‘ಸದ್ಯ ಪೋಷಕರಿಂದ ಅಧಿಕ ಶುಲ್ಕ ಪಡೆಯುತ್ತಿದ್ದರೂ, ಶಿಕ್ಷಕರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಉದ್ಯೋಗ ಭದ್ರತೆಯನ್ನೂ ನೀಡಿಲ್ಲ. ಶಿಕ್ಷಕರನ್ನು ಮನಬಂದಂತೆ ತೆಗೆದುಹಾಕುತ್ತಿದ್ದಾರೆ. ಕೊನೆಪಕ್ಷ ಅಂಥವರಿಗೆ ಕೆಲ ತಿಂಗಳ ಸಂಬಳವನ್ನೂ ಕೊಟ್ಟಿಲ್ಲ. ಇದರಿಂದ ತೀವ್ರವಾಗಿ ನೊಂದ ಶಿಕ್ಷಕರು ಆತ್ಮಹತ್ಯೆ ಯತ್ನವನ್ನೂ ಮಾಡಿದ್ದಾರೆ’ ಎಂದು ಅಲವತ್ತುಕೊಂಡರು.