‘ಇನ್ನೂ ನಾಲ್ಕೈದು ದಿನ ಚಿಕ್ಕಪ್ಪನ ಮನೆಯಲ್ಲೇ ಇರುತ್ತೇನೆ ಎಂದು ಹೇಳಿದ್ದ ಮಗನನ್ನು, ಪಿಯುಸಿಗೆ ಸೇರಿಸುವ ಸಲುವಾಗಿ ಬೇಗನೆ ಕಳಿಸಿಕೊಡಿ ಎಂದು ತಾಯಿ ಹೇಳಿದ್ದರು. ಹಾಗಾಗಿ, ಬೆಂಗಳೂರಿನಲ್ಲಿರುವ ಆತನ ತಂದೆಯನ್ನು ಭೇಟಿ ಮಾಡಿ, ಅಲ್ಲಿಂದ ಇಬ್ಬರೂ ಮೈಸೂರಿಗೆ ಹೋಗಲಿ ಎಂದು ಸೋಮವಾರ ಸಂಜೆ ಬಸ್ಗೆ ಹತ್ತಿಸಿದ್ದೆವು. ಆದರೆ, ಮಾರ್ಗಮಧ್ಯೆಯೇ ವಿಧಿ ಮೊಮ್ಮಗನನ್ನು ದೂರ ಮಾಡಿತು’ ಎಂದು ದಯಾನ್ ಅಜ್ಜಿ ವಿಧಿಯನ್ನು ಶಪಿಸಿದರು.