<p><strong>ಅಳ್ನಾವರ:</strong> ಇಲ್ಲಿನ ಛತ್ರಪತಿ ಶಿವಾಜಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ₹1.14 ಕೋಟಿ ಲಾಭ ಗಳಿಸಿದೆ ಎಂದು ಅಧ್ಯಕ್ಷ ಬಳಿರಾಮ ಅಳವಣಿ ಹೇಳಿದರು.</p>.<p>‘ಸೊಸೈಟಿ ₹1.11 ಕೋಟಿ ಶೇರು ಬಂಡವಾಳ ಹೊಂದಿದೆ. ₹32.13 ಕೋಟಿ ದುಡಿಯುವ ಬಂಡವಾಳ ಇದ್ದು, ₹29.90 ಕೋಟಿ ಸಾಲ ಹಂಚಲಾಗಿದೆ. ₹26.12 ಕೋಟಿ ಠೇವಣಿ ಸಂಗ್ರಹಿಸಿ, ₹4.90 ಕೋಟಿ ನಿಧಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.</p>.<p>‘ಕಳೆದ ಆರ್ಥಿಕ ವರ್ಷದಲ್ಲಿ ₹239 ಕೋಟಿ ವ್ಯವಹಾರ ಮಾಡಿದೆ. ಉತ್ತಮ ವ್ಯವಹಾರದಿಂದ ಅನುತ್ಪಾದಕ ಸಾಲ ಪ್ರಮಾಣ ತಗ್ಗಿಸಲಾಗಿದೆ’ ಎಂದರು.</p>.<p>‘ಹಣಕಾಸಿನ ವ್ಯವಹಾರವನ್ನು ಸಂಪೂರ್ಣ ಗಣಕೀಕರಣ ಮಾಡಿ, ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಅರ್ಥಿಕ ಚಟುವಟಿಕೆ ಪಾರದರ್ಶಕವಾಗಿದೆ. ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಡುವ ಮೂಲಕ ಸದಸ್ಯರ ಹಣಕ್ಕೆ ಭದ್ರತೆ ಒದಗಿಸಲಾಗಿದೆ’ ಎಂದು ಹೇಳಿದರು.</p>.<p>ಸಂಸ್ಥಾಪಕ ಕೃಷ್ಣ ಅಷ್ಟೇಕರ, ಉಪಾಧ್ಯಕ್ಷ ಶಿವಾಜಿ ದುಲಬಾಜಿ, ನಿರ್ದೇಶಕರಾದ ನಿಂಗಪ್ಪ ಬೇಕ್ವಾಡಕರ, ಪರಶುರಾಮ ಶಿಂದೆ, ಪರುಶುರಾಮ ಬೇಕನೇಕರ, ಪರಶುರಾಮ ಕಾಕತ್ಕರ,<br> ವಿಷ್ಣು ಕೇಸರೇಕರ, ಚಂದ್ರಕಾಂತ ಕುಂದೇಕರ, ಶಂಕರ ಕಿರ್ಲೋಸ್ಕರ್, ಫಕ್ಕೀರಪ್ಪ ಭಜಂತ್ರಿ, ರುಕ್ಕಣ್ಣಾ ಮಡಿವಾಳರ, ನಿಂಗರಾಜ ಮುನವಳ್ಳಿ, ಜಯಶ್ರೀ ಮೋರೆ, ಗೀತಾ ಅಷ್ಟೇಕರ , ಸುಶೀಲಾ ಪರಸಣ್ಣವರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಂದ್ಯಾಳಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ:</strong> ಇಲ್ಲಿನ ಛತ್ರಪತಿ ಶಿವಾಜಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ₹1.14 ಕೋಟಿ ಲಾಭ ಗಳಿಸಿದೆ ಎಂದು ಅಧ್ಯಕ್ಷ ಬಳಿರಾಮ ಅಳವಣಿ ಹೇಳಿದರು.</p>.<p>‘ಸೊಸೈಟಿ ₹1.11 ಕೋಟಿ ಶೇರು ಬಂಡವಾಳ ಹೊಂದಿದೆ. ₹32.13 ಕೋಟಿ ದುಡಿಯುವ ಬಂಡವಾಳ ಇದ್ದು, ₹29.90 ಕೋಟಿ ಸಾಲ ಹಂಚಲಾಗಿದೆ. ₹26.12 ಕೋಟಿ ಠೇವಣಿ ಸಂಗ್ರಹಿಸಿ, ₹4.90 ಕೋಟಿ ನಿಧಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.</p>.<p>‘ಕಳೆದ ಆರ್ಥಿಕ ವರ್ಷದಲ್ಲಿ ₹239 ಕೋಟಿ ವ್ಯವಹಾರ ಮಾಡಿದೆ. ಉತ್ತಮ ವ್ಯವಹಾರದಿಂದ ಅನುತ್ಪಾದಕ ಸಾಲ ಪ್ರಮಾಣ ತಗ್ಗಿಸಲಾಗಿದೆ’ ಎಂದರು.</p>.<p>‘ಹಣಕಾಸಿನ ವ್ಯವಹಾರವನ್ನು ಸಂಪೂರ್ಣ ಗಣಕೀಕರಣ ಮಾಡಿ, ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಅರ್ಥಿಕ ಚಟುವಟಿಕೆ ಪಾರದರ್ಶಕವಾಗಿದೆ. ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಡುವ ಮೂಲಕ ಸದಸ್ಯರ ಹಣಕ್ಕೆ ಭದ್ರತೆ ಒದಗಿಸಲಾಗಿದೆ’ ಎಂದು ಹೇಳಿದರು.</p>.<p>ಸಂಸ್ಥಾಪಕ ಕೃಷ್ಣ ಅಷ್ಟೇಕರ, ಉಪಾಧ್ಯಕ್ಷ ಶಿವಾಜಿ ದುಲಬಾಜಿ, ನಿರ್ದೇಶಕರಾದ ನಿಂಗಪ್ಪ ಬೇಕ್ವಾಡಕರ, ಪರಶುರಾಮ ಶಿಂದೆ, ಪರುಶುರಾಮ ಬೇಕನೇಕರ, ಪರಶುರಾಮ ಕಾಕತ್ಕರ,<br> ವಿಷ್ಣು ಕೇಸರೇಕರ, ಚಂದ್ರಕಾಂತ ಕುಂದೇಕರ, ಶಂಕರ ಕಿರ್ಲೋಸ್ಕರ್, ಫಕ್ಕೀರಪ್ಪ ಭಜಂತ್ರಿ, ರುಕ್ಕಣ್ಣಾ ಮಡಿವಾಳರ, ನಿಂಗರಾಜ ಮುನವಳ್ಳಿ, ಜಯಶ್ರೀ ಮೋರೆ, ಗೀತಾ ಅಷ್ಟೇಕರ , ಸುಶೀಲಾ ಪರಸಣ್ಣವರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಂದ್ಯಾಳಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>