<p><strong>ಹುಬ್ಬಳ್ಳಿ:</strong> ನಗರದ ಪುಣೆ–ಬೆಂಗಳೂರು ಮುಖ್ಯರಸ್ತೆ ಪಕ್ಕದಿಂದಲೇ ಇರುವ ವಾರ್ಡ್ ಸಂಖ್ಯೆ 71, ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಹಲವು ತೊಡಕುಗಳ ನಡುವೆಯೂ ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದೆ.</p>.<p>ಈ ಮೊದಲು 59ನೇ ವಾರ್ಡ್ ವ್ಯಾಪ್ತಿಯಲ್ಲಿದ್ದ ಇಲ್ಲಿನ ಬಡಾವಣೆಗಳನ್ನು ಹೊಸ ವಾರ್ಡ್ ರಚನೆ ಸಮಯದಲ್ಲಿ 71ನೇ ವಾರ್ಡ್ಗೆ ಸೇರ್ಪಡೆ ಮಾಡಲಾಗಿದೆ. ನ್ಯೂ ಇಂಗ್ಲಿಷ್ ಸ್ಕೂಲ್ನಿಂದ ಆರಂಭವಾಗಿ ಸದರ್ಸೋಫಾ ಮುಖ್ಯರಸ್ತೆವರೆಗೆ 0.24 ಚದರ ಕಿ.ಮೀ.ವರೆಗೆ ವಾರ್ಡ್ ವ್ಯಾಪಿಸಿದೆ. </p>.<p>ಏಳುಮಕ್ಕಳ ತಾಯಿ ಹಾಗೂ ಬನ್ನಿಮಕ್ಕಳ ತಾಯಿ ದೇವಸ್ಥಾನಗಳಿದ್ದು, ಫರ್ದಾನಕಲ್ ಹಾಗೂ ಸದರ್ಸೋಫಾದಲ್ಲಿ ಮಸೀದಿಗಳಿವೆ. ಹಜರತ್ ತುರ್ಬಾನ್ ಶಾವಲ್ಲಿ ದರ್ಗಾವೂ ಇಲ್ಲಿದೆ. ಬಹುತೇಕ ಮುಸ್ಲಿಂ ಸಮುದಾಯದವರು ಈ ವಾರ್ಡ್ನಲ್ಲಿದ್ದು, ಸಣ್ಣ ಪುಟ್ಟ ವ್ಯಾಪಾರ ಸೇರಿದಂತೆ ವಿವಿಧ ಕೆಲಸಗಳನ್ನು ತೊಡಗಿದ್ದಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ ಒಟ್ಟು ಮೂರು ವಾಣಿಜ್ಯ ಕಟ್ಟಡಗಳಿವೆ.</p>.<p>‘ಲ್ಯಾಂಡ್ ಆರ್ಮಿ, ಲೋಕೋಪಯೋಗಿ ಇಲಾಖೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಒಟ್ಟು ₹7 ಕೋಟಿ ಅನುದಾನದಲ್ಲಿ ವಿವಿಧೆಡೆ ರಸ್ತೆ, ಚರಂಡಿ, ಯುಜಿಡಿ ನಿರ್ಮಾಣ ಮಾಡಲಾಗಿದೆ. ಸದ್ಯ ₹2.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಪಾಲಿಕೆ ಸದಸ್ಯ ನಸೀರ್ ಅಹ್ಮದ್ ಮೆಹಬೂಬ್ಸಾಬ್ ಹೊನ್ಯಾಳ್ ತಿಳಿಸಿದರು.</p>.<p>‘ಕೊಳೆಗೇರಿ ಪ್ರದೇಶವಾದ ಕೋಳೇಕೇರಿ ಪ್ಲಾಟ್ನಲ್ಲಿ ಬಹುತೇಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಶೇ 20ರಷ್ಟು ನಿವಾಸಿಗಳಿಗೆ ವಸತಿ ವ್ಯವಸ್ಥೆ ಆಗಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ತೆರೆದ ಚರಂಡಿ ಮೇಲೆ ಸಿಮೆಂಟ್ ಮುಚ್ಚಳ ಹಾಕಲಾಗುತ್ತಿದೆ. ಜನರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದರು.</p>.<p>‘ಒಟ್ಟು 52 ಸಿಸಿಟಿವಿ ಕ್ಯಾಮೆರಾಗಳನ್ನು ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಈಚೆಗೆ ಹೊಸದಾಗಿ 100 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ 24X7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ 7ರಿಂದ 9 ದಿನಕ್ಕೊಮ್ಮೆ ಪಾಲಿಕೆಯಿಂದ ನೀರು ಪೂರೈಕೆ ಆಗುತ್ತಿದೆ. ನಮ್ಮ ಕ್ಲಿನಿಕ್ ಇದ್ದು, ಸಾಮಾನ್ಯ ಚಿಕಿತ್ಸೆ ದೊರೆಯುತ್ತಿದೆ’ ಎಂದು ತಿಳಿಸಿದರು.</p>.<p>‘ರಾಜಕಾಲುವೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಗೊಳ್ಳುವುದರಿಂದ ಕುಡಿಯುವ ನೀರಿನ ಪೈಪ್ಗೆ ಕೊಳಚೆ ನೀರು ಸೇರುತ್ತದೆ. ಮಳೆ ಬಂದಾಗ ರಾಜಕಾಲುವೆ ತುಂಬಿ, ಕೊಳಚೆ ನೀರು ಸುತ್ತಲಿನ ಸುಮಾರು 250 ಮನೆಗೆಳಿಗೆ ನುಗ್ಗುತ್ತದೆ. ಇದರಿಂದ ನಷ್ಟಕ್ಕೀಡಾದವರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ವಾರ್ಡ್ ನಿವಾಸಿಗಳು.  </p>.<div><blockquote>ವಾರ್ಡ್ ಸಮಸ್ಯೆ ಪರಿಹರಿಸುವಂತೆ ಪ್ರತಿ ಬಾರಿ ಪಾಲಿಕೆಯಲ್ಲಿ ಧ್ವನಿ ಎತ್ತುತ್ತಿದ್ದೇನೆ. ಹಂತ ಹಂತವಾಗಿ ವಾರ್ಡ್ ಅಭಿವೃದ್ಧಿ ಮಾಡಲಾಗುತ್ತಿದೆ </blockquote><span class="attribution">ನಸೀರ್ ಅಹ್ಮದ್ ಮೆಹಬೂಬ್ಸಾಬ್ ಹೊನ್ಯಾಳ್ ಪಾಲಿಕೆ ಸದಸ್ಯ 71ನೇ ವಾರ್ಡ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ಪುಣೆ–ಬೆಂಗಳೂರು ಮುಖ್ಯರಸ್ತೆ ಪಕ್ಕದಿಂದಲೇ ಇರುವ ವಾರ್ಡ್ ಸಂಖ್ಯೆ 71, ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಹಲವು ತೊಡಕುಗಳ ನಡುವೆಯೂ ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದೆ.</p>.<p>ಈ ಮೊದಲು 59ನೇ ವಾರ್ಡ್ ವ್ಯಾಪ್ತಿಯಲ್ಲಿದ್ದ ಇಲ್ಲಿನ ಬಡಾವಣೆಗಳನ್ನು ಹೊಸ ವಾರ್ಡ್ ರಚನೆ ಸಮಯದಲ್ಲಿ 71ನೇ ವಾರ್ಡ್ಗೆ ಸೇರ್ಪಡೆ ಮಾಡಲಾಗಿದೆ. ನ್ಯೂ ಇಂಗ್ಲಿಷ್ ಸ್ಕೂಲ್ನಿಂದ ಆರಂಭವಾಗಿ ಸದರ್ಸೋಫಾ ಮುಖ್ಯರಸ್ತೆವರೆಗೆ 0.24 ಚದರ ಕಿ.ಮೀ.ವರೆಗೆ ವಾರ್ಡ್ ವ್ಯಾಪಿಸಿದೆ. </p>.<p>ಏಳುಮಕ್ಕಳ ತಾಯಿ ಹಾಗೂ ಬನ್ನಿಮಕ್ಕಳ ತಾಯಿ ದೇವಸ್ಥಾನಗಳಿದ್ದು, ಫರ್ದಾನಕಲ್ ಹಾಗೂ ಸದರ್ಸೋಫಾದಲ್ಲಿ ಮಸೀದಿಗಳಿವೆ. ಹಜರತ್ ತುರ್ಬಾನ್ ಶಾವಲ್ಲಿ ದರ್ಗಾವೂ ಇಲ್ಲಿದೆ. ಬಹುತೇಕ ಮುಸ್ಲಿಂ ಸಮುದಾಯದವರು ಈ ವಾರ್ಡ್ನಲ್ಲಿದ್ದು, ಸಣ್ಣ ಪುಟ್ಟ ವ್ಯಾಪಾರ ಸೇರಿದಂತೆ ವಿವಿಧ ಕೆಲಸಗಳನ್ನು ತೊಡಗಿದ್ದಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ ಒಟ್ಟು ಮೂರು ವಾಣಿಜ್ಯ ಕಟ್ಟಡಗಳಿವೆ.</p>.<p>‘ಲ್ಯಾಂಡ್ ಆರ್ಮಿ, ಲೋಕೋಪಯೋಗಿ ಇಲಾಖೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಒಟ್ಟು ₹7 ಕೋಟಿ ಅನುದಾನದಲ್ಲಿ ವಿವಿಧೆಡೆ ರಸ್ತೆ, ಚರಂಡಿ, ಯುಜಿಡಿ ನಿರ್ಮಾಣ ಮಾಡಲಾಗಿದೆ. ಸದ್ಯ ₹2.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಪಾಲಿಕೆ ಸದಸ್ಯ ನಸೀರ್ ಅಹ್ಮದ್ ಮೆಹಬೂಬ್ಸಾಬ್ ಹೊನ್ಯಾಳ್ ತಿಳಿಸಿದರು.</p>.<p>‘ಕೊಳೆಗೇರಿ ಪ್ರದೇಶವಾದ ಕೋಳೇಕೇರಿ ಪ್ಲಾಟ್ನಲ್ಲಿ ಬಹುತೇಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಶೇ 20ರಷ್ಟು ನಿವಾಸಿಗಳಿಗೆ ವಸತಿ ವ್ಯವಸ್ಥೆ ಆಗಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ತೆರೆದ ಚರಂಡಿ ಮೇಲೆ ಸಿಮೆಂಟ್ ಮುಚ್ಚಳ ಹಾಕಲಾಗುತ್ತಿದೆ. ಜನರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದರು.</p>.<p>‘ಒಟ್ಟು 52 ಸಿಸಿಟಿವಿ ಕ್ಯಾಮೆರಾಗಳನ್ನು ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಈಚೆಗೆ ಹೊಸದಾಗಿ 100 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ 24X7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ 7ರಿಂದ 9 ದಿನಕ್ಕೊಮ್ಮೆ ಪಾಲಿಕೆಯಿಂದ ನೀರು ಪೂರೈಕೆ ಆಗುತ್ತಿದೆ. ನಮ್ಮ ಕ್ಲಿನಿಕ್ ಇದ್ದು, ಸಾಮಾನ್ಯ ಚಿಕಿತ್ಸೆ ದೊರೆಯುತ್ತಿದೆ’ ಎಂದು ತಿಳಿಸಿದರು.</p>.<p>‘ರಾಜಕಾಲುವೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಗೊಳ್ಳುವುದರಿಂದ ಕುಡಿಯುವ ನೀರಿನ ಪೈಪ್ಗೆ ಕೊಳಚೆ ನೀರು ಸೇರುತ್ತದೆ. ಮಳೆ ಬಂದಾಗ ರಾಜಕಾಲುವೆ ತುಂಬಿ, ಕೊಳಚೆ ನೀರು ಸುತ್ತಲಿನ ಸುಮಾರು 250 ಮನೆಗೆಳಿಗೆ ನುಗ್ಗುತ್ತದೆ. ಇದರಿಂದ ನಷ್ಟಕ್ಕೀಡಾದವರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ವಾರ್ಡ್ ನಿವಾಸಿಗಳು.  </p>.<div><blockquote>ವಾರ್ಡ್ ಸಮಸ್ಯೆ ಪರಿಹರಿಸುವಂತೆ ಪ್ರತಿ ಬಾರಿ ಪಾಲಿಕೆಯಲ್ಲಿ ಧ್ವನಿ ಎತ್ತುತ್ತಿದ್ದೇನೆ. ಹಂತ ಹಂತವಾಗಿ ವಾರ್ಡ್ ಅಭಿವೃದ್ಧಿ ಮಾಡಲಾಗುತ್ತಿದೆ </blockquote><span class="attribution">ನಸೀರ್ ಅಹ್ಮದ್ ಮೆಹಬೂಬ್ಸಾಬ್ ಹೊನ್ಯಾಳ್ ಪಾಲಿಕೆ ಸದಸ್ಯ 71ನೇ ವಾರ್ಡ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>