<p><strong>ಹುಬ್ಬಳ್ಳಿ:</strong> ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸೆಟ್ಲಮೆಂಟ್ ಮೈದಾನದಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡದವರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.</p>.<p>ಮನೆಗೊಬ್ಬರಂತೆ ಹಾಕಿ ಆಟಗಾರರನ್ನು ಹೊಂದಿರುವ ಸೆಟ್ಲಮೆಂಟ್ನಲ್ಲಿ ಮಾಜಿ ಹಾಗೂ ಹಾಲಿ ಆಟಗಾರರು, ಕೋಚ್ಗಳು ಮೈದಾನದ ಮುಂಭಾಗದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿದರು. ಹಾಕಿ ದಂತಕಥೆ ಧ್ಯಾನಚಂದ್ ಅವರ ಅವರ ಫೋಟೊಕ್ಕೆ ಮಾಲಾರ್ಪಣೆ ಮಾಡಿದರು.</p>.<p>ಹಾಕಿ ಕರ್ನಾಟಕದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಬಲರಾಜ ಹಲಕುರ್ಕಿ ಮಾತನಾಡಿ ‘ಇತ್ತೀಚಿನ ಒಲಿಂಪಿಕ್ಸ್ನಲ್ಲಿ ಸದಾ ನೀರಸ ಪ್ರದರ್ಶನ ತೋರುತ್ತಿದ್ದ ಭಾರತ ತಂಡದ ಆಟದಿಂದ ಬಹಳಷ್ಟು ಬೇಸರವಾಗುತ್ತಿತ್ತು. ಆದರೆ, ಈ ಬಾರಿ ಗೆದ್ದಿರುವ ಕಂಚು ಹಿಂದಿನ ಎಲ್ಲ ಬೇಸರವನ್ನೂ ದೂರ ಮಾಡಿದೆ. ರಾಷ್ಟ್ರೀಯ ಕ್ರೀಡೆಯ ಭವ್ಯ ಪರಂಪರೆ ಮರಳಿ ಬರಲು ಈ ಪದಕ ಸ್ಫೂರ್ತಿಯಾಗಿದೆ’ ಎಂದರು.</p>.<p>‘ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿತು. ಮಹಿಳಾ ತಂಡದವರು ಗುಣಮಟ್ಟದ ಆಟವಾಡುತ್ತಿದ್ದಾರೆ. ಅವರೂ ಪದಕ ಗೆಲ್ಲಲಿ’ ಎಂದು ಹಾರೈಸಿದರು.</p>.<p>ಹಾಕಿ ಆಟಗಾರರಾದ ವಾಸು ಗೋಕಾಕ, ರಾಮು ಭಜಂತ್ರಿ, ದೇವು ಭಜಂತ್ರಿ, ರಾಜೇಶ್ ಮನಪಾಟಿ, ಸುನೀಲ್ ಜಾಧವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸೆಟ್ಲಮೆಂಟ್ ಮೈದಾನದಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡದವರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.</p>.<p>ಮನೆಗೊಬ್ಬರಂತೆ ಹಾಕಿ ಆಟಗಾರರನ್ನು ಹೊಂದಿರುವ ಸೆಟ್ಲಮೆಂಟ್ನಲ್ಲಿ ಮಾಜಿ ಹಾಗೂ ಹಾಲಿ ಆಟಗಾರರು, ಕೋಚ್ಗಳು ಮೈದಾನದ ಮುಂಭಾಗದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿದರು. ಹಾಕಿ ದಂತಕಥೆ ಧ್ಯಾನಚಂದ್ ಅವರ ಅವರ ಫೋಟೊಕ್ಕೆ ಮಾಲಾರ್ಪಣೆ ಮಾಡಿದರು.</p>.<p>ಹಾಕಿ ಕರ್ನಾಟಕದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಬಲರಾಜ ಹಲಕುರ್ಕಿ ಮಾತನಾಡಿ ‘ಇತ್ತೀಚಿನ ಒಲಿಂಪಿಕ್ಸ್ನಲ್ಲಿ ಸದಾ ನೀರಸ ಪ್ರದರ್ಶನ ತೋರುತ್ತಿದ್ದ ಭಾರತ ತಂಡದ ಆಟದಿಂದ ಬಹಳಷ್ಟು ಬೇಸರವಾಗುತ್ತಿತ್ತು. ಆದರೆ, ಈ ಬಾರಿ ಗೆದ್ದಿರುವ ಕಂಚು ಹಿಂದಿನ ಎಲ್ಲ ಬೇಸರವನ್ನೂ ದೂರ ಮಾಡಿದೆ. ರಾಷ್ಟ್ರೀಯ ಕ್ರೀಡೆಯ ಭವ್ಯ ಪರಂಪರೆ ಮರಳಿ ಬರಲು ಈ ಪದಕ ಸ್ಫೂರ್ತಿಯಾಗಿದೆ’ ಎಂದರು.</p>.<p>‘ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿತು. ಮಹಿಳಾ ತಂಡದವರು ಗುಣಮಟ್ಟದ ಆಟವಾಡುತ್ತಿದ್ದಾರೆ. ಅವರೂ ಪದಕ ಗೆಲ್ಲಲಿ’ ಎಂದು ಹಾರೈಸಿದರು.</p>.<p>ಹಾಕಿ ಆಟಗಾರರಾದ ವಾಸು ಗೋಕಾಕ, ರಾಮು ಭಜಂತ್ರಿ, ದೇವು ಭಜಂತ್ರಿ, ರಾಜೇಶ್ ಮನಪಾಟಿ, ಸುನೀಲ್ ಜಾಧವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>