<p><strong>ಹುಬ್ಬಳ್ಳಿ</strong>: ಒಂದೇ ರೀತಿಯ ಕೃಷಿ ಪದ್ಧತಿಯನ್ನು ನೆಚ್ಚಿಕೊಂಡರೇ ನಷ್ಟ ಸಾಧ್ಯತೆ ಹೆಚ್ಚು ಎನ್ನುವುದನ್ನು ಅರಿತ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ರೈತ ಮಹಿಳೆ ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಅವರು ಸಮಗ್ರ ಕೃಷಿಯ ಮೂಲಕ ನೆಮ್ಮದಿ ಹಾಗೂ ಉತ್ತಮ ಆದಾಯ ಕಂಡುಕೊಂಡಿದ್ದಾರೆ.</p>.<p>43 ವರ್ಷದ ಇವರು ಓದಿದ್ದು 9ನೇ ತರಗತಿ. ತಮ್ಮ 7 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ, ಅರಣ್ಯ ಕೃಷಿ ಅಲ್ಲದೇ ಒಣ ಬೇಸಾಯವನ್ನೂ ಮಾಡುತ್ತ ಬಂದಿದ್ದಾರೆ.</p>.<p>‘ಸತತ ಐದು ವರ್ಷಗಳಿಂದ ಬಿಳಿ ರೇಷ್ಮೆಗೂಡುಗಳನ್ನು ಬೆಳೆಯುತ್ತಿದ್ದೇವೆ. ಇದಕ್ಕಾಗಿ 60 ಅಡಿ ಉದ್ದ ಮತ್ತು 25 ಅಡಿ ಅಗಲದ ಆಧುನಿಕ ಶೆಡ್ ನಿರ್ಮಿಸಿಕೊಂಡಿದ್ದು, ₹3.37 ಲಕ್ಷ ಸಹಾಯಧನವನ್ನೂ ಪಡೆದಿದ್ದೇವೆ. ರಾಯಾಪುರದಲ್ಲಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ಹಿಪ್ಪುನೇರಳೆ ಬೇಸಾಯ ಮತ್ತು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ತರಬೇತಿಯನ್ನೂ ಪಡೆದಿದ್ದೇನೆ’ ಎಂದು ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಶಿರಹಟ್ಟಿ, ರಾಮದುರ್ಗ, ಗಜೇಂದ್ರಗಡ ಭಾಗಗಳಿಂದ ರೇಷ್ಮೆ ಹುಳುಗಳನ್ನು ತರುತ್ತೇವೆ. ಹುಳುಗಳನ್ನು ಲಿಂಕ್ಸ್ನಂತೆ ಖರೀದಿ ಮಾಡಬೇಕಾಗುತ್ತದೆ. 5 ಸಾವಿರ ಹುಳುಗಳಿರುವ 10 ಲಿಂಕ್ಸ್ಗೆ ₹420ರಂತೆ, 140 ಲಿಂಕ್ಸ್ ಖರೀದಿ ಮಾಡಿದ್ದೇವೆ. ಹಿಪ್ಪುನೇರಳೆ ಸೊಪ್ಪು ಹುಳುಗಳ ಆಹಾರ. 25 ದಿನಗಳ ಕಾಲ ಸೊಪ್ಪು ತಿಂದು ಚೆನ್ನಾಗಿ ಬೆಳೆದು, ಗೂಡು ಕಟ್ಟುತ್ತವೆ. ಒಂದು ಕೆ.ಜಿ ಗೂಡಿಗೆ ಅಂದಾಜು ₹600 ರಿಂದ ₹800ರ ವರೆಗೂ ಬೆಲೆ ಸಿಗುತ್ತದೆ. ರಾಮನಗರ ಜಿಲ್ಲೆಯ ಮಾರುಕಟ್ಟೆಗೆ ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.</p>.<p>‘ಹಿಪ್ಪುನೇರಳೆ ಬೆಳೆಯಲು ಸಗಣಿಗೊಬ್ಬರ ಬಳಸುತ್ತೇವೆ. ಚಳಿಗಾಲದಲ್ಲಿ ಸೊಪ್ಪಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹುಳುಗಳು ಹೆಚ್ಚೆಚ್ಚು ಸೊಪ್ಪು ತಿನ್ನುವುದರಿಂದ ಗೂಡು ಸಹ ಗುಣಮಟ್ಟದ್ದಾಗಿ ಬರುತ್ತವೆ. ರೇಷ್ಮೆ ಕೃಷಿಯಿಂದ ವರ್ಷಕ್ಕೆ ಅಂದಾಜು ಐದಾರು ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದು ವಿವರಿಸಿದರು.</p>.<p>‘ಒಣಬೇಸಾಯದ ಜಮೀನಿನಲ್ಲಿ ಜೋಳ, ಗೋಧಿ, ಶೇಂಗಾ ಬೆಳೆದಿದ್ದೇವೆ. 2 ಆಕಳುಗಳಿದ್ದು, ಜಮೀನಿಗೆ ಗೋಕೃಪಾಮೃತ, ಜೀವಾಮೃತ, ತಿಪ್ಪೆಗೊಬ್ಬರ ಬಳಸುತ್ತೇವೆ. ಜೊತೆಗೆ ಅತೀ ಕಡಿಮೆ ರಾಸಾಯನಿಕ ಬಳಸುತ್ತಿದ್ದೇವೆ’ ಎಂದರು.</p>.<p><strong>ಅರಣ್ಯ ಕೃಷಿಗೂ ಒತ್ತು:</strong> ಕಳೆದ 2 ವರ್ಷಗಳಂದ ಅರಣ್ಯ ಕೃಷಿ ಮಾಡುತ್ತಿರುವ ಇವರು, ತಮ್ಮ 3 ಎಕರೆ ಜಮೀನಿನಲ್ಲಿ ಹಿಪ್ಪು ನೆರಳೆ ಜೊತೆಗೆ 150 ಮಹಾಗನಿ, 50 ಬೇವು, ತಲಾ 10 ತೆಂಗು, ಸಾಗವಾನಿ, ದಾಳಿಂಬೆ, ಬಾಳೆ ( ಏಲಕ್ಕಿ), 20 ಸೀತಾಫಲ, 5 ಕೆಂಪು ಪೇರಲ ಗಿಡಗಳನ್ನು ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಂಧ, ರೋಜ್ವುಡ್ ಗಿಡಗಳನ್ನು ಬೆಳೆಸುವ ಇಚ್ಛೆ ಹೊಂದಿದ್ದು, ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ. </p>.<p><strong>ಸಹಾಯಧನ:</strong> ಕೃಷಿ ಇಲಾಖೆ ಸಹಾಯಧನದ ಅಡಿ 100 ಅಡಿ ಉದ್ದ, 100 ಅಡಿ ಅಗಲ ಮತ್ತು 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, 20 ಸ್ಪ್ರಿಂಕ್ಲರ್ಗಳನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.</p>.<div><blockquote> ಕೃಷಿಯಲ್ಲಿ ಯಶ ಕಾಣಲು ನಿರಂತರ ಶ್ರಮ ಆಸಕ್ತಿ ಹಾಗೂ ಕುಟುಂಬದ ಬೆಂಬಲ ಸಹಕಾರವೂ ಅಗತ್ಯ. ಯುವಜನತೆ ಕೃಷಿಯತ್ತ ಹೆಚ್ಚೆಚ್ಚು ಬಂದಷ್ಟು ಭವಿಷ್ಯದ ದಿನಗಳು ಉಜ್ವಲವಾಗಲಿವೆ </blockquote><span class="attribution">ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಕೃಷಿಕ ಮಹಿಳೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಒಂದೇ ರೀತಿಯ ಕೃಷಿ ಪದ್ಧತಿಯನ್ನು ನೆಚ್ಚಿಕೊಂಡರೇ ನಷ್ಟ ಸಾಧ್ಯತೆ ಹೆಚ್ಚು ಎನ್ನುವುದನ್ನು ಅರಿತ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ರೈತ ಮಹಿಳೆ ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಅವರು ಸಮಗ್ರ ಕೃಷಿಯ ಮೂಲಕ ನೆಮ್ಮದಿ ಹಾಗೂ ಉತ್ತಮ ಆದಾಯ ಕಂಡುಕೊಂಡಿದ್ದಾರೆ.</p>.<p>43 ವರ್ಷದ ಇವರು ಓದಿದ್ದು 9ನೇ ತರಗತಿ. ತಮ್ಮ 7 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ, ಅರಣ್ಯ ಕೃಷಿ ಅಲ್ಲದೇ ಒಣ ಬೇಸಾಯವನ್ನೂ ಮಾಡುತ್ತ ಬಂದಿದ್ದಾರೆ.</p>.<p>‘ಸತತ ಐದು ವರ್ಷಗಳಿಂದ ಬಿಳಿ ರೇಷ್ಮೆಗೂಡುಗಳನ್ನು ಬೆಳೆಯುತ್ತಿದ್ದೇವೆ. ಇದಕ್ಕಾಗಿ 60 ಅಡಿ ಉದ್ದ ಮತ್ತು 25 ಅಡಿ ಅಗಲದ ಆಧುನಿಕ ಶೆಡ್ ನಿರ್ಮಿಸಿಕೊಂಡಿದ್ದು, ₹3.37 ಲಕ್ಷ ಸಹಾಯಧನವನ್ನೂ ಪಡೆದಿದ್ದೇವೆ. ರಾಯಾಪುರದಲ್ಲಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ಹಿಪ್ಪುನೇರಳೆ ಬೇಸಾಯ ಮತ್ತು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ತರಬೇತಿಯನ್ನೂ ಪಡೆದಿದ್ದೇನೆ’ ಎಂದು ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಶಿರಹಟ್ಟಿ, ರಾಮದುರ್ಗ, ಗಜೇಂದ್ರಗಡ ಭಾಗಗಳಿಂದ ರೇಷ್ಮೆ ಹುಳುಗಳನ್ನು ತರುತ್ತೇವೆ. ಹುಳುಗಳನ್ನು ಲಿಂಕ್ಸ್ನಂತೆ ಖರೀದಿ ಮಾಡಬೇಕಾಗುತ್ತದೆ. 5 ಸಾವಿರ ಹುಳುಗಳಿರುವ 10 ಲಿಂಕ್ಸ್ಗೆ ₹420ರಂತೆ, 140 ಲಿಂಕ್ಸ್ ಖರೀದಿ ಮಾಡಿದ್ದೇವೆ. ಹಿಪ್ಪುನೇರಳೆ ಸೊಪ್ಪು ಹುಳುಗಳ ಆಹಾರ. 25 ದಿನಗಳ ಕಾಲ ಸೊಪ್ಪು ತಿಂದು ಚೆನ್ನಾಗಿ ಬೆಳೆದು, ಗೂಡು ಕಟ್ಟುತ್ತವೆ. ಒಂದು ಕೆ.ಜಿ ಗೂಡಿಗೆ ಅಂದಾಜು ₹600 ರಿಂದ ₹800ರ ವರೆಗೂ ಬೆಲೆ ಸಿಗುತ್ತದೆ. ರಾಮನಗರ ಜಿಲ್ಲೆಯ ಮಾರುಕಟ್ಟೆಗೆ ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.</p>.<p>‘ಹಿಪ್ಪುನೇರಳೆ ಬೆಳೆಯಲು ಸಗಣಿಗೊಬ್ಬರ ಬಳಸುತ್ತೇವೆ. ಚಳಿಗಾಲದಲ್ಲಿ ಸೊಪ್ಪಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹುಳುಗಳು ಹೆಚ್ಚೆಚ್ಚು ಸೊಪ್ಪು ತಿನ್ನುವುದರಿಂದ ಗೂಡು ಸಹ ಗುಣಮಟ್ಟದ್ದಾಗಿ ಬರುತ್ತವೆ. ರೇಷ್ಮೆ ಕೃಷಿಯಿಂದ ವರ್ಷಕ್ಕೆ ಅಂದಾಜು ಐದಾರು ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದು ವಿವರಿಸಿದರು.</p>.<p>‘ಒಣಬೇಸಾಯದ ಜಮೀನಿನಲ್ಲಿ ಜೋಳ, ಗೋಧಿ, ಶೇಂಗಾ ಬೆಳೆದಿದ್ದೇವೆ. 2 ಆಕಳುಗಳಿದ್ದು, ಜಮೀನಿಗೆ ಗೋಕೃಪಾಮೃತ, ಜೀವಾಮೃತ, ತಿಪ್ಪೆಗೊಬ್ಬರ ಬಳಸುತ್ತೇವೆ. ಜೊತೆಗೆ ಅತೀ ಕಡಿಮೆ ರಾಸಾಯನಿಕ ಬಳಸುತ್ತಿದ್ದೇವೆ’ ಎಂದರು.</p>.<p><strong>ಅರಣ್ಯ ಕೃಷಿಗೂ ಒತ್ತು:</strong> ಕಳೆದ 2 ವರ್ಷಗಳಂದ ಅರಣ್ಯ ಕೃಷಿ ಮಾಡುತ್ತಿರುವ ಇವರು, ತಮ್ಮ 3 ಎಕರೆ ಜಮೀನಿನಲ್ಲಿ ಹಿಪ್ಪು ನೆರಳೆ ಜೊತೆಗೆ 150 ಮಹಾಗನಿ, 50 ಬೇವು, ತಲಾ 10 ತೆಂಗು, ಸಾಗವಾನಿ, ದಾಳಿಂಬೆ, ಬಾಳೆ ( ಏಲಕ್ಕಿ), 20 ಸೀತಾಫಲ, 5 ಕೆಂಪು ಪೇರಲ ಗಿಡಗಳನ್ನು ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಂಧ, ರೋಜ್ವುಡ್ ಗಿಡಗಳನ್ನು ಬೆಳೆಸುವ ಇಚ್ಛೆ ಹೊಂದಿದ್ದು, ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ. </p>.<p><strong>ಸಹಾಯಧನ:</strong> ಕೃಷಿ ಇಲಾಖೆ ಸಹಾಯಧನದ ಅಡಿ 100 ಅಡಿ ಉದ್ದ, 100 ಅಡಿ ಅಗಲ ಮತ್ತು 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, 20 ಸ್ಪ್ರಿಂಕ್ಲರ್ಗಳನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.</p>.<div><blockquote> ಕೃಷಿಯಲ್ಲಿ ಯಶ ಕಾಣಲು ನಿರಂತರ ಶ್ರಮ ಆಸಕ್ತಿ ಹಾಗೂ ಕುಟುಂಬದ ಬೆಂಬಲ ಸಹಕಾರವೂ ಅಗತ್ಯ. ಯುವಜನತೆ ಕೃಷಿಯತ್ತ ಹೆಚ್ಚೆಚ್ಚು ಬಂದಷ್ಟು ಭವಿಷ್ಯದ ದಿನಗಳು ಉಜ್ವಲವಾಗಲಿವೆ </blockquote><span class="attribution">ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಕೃಷಿಕ ಮಹಿಳೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>