<p>ಅಮ್ಮಿನಬಾವಿ (ಉಪ್ಪಿನಬೆಟಗೇರಿ): ಗುಡುಗು, ಸಿಡ್ಲು, ಮಿಂಚು, ಮಳಿ ಭಾಳ ಐತ್ರಿಪೋ ಭಾಳ... ಮಳಿ-ಬೆಳಿ ಸಂಪೈತ್ರಿಪೋ... ಹುಟ್ಟಿದ ಮಗುವಿಗೆ ಒಣಾ ರೋಗ ಐತ್ರಿಪೋ... ಭೂಮ್ಯಾಗ ಈ ವರ್ಷ ಕಾಳ್ರಿಪೋ ಕಾಳು...</p>.<p>ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ರಥೋತ್ಸವದ ಕೊನೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು–ಹೋಗುಗಳ ಕುರಿತು ನುಡಿದ ಕಾರಣಿಕ ಇದು.</p>.<p>‘ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ತಾವು ಬೆಳೆಯುವ ಬೆಳೆಗಳಿಗೆ ಅಧಿಕ ಇಳುವರಿ ಪ್ರಾಪ್ತವಾಗುತ್ತದೆ’ ಎಂದು ಕಾರಣಿಕ ವಿಶ್ಲೇಷಿಸಲಾಗಿದೆ.</p>.<p>ಈರಯ್ಯ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ರಥೋತ್ಸವದಲ್ಲಿ ಮರೇವಾಡ ಹಾಗೂ ಅಮ್ಮಿನಬಾವಿ ಬಸವಣ್ಣ ದೇವರ ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು ಇದ್ದವು. ಭಕ್ತರು ತೇರಿಗೆ ಉತ್ತುತ್ತೆ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಇದಕ್ಕೂ ಮುನ್ನ ಬೆಳಿಗ್ಗೆ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಮ್ಮಿನಬಾವಿ (ಉಪ್ಪಿನಬೆಟಗೇರಿ): ಗುಡುಗು, ಸಿಡ್ಲು, ಮಿಂಚು, ಮಳಿ ಭಾಳ ಐತ್ರಿಪೋ ಭಾಳ... ಮಳಿ-ಬೆಳಿ ಸಂಪೈತ್ರಿಪೋ... ಹುಟ್ಟಿದ ಮಗುವಿಗೆ ಒಣಾ ರೋಗ ಐತ್ರಿಪೋ... ಭೂಮ್ಯಾಗ ಈ ವರ್ಷ ಕಾಳ್ರಿಪೋ ಕಾಳು...</p>.<p>ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ರಥೋತ್ಸವದ ಕೊನೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು–ಹೋಗುಗಳ ಕುರಿತು ನುಡಿದ ಕಾರಣಿಕ ಇದು.</p>.<p>‘ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ತಾವು ಬೆಳೆಯುವ ಬೆಳೆಗಳಿಗೆ ಅಧಿಕ ಇಳುವರಿ ಪ್ರಾಪ್ತವಾಗುತ್ತದೆ’ ಎಂದು ಕಾರಣಿಕ ವಿಶ್ಲೇಷಿಸಲಾಗಿದೆ.</p>.<p>ಈರಯ್ಯ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ರಥೋತ್ಸವದಲ್ಲಿ ಮರೇವಾಡ ಹಾಗೂ ಅಮ್ಮಿನಬಾವಿ ಬಸವಣ್ಣ ದೇವರ ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು ಇದ್ದವು. ಭಕ್ತರು ತೇರಿಗೆ ಉತ್ತುತ್ತೆ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ಇದಕ್ಕೂ ಮುನ್ನ ಬೆಳಿಗ್ಗೆ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>