<p><strong>ಹುಬ್ಬಳ್ಳಿ</strong>: ಆಧಾರ್ ಕಾರ್ಡ್ನಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಗೆ 22 ‘ಟ್ಯಾಬ್’ಗಳನ್ನು ನೀಡಿದೆ. ಕೆಲವು ಟ್ಯಾಬ್ಗಳಿಗೆ ತಾಂತ್ರಿಕ ಸಮಸ್ಯೆ ಕಾಡುತ್ತಿದ್ದರೆ, ಇನ್ನು ಕೆಲವನ್ನು ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ.</p>.<p>ರಾಜ್ಯದ 28 ಜಿಲ್ಲೆಗಳಿಗೆ ‘ಚೈಲ್ಡ್ ಎನ್ರೋಲ್ಮೆಂಟ್ ಲೈಫ್ ಕ್ಲೈಂಟ್’ (ಸಿ.ಇ.ಎಲ್.ಸಿ) ತಂತ್ರಾಂಶವಿರುವ 630 ಟ್ಯಾಬ್ಗಳನ್ನು ನೀಡಲಾಗಿದೆ. ಅದರೊಟ್ಟಿಗೆ ಆರು ತಿಂಗಳ ಅವಧಿಗೆ ರಿಚಾರ್ಜ್ ಮಾಡಿದ ಬಿಎಸ್ಎನ್ಎಲ್ ಸಿಮ್ ಕೊಡಲಾಗಿದೆ.</p>.<p>ಕೋವಿಡ್–19 ಲಸಿಕೆ ಪಡೆಯಲು ಆಧಾರ್ ಕಾರ್ಡ್ ಸಂಖ್ಯೆಯ ದೃಢೀಕರಣದ ಅಗತ್ಯವಿದೆ. ಅದಕ್ಕೆ ಮೊಬೈಲ್ಗೆ ಬರುವ ಒಟಿಪಿ ನೀಡಬೇಕಾಗುತ್ತದೆ. ಹಾಗಾಗಿ, ಬಹಳಷ್ಟು ಮಂದಿ ಹಳೆಯ ಮೊಬೈಲ್ ನಂಬರ್ ತೆಗೆದು, ಹೊಸ ನಂಬರ್ ಸೇರ್ಪಡೆಗೆ ಮುಂದಾಗಿದ್ದರು. ಆದರೆ, ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.</p>.<p>‘ಜಿಲ್ಲೆಯಲ್ಲಿ252 ಆಧಾರ್ ಕೇಂದ್ರಗಳು ಇವೆ. ಟ್ಯಾಬ್, ತಂತ್ರಾಂಶ ಬಳಕೆಗೆ 22 ಗ್ರಾಮ ಪಂಚಾಯ್ತಿಗಳ ಆಪರೇಟರ್ಗಳಿಗೆ, ಅಂಚೆ ಕಚೇರಿಯ 290 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಆಧಾರ್ ಸಮನ್ವಯಾಧಿಕಾರಿರುದ್ರೇಶ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಿಳಾಸ ಬದಲಾವಣೆಗೆ ಜನರು ಆಧಾರ್ ಕೇಂದ್ರಗಳಿಗೆ ಬರಬೇಕು. ಮೊಬೈಲ್ ನಂಬರ್ ಅಪ್ಡೇಟ್ ಕೆಲಸವನ್ನು ಅಂಚೆ ಸಿಬ್ಬಂದಿ ಮನೆ ಮನೆಗೆ ಹೋಗಿ ಮಾಡುತ್ತಿದ್ದಾರೆ. ಆದರೆ, ನೆಟ್ವರ್ಕ್ ಸಮಸ್ಯೆ ಇದಕ್ಕೆ ತೊಡಕಾಗುತ್ತಿದೆ’ ಎಂದು ವಿವರಿಸಿದರು.</p>.<p class="Subhead"><strong>ಬಳಕೆ ಮಾಡಿದ ಟ್ಯಾಬ್ ವಿತರಣೆ: </strong>‘ಸಿಬ್ಬಂದಿಗೆ ಹೊಸ ಟ್ಯಾಬ್ ನೀಡಿಲ್ಲ. ಈಗಾಗಲೇ ಬಳಕೆ ಮಾಡಿದವು<br />ಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ಬಿಎಸ್ಎನ್ಎಲ್ ನೆಟ್ವರ್ಕ್ ಎಲ್ಲೆಡೆ ಸಿಗುವುದಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಅಥವಾ ಹೊಸ ಟ್ಯಾಬ್ ವಿತರಿಸಲು ಮನವಿ ಮಾಡಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಿಡಿಒ ಒಬ್ಬರು ಹೇಳಿದರು.</p>.<p class="Subhead"><strong>‘ಐದು ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಕಡಿಮೆ’</strong><br />‘ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾದ ಟ್ಯಾಬ್ಗಳಲ್ಲಿಐದು ವರ್ಷದ ಒಳಗಿನ ಮಕ್ಕಳ ‘ಬಾಲ ಆಧಾರ್’ ನೋಂದಣಿ ಮಾಡಲು ಅವಕಾಶವಿದೆ.5 ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಆಗುವ ಸಂಖ್ಯೆ ಕಡಿಮೆ ಇದೆ’ ಎಂದುಜಿಲ್ಲಾ ಆಧಾರ್ ಸಮನ್ವಯಾಧಿಕಾರಿರುದ್ರೇಶ ಎಂ. ತಿಳಿಸಿದರು.</p>.<p>‘ಸುಧಾರಿತ ತಂತ್ರಾಂಶವಿರುವ ಈ ಟ್ಯಾಬ್ಗಳಲ್ಲಿ, ಮೊಬೈಲ್ ಸಂಖ್ಯೆ ಬದಲಾವಣೆ ಸಹ ಮಾಡಬಹುದು. ಐದು ವರ್ಷದ ಒಳಗಿನ ಮಕ್ಕಳ ನೋಂದಣಿ ಉಚಿತವಾಗಿದೆ. ಮೊಬೈಲ್ ಫೋನ್ ನಂಬರ್ ಬದಲಾವಣೆಗೆ ₹50 ಶುಲ್ಕ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.</p>.<p class="Subhead">**</p>.<p class="Subhead">ಅರಣ್ಯ ಪ್ರದೇಶ ಇರುವೆಡೆ, ಕೆಲವು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ನೆಟ್ವರ್ಕ್ ಇರುವ ಕಡೆ ಜನರನ್ನು ಸೇರಿಸಿ ಆಧಾರ್ ಸೇವೆ ನೀಡಲು ಸಿಬ್ಬಂದಿಗೆ ತಿಳಿಸಲಾಗಿದೆ.<br /><em><strong>-ರುದ್ರೇಶ ಎಂ.,ಜಿಲ್ಲಾ ಆಧಾರ್ ಸಮನ್ವಯಾಧಿಕಾರಿ, ಧಾರವಾಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಆಧಾರ್ ಕಾರ್ಡ್ನಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಗೆ 22 ‘ಟ್ಯಾಬ್’ಗಳನ್ನು ನೀಡಿದೆ. ಕೆಲವು ಟ್ಯಾಬ್ಗಳಿಗೆ ತಾಂತ್ರಿಕ ಸಮಸ್ಯೆ ಕಾಡುತ್ತಿದ್ದರೆ, ಇನ್ನು ಕೆಲವನ್ನು ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ.</p>.<p>ರಾಜ್ಯದ 28 ಜಿಲ್ಲೆಗಳಿಗೆ ‘ಚೈಲ್ಡ್ ಎನ್ರೋಲ್ಮೆಂಟ್ ಲೈಫ್ ಕ್ಲೈಂಟ್’ (ಸಿ.ಇ.ಎಲ್.ಸಿ) ತಂತ್ರಾಂಶವಿರುವ 630 ಟ್ಯಾಬ್ಗಳನ್ನು ನೀಡಲಾಗಿದೆ. ಅದರೊಟ್ಟಿಗೆ ಆರು ತಿಂಗಳ ಅವಧಿಗೆ ರಿಚಾರ್ಜ್ ಮಾಡಿದ ಬಿಎಸ್ಎನ್ಎಲ್ ಸಿಮ್ ಕೊಡಲಾಗಿದೆ.</p>.<p>ಕೋವಿಡ್–19 ಲಸಿಕೆ ಪಡೆಯಲು ಆಧಾರ್ ಕಾರ್ಡ್ ಸಂಖ್ಯೆಯ ದೃಢೀಕರಣದ ಅಗತ್ಯವಿದೆ. ಅದಕ್ಕೆ ಮೊಬೈಲ್ಗೆ ಬರುವ ಒಟಿಪಿ ನೀಡಬೇಕಾಗುತ್ತದೆ. ಹಾಗಾಗಿ, ಬಹಳಷ್ಟು ಮಂದಿ ಹಳೆಯ ಮೊಬೈಲ್ ನಂಬರ್ ತೆಗೆದು, ಹೊಸ ನಂಬರ್ ಸೇರ್ಪಡೆಗೆ ಮುಂದಾಗಿದ್ದರು. ಆದರೆ, ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.</p>.<p>‘ಜಿಲ್ಲೆಯಲ್ಲಿ252 ಆಧಾರ್ ಕೇಂದ್ರಗಳು ಇವೆ. ಟ್ಯಾಬ್, ತಂತ್ರಾಂಶ ಬಳಕೆಗೆ 22 ಗ್ರಾಮ ಪಂಚಾಯ್ತಿಗಳ ಆಪರೇಟರ್ಗಳಿಗೆ, ಅಂಚೆ ಕಚೇರಿಯ 290 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಆಧಾರ್ ಸಮನ್ವಯಾಧಿಕಾರಿರುದ್ರೇಶ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಿಳಾಸ ಬದಲಾವಣೆಗೆ ಜನರು ಆಧಾರ್ ಕೇಂದ್ರಗಳಿಗೆ ಬರಬೇಕು. ಮೊಬೈಲ್ ನಂಬರ್ ಅಪ್ಡೇಟ್ ಕೆಲಸವನ್ನು ಅಂಚೆ ಸಿಬ್ಬಂದಿ ಮನೆ ಮನೆಗೆ ಹೋಗಿ ಮಾಡುತ್ತಿದ್ದಾರೆ. ಆದರೆ, ನೆಟ್ವರ್ಕ್ ಸಮಸ್ಯೆ ಇದಕ್ಕೆ ತೊಡಕಾಗುತ್ತಿದೆ’ ಎಂದು ವಿವರಿಸಿದರು.</p>.<p class="Subhead"><strong>ಬಳಕೆ ಮಾಡಿದ ಟ್ಯಾಬ್ ವಿತರಣೆ: </strong>‘ಸಿಬ್ಬಂದಿಗೆ ಹೊಸ ಟ್ಯಾಬ್ ನೀಡಿಲ್ಲ. ಈಗಾಗಲೇ ಬಳಕೆ ಮಾಡಿದವು<br />ಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ಬಿಎಸ್ಎನ್ಎಲ್ ನೆಟ್ವರ್ಕ್ ಎಲ್ಲೆಡೆ ಸಿಗುವುದಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಅಥವಾ ಹೊಸ ಟ್ಯಾಬ್ ವಿತರಿಸಲು ಮನವಿ ಮಾಡಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಿಡಿಒ ಒಬ್ಬರು ಹೇಳಿದರು.</p>.<p class="Subhead"><strong>‘ಐದು ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಕಡಿಮೆ’</strong><br />‘ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾದ ಟ್ಯಾಬ್ಗಳಲ್ಲಿಐದು ವರ್ಷದ ಒಳಗಿನ ಮಕ್ಕಳ ‘ಬಾಲ ಆಧಾರ್’ ನೋಂದಣಿ ಮಾಡಲು ಅವಕಾಶವಿದೆ.5 ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಆಗುವ ಸಂಖ್ಯೆ ಕಡಿಮೆ ಇದೆ’ ಎಂದುಜಿಲ್ಲಾ ಆಧಾರ್ ಸಮನ್ವಯಾಧಿಕಾರಿರುದ್ರೇಶ ಎಂ. ತಿಳಿಸಿದರು.</p>.<p>‘ಸುಧಾರಿತ ತಂತ್ರಾಂಶವಿರುವ ಈ ಟ್ಯಾಬ್ಗಳಲ್ಲಿ, ಮೊಬೈಲ್ ಸಂಖ್ಯೆ ಬದಲಾವಣೆ ಸಹ ಮಾಡಬಹುದು. ಐದು ವರ್ಷದ ಒಳಗಿನ ಮಕ್ಕಳ ನೋಂದಣಿ ಉಚಿತವಾಗಿದೆ. ಮೊಬೈಲ್ ಫೋನ್ ನಂಬರ್ ಬದಲಾವಣೆಗೆ ₹50 ಶುಲ್ಕ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.</p>.<p class="Subhead">**</p>.<p class="Subhead">ಅರಣ್ಯ ಪ್ರದೇಶ ಇರುವೆಡೆ, ಕೆಲವು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ನೆಟ್ವರ್ಕ್ ಇರುವ ಕಡೆ ಜನರನ್ನು ಸೇರಿಸಿ ಆಧಾರ್ ಸೇವೆ ನೀಡಲು ಸಿಬ್ಬಂದಿಗೆ ತಿಳಿಸಲಾಗಿದೆ.<br /><em><strong>-ರುದ್ರೇಶ ಎಂ.,ಜಿಲ್ಲಾ ಆಧಾರ್ ಸಮನ್ವಯಾಧಿಕಾರಿ, ಧಾರವಾಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>