ವೈವಾಹಿಕ ಆರೋಗ್ಯ ಸಮಸ್ಯೆ ಇದ್ದರೂ ಸಿಸೇರಿಯನ್ ಮಾಡಲಾಗುತ್ತದೆ. ಗರ್ಭಿಣಿಯರು ಎಚ್ಚರ ವಹಿಸುವುದು ಅವಶ್ಯ
ಎಸ್.ಎಂ. ಹೊನಕೇರಿ ಜಿಲ್ಲಾ ಆರೋಗ್ಯಾಧಿಕಾರಿ
ಅಧಿಕ ಸಿಸೇರಿಯನ್ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿ ಇರುವುದನ್ನೂ ಅಲ್ಲಗಳೆಯುವಂತಿಲ್ಲ. ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಬೇಕು
ಮಹೇಶ ಪತ್ತಾರ ಕಾರ್ಮಿಕ ಮುಖಂಡ
‘ವಿವಿಧ ಸಮಸ್ಯೆಗೆ ಕಾರಣ’
‘ಸಿಸೇರಿಯನ್ ಮೂಲಕ ಮೊದಲ ಮಗು ಜನಿಸಿದ್ದರೆ ಆನಂತರವೂ ಸಿಸೇರಿಯನ್ ಮಾಡಬೇಕಾದ ಸಾಧ್ಯತೆ ಇರುತ್ತದೆ. ಬಹುತೇಕರು ತೊಂದರೆ ಬೇಡವೆಂದು ಸಿಸೇರಿಯನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬದಲಾದ ಜೀವನಶೈಲಿ ರೋಗನಿರೋಧಕ ಶಕ್ತಿ ಕೊರತೆ ಅಪೌಷ್ಟಿಕತೆಯೂ ಇದಕ್ಕೆ ಕಾರಣವಾಗಿದೆ’ ಎಂದು ಕೆಎಂಸಿ–ಆರ್ಐನ ಸ್ತ್ರೀರೋಗ ತಜ್ಞ ರಾಮಲಿಂಗಪ್ಪ ಅಂಟರಥಾನಿ ತಿಳಿಸಿದರು. ‘ಕೆಎಂಸಿ–ಆರ್ಐ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಸೇರಿಯನ್ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗಿ ಹೆಚ್ಚು ರಕ್ತಸ್ರಾವ ಗರ್ಭಾಶಯ ಒಡೆಯುವುದು ಯುಟರಸ್ ಬಾಯಿ ಬಿಡುವುದು ನಂಜು ಮುಟ್ಟಿನ ಸಮಸ್ಯೆ ಉಂಟಾಗಬಹುದು. ಸಹಜ ಹೆರಿಗೆಯಲ್ಲಿ ಇಂತಹ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ’ ಎಂದು ಹೇಳಿದರು.