನ ಎಳೆಯ ಗರಿಗಳು, ಅಡಿಕೆ ಸಿಂಗಾರಗಳನ್ನು ಬಳಸಿಕೊಂಡು ಸಿಂಗರಿಸಿದ್ದ ಇವರನ್ನು ನೋಡುವುದೇ ಒಂದು ವಿಶೇಷವಾಗಿತ್ತು. ಈಚೆಗೆ ಜನಪ್ರಿಯವಾದ ‘ಕಾಂತಾರ’ ಸಿನಿಮಾದ ದೈವ ಕುಣಿತವನ್ನು ನೆನಪಿಸಿದ ಈ ನೃತ್ಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಯುವ ಜನೋತ್ಸವವು ವರ್ಣರಂಜಿತ ಪುಟ್ಟ ಭಾರತವನ್ನೇ ತೆರೆದಿಟ್ಟಿದೆ. ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ಜಾನಪದ ನೃತ್ಯವು ಇದನ್ನು ಸಾಕ್ಷೀಕರಿಸಿದೆ.</p>.<p>ಭಾನುವಾರ ಬೆಳಿಗ್ಗೆಯಿಂದಲೇ ಸೃಜನಾ ರಂಗಮಂದಿರವು ದೇಶದ ವಿವಿಧ ಭಾಗಗಳ ತೊಡುಗೆ, ಜಾನಪದ ನೃತ್ಯಗಳಿಗೆ ವೇದಿಕೆ ಆಯಿತು. ಕಣ್ಣು ಕೋರೈಸುವಂತಹ ಬಣ್ಣ ಬಣ್ಣಗಳ ಉಡುಗೆ ತೊಟ್ಟ ಕಲಾವಿದರ ಉತ್ಸಾಹ ಮೇರೆ ಮೀರಿತ್ತು.</p>.<p>ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಕರ್ನಾಟಕ, ಚಂಡೀಗಢ, ಛತ್ತೀಸಗಢ, ಅಸ್ಸಾಂ ಯುವ ಕಲಾವಿದರು ತಮ್ಮ ತಮ್ಮ ರಾಜ್ಯಗಳ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರು.</p>.<p>ಛತ್ತೀಸಗಢದ ಯುವಕ ಯುವತಿಯರು ಮರದ ಕಾಲುಗಳನ್ನು ಕಟ್ಟಿಕೊಂಡು ನರ್ತಿಸುತ್ತಿದ್ದರೆ ನೋಡಲೆರಡು ಕಣ್ಣುಗಳೇ ಸಾಲುತ್ತಿರಲಿಲ್ಲ. ಸಭಿಕರ ಕಡೆಯಿಂದ ಕರತಾಡನ, ಶಿಳ್ಳೆಗಳು ಇನ್ನಿಲ್ಲದಂತೆ ತೂರಿ ಬರುತ್ತಲೇ ಇದ್ದವು.</p>.<p>ಚಂಡೀಗಢದ ಕಲಾವಿದರು ‘ಪಂಜಾಬಿ’ ಹೋಲುವ ಲುಂಡಿ ನೃತ್ಯ ಪ್ರದರ್ಶಿಸಿದರು. ಉತ್ತರಾಖಂಡದ ಕಲಾವಿದರು ಕೃಷಿ–ಗ್ರಾಮೀಣ ಹಿನ್ನೆಲೆಯ ನೃತ್ಯ ಪ್ರದರ್ಶಿಸಿದರೆ ಮುಂದಿನದು ತಮಿಳುನಾಡಿನ ತಂಡದ ಸರದಿ.</p>.<p>ತಮಿಳುನಾಡು ಕಲಾವಿದರು ದೇವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಪ್ರದರ್ಶಿಸುವ ನೃತ್ಯವನ್ನು ಪ್ರಸ್ತುತಡಿಸಿದರು. ಐದು ಜಾನಪದ ನೃತ್ಯಗಳ ಸಮ್ಮಿಳನ ಅದು. ಯಾವ ಸರ್ಕಸ್ಗೂ ಕಡಿಮೆ ಇಲ್ಲದಂತೆ, ಸಭಿಕರನ್ನು ಆಸನದ ಅಂಚಿಗೆ ತಂದು ಕೂರಿಸುವ ಸಾಹಸವೂ ಅದರಲ್ಲಿ ಇದ್ದುದು ವಿಶೇಷ.</p>.<p>ಅತ್ತ ವೇದಿಕೆಯಲ್ಲಿ ಕೊಂಚ ಬಿಡುವು ಸಿಗುತ್ತಿದ್ದಂತೆ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಹಾಡಿಗೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಯುವಕರು ಹುಚ್ಚೆದ್ದು ಕುಣಿದು ಮನ ತಣಿಸಿಕೊಂಡರು.</p>.<p class="Briefhead"><strong>ತುಳುನಾಡಿನ ಕಂಗಿಲು ಕುಣಿತ</strong></p>.<p>ದಕ್ಷಿಣ ಕನ್ನಡ ಭಾಗದ ಕಲಾವಿದರು ತಮ್ಮ ನೆಲದ ದೈವಗಳಲ್ಲಿ ಒಂದಾಗಿರುವ ಸ್ವಾಮಿ ಕೊರಗಜ್ಜನ ಬಗೆಗಿನ ನೃತ್ಯ ಪ್ರದರ್ಶಿಸಿ ಮನಸೂರೆಗೊಂಡರು.</p>.<p>ತಮ್ಮ ಉಡುಪಿನ ಮೇಲೆ ತೆಂಗಿನ ಎಳೆಯ ಗರಿಗಳು, ಅಡಿಕೆ ಸಿಂಗಾರಗಳನ್ನು ಬಳಸಿಕೊಂಡು ಸಿಂಗರಿಸಿದ್ದ ಇವರನ್ನು ನೋಡುವುದೇ ಒಂದು ವಿಶೇಷವಾಗಿತ್ತು. ಈಚೆಗೆ ಜನಪ್ರಿಯವಾದ ‘ಕಾಂತಾರ’ ಸಿನಿಮಾದ ದೈವ ಕುಣಿತವನ್ನು ನೆನಪಿಸಿದ ಈ ನೃತ್ಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>