‘ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಿಲ್ಲ. ಒಂದೇ ಒಂದು ಸಾಮಾನ್ಯಸಭೆ ನಡೆದಿಲ್ಲ. ಹೀಗಾಗಿ, ನಮ್ಮ ಸದಸ್ಯತ್ವದ ಅವಧಿ ಆರಂಭವಾಗಿಯೇ ಇಲ್ಲ. ಆದರೂ, ಚುನಾವಣೆ ನಡೆಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಅರಳಿ ದೂರಿದರು.