ಕವಿ ಹಾಗೂ ಉರ್ದು ಅಕಾಡೆಮಿ ಮಾಜಿ ಸದಸ್ಯವೆಂಕಪ್ಪ ಕಲಾದಗಿ ಮಾತನಾಡಿ, ‘ಯಾವುದೇ ಭಾಷೆಯು ಒಂದು ಸೀಮಿತ ವರ್ಗಕ್ಕೆ ಸೇರಿರುವುದಿಲ್ಲ. ಮುಸಲ್ಮಾನರಲ್ಲದ ಮುನ್ಷಿ ಪ್ರೇಮಚಂದ್, ಕ್ರಿಶನ್ ಚಂದೆರ, ರಾಮಪ್ರಸಾದ ಬಿಸ್ಮಿಲ್ಲಾ, ದಯಾಶಂಕರ ನಸೀಮ, ರಾಜೇಂದ್ರಸಿಂಗ್ ಬೇಡಿ, ಫಿರಾಕ್ ಗೋರಖಪುರಿ, ಜಗನ್ನಾಥ ಆಜಾದ್, ಆನಂದ ನಾರಾಯಣ ಮುಲ್ಲಾ, ಉಪೇಂದ್ರನಾಥ ಅಶ್ಕ, ಪಂಡಿತ್ ಬ್ರೀಜ್ ಮೋಹನ ಕೈಫಿ ಇವರೆಲ್ಲರೂ ಉರ್ದು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.