<p><strong>ಧಾರವಾಡ</strong>: ‘ಸಮಾಜ ಹಾಗೂ ಜನರ ಅಭ್ಯುದಯಕ್ಕಾಗಿ ನಾಡಿನ ಮಠಗಳು ಶ್ರೇಷ್ಠ ಕೆಲಸವನ್ನೇ ಮಾಡುತ್ತಿವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.</p>.<p>ಶ್ರಾವಣ ಮಾಸದ ಅಂಗವಾಗಿ ನಗರದ ಮುರುಘಾಮಠದಲ್ಲಿ ಭಾನುವಾರ ನಡೆದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಭಾರತದ ಅಧ್ಯಾತ್ಮ, ಧಾರ್ಮಿಕತೆ ಕುರಿತು ನಡೆದಷ್ಟು ಚರ್ಚೆ ಬೇರಾವ ದೇಶದ ವಿಚಾರವಾಗಿಯೂ ನಡೆಯಲ್ಲ. ಸಮಾಜ ಸುಧಾರಣೆ ಮಾಡಲು ಮೊದಲು ನಾವು ಸುಧಾರಣೆ ಆಗಬೇಕು. ಎಲ್ಲರೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸಿಕೊಳ್ಳಬೇಕು. ವಚನ ಸಂಪತ್ತು ಉಳಿಸುವ ನಿಟ್ಟಿನಲ್ಲೂ ಕೆಲಸ ಮಾಡಬೇಕು’ ಎಂದರು.</p>.<p>ಮನಗುಂಡಿ ಗುರುಬಸವ ಮಹಾಮನೆಯ ಬಸವನಾಂದ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ಹಸಿವು ಹಾಗೂ ಕಷ್ಟದ ಅನುಭವ ಆಗದಿದ್ದರೆ, ಬದುಕಿನ ಸತ್ಯ ಗೊತ್ತಾಗುವುದಿಲ್ಲ. ಜೀವನದ ಸುಖ, ದೈಹಿಕ ಶ್ರಮ ಹಾಗೂ ದುರ್ಗಣ ತ್ಯಾಗದ ಆನಂದ ಕೂಡ ಅನುಭವಿಸುತ್ತಿಲ್ಲ’ ಎಂದರು.</p>.<p>ಹಿರೇಮಾಗಡಿ ವಿರಕ್ತಮಠದ ಚನ್ನಬಸವ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಶರಣ ಚರಿತಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಂಶೋಧಕ ವೀರಣ್ಣ ರಾಜೂರ, ಎಸ್.ಬಿ ಕೋರಿ, ಶಿವಶಂಕರ ಹಂಪಣ್ಣವರ, ನಾಗರಾಜ ಪಟ್ಟಣಶೆಟ್ಟಿ ಇದ್ದರು.</p>.<div><blockquote>ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅನುಮಾನಪಟ್ಟವರು ಕಡಿಮೆ. ಕ್ಷೇತ್ರದ ಬಗೆಗಿನ ಆರೋಪ ಸುಳ್ಳು ಎಂಬುದನ್ನು ತಿಳಿದು ಭಕ್ತರಿಗೆ ಸಮಾಧಾನವಾಗಿದೆ </blockquote><span class="attribution">ಎಚ್.ಕೆ.ಪಾಟೀಲ ಕಾನೂನು ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಸಮಾಜ ಹಾಗೂ ಜನರ ಅಭ್ಯುದಯಕ್ಕಾಗಿ ನಾಡಿನ ಮಠಗಳು ಶ್ರೇಷ್ಠ ಕೆಲಸವನ್ನೇ ಮಾಡುತ್ತಿವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.</p>.<p>ಶ್ರಾವಣ ಮಾಸದ ಅಂಗವಾಗಿ ನಗರದ ಮುರುಘಾಮಠದಲ್ಲಿ ಭಾನುವಾರ ನಡೆದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಭಾರತದ ಅಧ್ಯಾತ್ಮ, ಧಾರ್ಮಿಕತೆ ಕುರಿತು ನಡೆದಷ್ಟು ಚರ್ಚೆ ಬೇರಾವ ದೇಶದ ವಿಚಾರವಾಗಿಯೂ ನಡೆಯಲ್ಲ. ಸಮಾಜ ಸುಧಾರಣೆ ಮಾಡಲು ಮೊದಲು ನಾವು ಸುಧಾರಣೆ ಆಗಬೇಕು. ಎಲ್ಲರೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸಿಕೊಳ್ಳಬೇಕು. ವಚನ ಸಂಪತ್ತು ಉಳಿಸುವ ನಿಟ್ಟಿನಲ್ಲೂ ಕೆಲಸ ಮಾಡಬೇಕು’ ಎಂದರು.</p>.<p>ಮನಗುಂಡಿ ಗುರುಬಸವ ಮಹಾಮನೆಯ ಬಸವನಾಂದ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ಹಸಿವು ಹಾಗೂ ಕಷ್ಟದ ಅನುಭವ ಆಗದಿದ್ದರೆ, ಬದುಕಿನ ಸತ್ಯ ಗೊತ್ತಾಗುವುದಿಲ್ಲ. ಜೀವನದ ಸುಖ, ದೈಹಿಕ ಶ್ರಮ ಹಾಗೂ ದುರ್ಗಣ ತ್ಯಾಗದ ಆನಂದ ಕೂಡ ಅನುಭವಿಸುತ್ತಿಲ್ಲ’ ಎಂದರು.</p>.<p>ಹಿರೇಮಾಗಡಿ ವಿರಕ್ತಮಠದ ಚನ್ನಬಸವ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಶರಣ ಚರಿತಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಂಶೋಧಕ ವೀರಣ್ಣ ರಾಜೂರ, ಎಸ್.ಬಿ ಕೋರಿ, ಶಿವಶಂಕರ ಹಂಪಣ್ಣವರ, ನಾಗರಾಜ ಪಟ್ಟಣಶೆಟ್ಟಿ ಇದ್ದರು.</p>.<div><blockquote>ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅನುಮಾನಪಟ್ಟವರು ಕಡಿಮೆ. ಕ್ಷೇತ್ರದ ಬಗೆಗಿನ ಆರೋಪ ಸುಳ್ಳು ಎಂಬುದನ್ನು ತಿಳಿದು ಭಕ್ತರಿಗೆ ಸಮಾಧಾನವಾಗಿದೆ </blockquote><span class="attribution">ಎಚ್.ಕೆ.ಪಾಟೀಲ ಕಾನೂನು ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>