<p>ಪ್ರಜಾವಾಣಿ ವಾರ್ತೆ</p>.<p><strong>ಹುಬ್ಬಳ್ಳಿ:</strong> ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಘಟಕ ಶೀಘ್ರವೇ ಕಾರ್ಯಾರಂಭಿಸಲಿದೆ ಎಂದು ಹು–ಧಾ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.</p>.<p>ಇಲ್ಲಿನ ತೋಳನಕೆರೆ ಆವರಣದಲ್ಲಿ ಭಾನುವಾರ ನಡೆದ ‘ಸಮುದಾಯ ಬೀದಿನಾಯಿ ದತ್ತು ಶಿಬಿರ’ದಲ್ಲಿ ಅವರು ಮಾತನಾಡಿ, ‘ಪಾಲಿಕೆ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ’ ಎಂದರು.</p>.<p>‘ಬೀಡಾಡಿ ದನಗಳಿಗೂ ಶಿವಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>‘ಬೀದಿನಾಯಿ ಹಿಡಿಯಲೂ ಆಗದ ನೀವೆಂಥ ಕಾರ್ಪೊರೇಟರ್ಗಳು ಎಂದು ಸಾರ್ವಜನಿಕರು ನಮ್ಮನ್ನು ಅಪಹಾಸ್ಯ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಕಾರ್ಪೊರೇಟರ್ ರಾಮಣ್ಣ ಬಡಿಗೇರ ಹೇಳಿದರು.</p>.<p>‘ಮಕ್ಕಳಾದರೂ ನಮ್ಮನ್ನು ನೋಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಾಯಿಗೆ ತುತ್ತು ಅನ್ನ ಹಾಕಿದರೆ ಕೊನೆಯವರೆಗೂ ಅದು ನಮ್ಮನ್ನು ಪ್ರೀತಿಸುತ್ತದೆ’ ಎಂದ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ, ಸ್ವತಃ ಒಂದು ನಾಯಿ ದತ್ತು ಪಡೆಯುವ ವಾಗ್ದಾನ ಮಾಡಿದರು.</p>.<p>ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ‘ಆಹಾರ ಸಿಗದಿದ್ದಾಗ ನಾಯಿಗಳು ದಾಳಿ ಮಾಡುತ್ತವೆ. ಅವುಗಳನ್ನು ಯಾರಾದರೂ ಆರೈಕೆ ಮಾಡಿದರೆ ಅಂಥ ಸಮಸ್ಯೆಗಳೇ ಇರುವುದಿಲ್ಲ. ಅದಕ್ಕೆ ಇಂಥ ಕಾರ್ಯಕ್ರಮ ಅನುಕೂಲಕರ’ ಎಂದರು.</p>.<p>‘ಬೀದಿನಾಯಿ ನಿಯಂತ್ರಣದ ವಿಚಾರದಲ್ಲಿ ಮಹಾನಗರ ಪಾಲಿಕೆಯು ಮಾದರಿ ಹೆಜ್ಜೆ ಇಟ್ಟಿದೆ’ ಎಂದು ಉಪ ಮೇಯರ್ ಸಂತೋಷ ಚವ್ಹಾಣ ಅಭಿಪ್ರಾಯಪಟ್ಟರು.</p>.<p>‘ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ಬರುವ ಕರೆಗಳಲ್ಲಿ ಹೆಚ್ಚಿನವು ಬೀದಿನಾಯಿಗಳಿಗೆ ಸಂಬಂಧಿಸಿದ್ದೇ ಇರುತ್ತವೆ’ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ ತಿಳಿಸಿದರು.</p>.<p>ಪಾಲಿಕೆ ಸದಸ್ಯೆ ಪ್ರೀತಿ ಖೋಡೆ ಇದ್ದರು.</p>.<p>Highlights - ಏಳು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನ ಸಾಂಕೇತಿಕವಾಗಿ ಮೂವರಿಗೆ ಬೀದಿನಾಯಿ ದತ್ತು ನೀಡಿದ ಅಧಿಕಾರಿಗಳು ಶ್ವಾನ ಹಿಡಿಯುವವರಿಗೆ ಪಾಲಿಕೆ ವತಿಯಿಂದ ಗೌರವ</p>.<p>Quote - ಬೀದಿನಾಯಿ ನಿಯಂತ್ರಣ ದೊಡ್ಡ ಸವಾಲು. ನಾವು ಸಾರ್ವಜನಿಕರಿಂದ ಹೆಚ್ಚಾಗಿ ಬೈಸಿಕೊಳ್ಳುವುದು ಇದೇ ವಿಚಾರಕ್ಕೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ರುದ್ರೇಶ ಘಾಳಿ ಹು–ಧಾ ಮಹಾನಗರ ಪಾಲಿಕೆ ಆಯುಕ್ತ</p>.<p>Quote - ಬೀದಿನಾಯಿಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪಾಲಿಕೆಯೂ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಜ್ಯೋತಿ ಪಾಟೀಲ ಹು–ಧಾ ಮಹಾನಗರ ಪಾಲಿಕೆ ಮೇಯರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಹುಬ್ಬಳ್ಳಿ:</strong> ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಘಟಕ ಶೀಘ್ರವೇ ಕಾರ್ಯಾರಂಭಿಸಲಿದೆ ಎಂದು ಹು–ಧಾ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.</p>.<p>ಇಲ್ಲಿನ ತೋಳನಕೆರೆ ಆವರಣದಲ್ಲಿ ಭಾನುವಾರ ನಡೆದ ‘ಸಮುದಾಯ ಬೀದಿನಾಯಿ ದತ್ತು ಶಿಬಿರ’ದಲ್ಲಿ ಅವರು ಮಾತನಾಡಿ, ‘ಪಾಲಿಕೆ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ’ ಎಂದರು.</p>.<p>‘ಬೀಡಾಡಿ ದನಗಳಿಗೂ ಶಿವಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>‘ಬೀದಿನಾಯಿ ಹಿಡಿಯಲೂ ಆಗದ ನೀವೆಂಥ ಕಾರ್ಪೊರೇಟರ್ಗಳು ಎಂದು ಸಾರ್ವಜನಿಕರು ನಮ್ಮನ್ನು ಅಪಹಾಸ್ಯ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಕಾರ್ಪೊರೇಟರ್ ರಾಮಣ್ಣ ಬಡಿಗೇರ ಹೇಳಿದರು.</p>.<p>‘ಮಕ್ಕಳಾದರೂ ನಮ್ಮನ್ನು ನೋಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಾಯಿಗೆ ತುತ್ತು ಅನ್ನ ಹಾಕಿದರೆ ಕೊನೆಯವರೆಗೂ ಅದು ನಮ್ಮನ್ನು ಪ್ರೀತಿಸುತ್ತದೆ’ ಎಂದ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ, ಸ್ವತಃ ಒಂದು ನಾಯಿ ದತ್ತು ಪಡೆಯುವ ವಾಗ್ದಾನ ಮಾಡಿದರು.</p>.<p>ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ‘ಆಹಾರ ಸಿಗದಿದ್ದಾಗ ನಾಯಿಗಳು ದಾಳಿ ಮಾಡುತ್ತವೆ. ಅವುಗಳನ್ನು ಯಾರಾದರೂ ಆರೈಕೆ ಮಾಡಿದರೆ ಅಂಥ ಸಮಸ್ಯೆಗಳೇ ಇರುವುದಿಲ್ಲ. ಅದಕ್ಕೆ ಇಂಥ ಕಾರ್ಯಕ್ರಮ ಅನುಕೂಲಕರ’ ಎಂದರು.</p>.<p>‘ಬೀದಿನಾಯಿ ನಿಯಂತ್ರಣದ ವಿಚಾರದಲ್ಲಿ ಮಹಾನಗರ ಪಾಲಿಕೆಯು ಮಾದರಿ ಹೆಜ್ಜೆ ಇಟ್ಟಿದೆ’ ಎಂದು ಉಪ ಮೇಯರ್ ಸಂತೋಷ ಚವ್ಹಾಣ ಅಭಿಪ್ರಾಯಪಟ್ಟರು.</p>.<p>‘ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ಬರುವ ಕರೆಗಳಲ್ಲಿ ಹೆಚ್ಚಿನವು ಬೀದಿನಾಯಿಗಳಿಗೆ ಸಂಬಂಧಿಸಿದ್ದೇ ಇರುತ್ತವೆ’ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ ತಿಳಿಸಿದರು.</p>.<p>ಪಾಲಿಕೆ ಸದಸ್ಯೆ ಪ್ರೀತಿ ಖೋಡೆ ಇದ್ದರು.</p>.<p>Highlights - ಏಳು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನ ಸಾಂಕೇತಿಕವಾಗಿ ಮೂವರಿಗೆ ಬೀದಿನಾಯಿ ದತ್ತು ನೀಡಿದ ಅಧಿಕಾರಿಗಳು ಶ್ವಾನ ಹಿಡಿಯುವವರಿಗೆ ಪಾಲಿಕೆ ವತಿಯಿಂದ ಗೌರವ</p>.<p>Quote - ಬೀದಿನಾಯಿ ನಿಯಂತ್ರಣ ದೊಡ್ಡ ಸವಾಲು. ನಾವು ಸಾರ್ವಜನಿಕರಿಂದ ಹೆಚ್ಚಾಗಿ ಬೈಸಿಕೊಳ್ಳುವುದು ಇದೇ ವಿಚಾರಕ್ಕೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ರುದ್ರೇಶ ಘಾಳಿ ಹು–ಧಾ ಮಹಾನಗರ ಪಾಲಿಕೆ ಆಯುಕ್ತ</p>.<p>Quote - ಬೀದಿನಾಯಿಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪಾಲಿಕೆಯೂ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಜ್ಯೋತಿ ಪಾಟೀಲ ಹು–ಧಾ ಮಹಾನಗರ ಪಾಲಿಕೆ ಮೇಯರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>