ಬಿವಿಬಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಎಂ.ಟೆಕ್ ಮುಗಿಸಿರುವ ಹುಬ್ಬಳ್ಳಿಯ ಕೀರ್ತಿ ಚೆನ್ನರೆಡ್ಡಿ ಪ್ರತಿಭಟನೆ ನಡೆಸಿದವರು. ಚನ್ನಮ್ಮನ ಪ್ರತಿಮೆ ಕೆಳಗೆ ಕೆಲ ಹೊತ್ತು ಕುಳಿತು ಪ್ರತಿಭಟಿಸಿದ ಕೀರ್ತಿ, ರೈಲು ಮಾರ್ಗದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಪಟ್ಟಿಯನ್ನೊಳಗೊಂಡ ಕಪ್ಪು ಬೋರ್ಡ್ ಪ್ರದರ್ಶಿಸಿದರು.