<p><strong>ಹುಬ್ಬಳ್ಳಿ</strong>: ‘ಇಲ್ಲಿನ ಕೆಎಂಸಿ–ಆರ್ಐ ಆಸ್ಪತ್ರೆ ಆವರಣದಲ್ಲಿ ₹16 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಈಶ್ವರ ಹೊಸಮನಿ ತಿಳಿಸಿದರು.</p>.<p>‘ಪ್ರಧಾನಮಂತ್ರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ಪಿಎಂ–ಅಭೀಮ್) ಯೋಜನೆಯಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಗರಿಷ್ಠ 15 ತಿಂಗಳ ಕಾಲಾವಕಾಶ ನೀಡಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಮೂರು ಅಂತಸ್ತಿನ ಕಟ್ಟಡವು ಎರಡು ಆಪರೇಷನ್ ಥಿಯೇಟರ್ ಜೊತೆಗೆ ಎಲ್ಲ ಮೂಲಸೌಕರ್ಯ ಒಳಗೊಂಡಿರಲಿದೆ. ಈಗಾಗಲೇ 350 ಹಾಸಿಗೆಗಳ ಸೌಲಭ್ಯದ ತುರ್ತು ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ’ ಎಂದರು.</p>.<p>‘ಪ್ರತಿದಿನ ಆಸ್ಪತ್ರೆಗೆ 2,500ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಾರೆ. ಈಗಿರುವ ಹೊರರೋಗಿ ವಿಭಾಗ (ಒಪಿಡಿ)ದಲ್ಲಿ ಎಂಟು ಕೌಂಟರ್ಗಳಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೂಕ್ತ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ತ್ವರಿತ ಚಿಕಿತ್ಸೆಗೆ ₹60 ಲಕ್ಷ ವೆಚ್ಚದಲ್ಲಿ ಏಳು ಕೌಂಟರ್ ಇರುವ ಮತ್ತೊಂದು ಒಪಿಡಿ ತೆರೆಯಲಾಗಿದೆ. ಅಲ್ಲಿ ಹೊಸ ಮತ್ತು ಹಳೇರೋಗಿಗಳ ಮತ್ತು ಹಿರಿಯ ನಾಗರಿಕರ ವಿಭಾಗವೆಂದು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಮಾಹಿತಿಗೆ ಟಿವಿ ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.</p>.<p>‘ರಾಜ್ಯದಲ್ಲೇ ಪ್ರಥಮಬಾರಿಗೆ ಸರ್ಕಾರಿ ಸ್ವಾಮ್ಯದ ಐವಿಎಫ್ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರ ಆರಂಭವಾಗಲಿದ್ದು, ಯಂತ್ರೋಪಕರಣ ಖರೀದಿಗೆ ಕಲಬುರಗಿಯ ಮಾನವಿಯ ಎನ್ಜಿಒ ಟ್ರಸ್ಟ್ ₹90 ಲಕ್ಷವನ್ನು ಸಿಎಸ್ಆರ್ ನಿಧಿಯಿಂದ ನೀಡಿದೆ. ಆಸ್ಪತ್ರೆಯ ಕೆಲವು ವೈದ್ಯರು ತರಬೇತಿ ಪಡೆದುಕೊಂಡು ಬಂದಿದ್ದು, ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಎಷ್ಟು ಮಂದಿ ವೈದ್ಯರು ಬೇಕು, ವೆಚ್ಚ ಎಷ್ಟಾಗುತ್ತದೆ ಎನ್ನುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅನುಮೋದನೆ ದೊರೆತ ನಂತರ ಕೇಂದ್ರ ಆರಂಭಿಸಲಾಗುವುದು’ ಎಂದು ತಿಳಿಸಿದರು.</p>.<p>‘ಖಾಸಗಿ ಐವಿಎಫ್ ಕೇಂದ್ರಗಳಲ್ಲಿ ಒಂದು ಬಾರಿ ಚಿಕಿತ್ಸೆಗೆ ₹1 ಲಕ್ಷದಿಂದ ₹3 ಲಕ್ಷದವರೆಗೂ ಶುಲ್ಕ ಪಡೆಯಲಾಗುತ್ತದೆ. ಕೆಎಂಸಿಇ–ಆರ್ಐ ಆಸ್ಪತ್ರೆಯಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮಾಡಬೇಕೇ, ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೇ ಎನ್ನುವ ವಿಷಯ ಚರ್ಚೆ ಹಂತದಲ್ಲಿದೆ. ಔಷಧವನ್ನು ಉಚಿತವಾಗಿ ನೀಡಲು ಅನುಮತಿ ನೀಡಬೇಕೆಂದೂ ವಿನಂತಿಸಲಾಗಿದೆ’ ಎಂದು ಹೇಳಿದರು.</p>.<p>ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ, ಮಕ್ಕಳ ಮತ್ತು ಪ್ರಸೂತಿ ತಜ್ಞೆ ಡಾ.ಹೇಮಲತಾ, ಮಕ್ಕಳ ತಜ್ಞ ಡಾ.ವಿನೋದ ರಟಗೇರಿ, ಹೃದಯ ತಜ್ಞ ಡಾ.ರಾಜಕುಮಾರ ಹಿರೇಮಠ, ಡಾ.ರೂಪಾಲಿ, ಡಾ.ದೀಪಿಕಾ ವಾಲ್ಮಿಕಿ, ಡಾ.ರಾಜಶೇಖರ ದ್ಯಾಬೇರಿ, ಡಾ. ಕೋಮಣ್ಣ, ಡಾ.ಮಂಜಪ್ಪ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಇಲ್ಲಿನ ಕೆಎಂಸಿ–ಆರ್ಐ ಆಸ್ಪತ್ರೆ ಆವರಣದಲ್ಲಿ ₹16 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಈಶ್ವರ ಹೊಸಮನಿ ತಿಳಿಸಿದರು.</p>.<p>‘ಪ್ರಧಾನಮಂತ್ರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ಪಿಎಂ–ಅಭೀಮ್) ಯೋಜನೆಯಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಗರಿಷ್ಠ 15 ತಿಂಗಳ ಕಾಲಾವಕಾಶ ನೀಡಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಮೂರು ಅಂತಸ್ತಿನ ಕಟ್ಟಡವು ಎರಡು ಆಪರೇಷನ್ ಥಿಯೇಟರ್ ಜೊತೆಗೆ ಎಲ್ಲ ಮೂಲಸೌಕರ್ಯ ಒಳಗೊಂಡಿರಲಿದೆ. ಈಗಾಗಲೇ 350 ಹಾಸಿಗೆಗಳ ಸೌಲಭ್ಯದ ತುರ್ತು ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ’ ಎಂದರು.</p>.<p>‘ಪ್ರತಿದಿನ ಆಸ್ಪತ್ರೆಗೆ 2,500ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಾರೆ. ಈಗಿರುವ ಹೊರರೋಗಿ ವಿಭಾಗ (ಒಪಿಡಿ)ದಲ್ಲಿ ಎಂಟು ಕೌಂಟರ್ಗಳಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೂಕ್ತ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ತ್ವರಿತ ಚಿಕಿತ್ಸೆಗೆ ₹60 ಲಕ್ಷ ವೆಚ್ಚದಲ್ಲಿ ಏಳು ಕೌಂಟರ್ ಇರುವ ಮತ್ತೊಂದು ಒಪಿಡಿ ತೆರೆಯಲಾಗಿದೆ. ಅಲ್ಲಿ ಹೊಸ ಮತ್ತು ಹಳೇರೋಗಿಗಳ ಮತ್ತು ಹಿರಿಯ ನಾಗರಿಕರ ವಿಭಾಗವೆಂದು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಮಾಹಿತಿಗೆ ಟಿವಿ ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.</p>.<p>‘ರಾಜ್ಯದಲ್ಲೇ ಪ್ರಥಮಬಾರಿಗೆ ಸರ್ಕಾರಿ ಸ್ವಾಮ್ಯದ ಐವಿಎಫ್ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರ ಆರಂಭವಾಗಲಿದ್ದು, ಯಂತ್ರೋಪಕರಣ ಖರೀದಿಗೆ ಕಲಬುರಗಿಯ ಮಾನವಿಯ ಎನ್ಜಿಒ ಟ್ರಸ್ಟ್ ₹90 ಲಕ್ಷವನ್ನು ಸಿಎಸ್ಆರ್ ನಿಧಿಯಿಂದ ನೀಡಿದೆ. ಆಸ್ಪತ್ರೆಯ ಕೆಲವು ವೈದ್ಯರು ತರಬೇತಿ ಪಡೆದುಕೊಂಡು ಬಂದಿದ್ದು, ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಎಷ್ಟು ಮಂದಿ ವೈದ್ಯರು ಬೇಕು, ವೆಚ್ಚ ಎಷ್ಟಾಗುತ್ತದೆ ಎನ್ನುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅನುಮೋದನೆ ದೊರೆತ ನಂತರ ಕೇಂದ್ರ ಆರಂಭಿಸಲಾಗುವುದು’ ಎಂದು ತಿಳಿಸಿದರು.</p>.<p>‘ಖಾಸಗಿ ಐವಿಎಫ್ ಕೇಂದ್ರಗಳಲ್ಲಿ ಒಂದು ಬಾರಿ ಚಿಕಿತ್ಸೆಗೆ ₹1 ಲಕ್ಷದಿಂದ ₹3 ಲಕ್ಷದವರೆಗೂ ಶುಲ್ಕ ಪಡೆಯಲಾಗುತ್ತದೆ. ಕೆಎಂಸಿಇ–ಆರ್ಐ ಆಸ್ಪತ್ರೆಯಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮಾಡಬೇಕೇ, ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೇ ಎನ್ನುವ ವಿಷಯ ಚರ್ಚೆ ಹಂತದಲ್ಲಿದೆ. ಔಷಧವನ್ನು ಉಚಿತವಾಗಿ ನೀಡಲು ಅನುಮತಿ ನೀಡಬೇಕೆಂದೂ ವಿನಂತಿಸಲಾಗಿದೆ’ ಎಂದು ಹೇಳಿದರು.</p>.<p>ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ, ಮಕ್ಕಳ ಮತ್ತು ಪ್ರಸೂತಿ ತಜ್ಞೆ ಡಾ.ಹೇಮಲತಾ, ಮಕ್ಕಳ ತಜ್ಞ ಡಾ.ವಿನೋದ ರಟಗೇರಿ, ಹೃದಯ ತಜ್ಞ ಡಾ.ರಾಜಕುಮಾರ ಹಿರೇಮಠ, ಡಾ.ರೂಪಾಲಿ, ಡಾ.ದೀಪಿಕಾ ವಾಲ್ಮಿಕಿ, ಡಾ.ರಾಜಶೇಖರ ದ್ಯಾಬೇರಿ, ಡಾ. ಕೋಮಣ್ಣ, ಡಾ.ಮಂಜಪ್ಪ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>