‘ಅರ್ಹತೆ ಇರುವ ಎಲ್ಲರೂ ಪರಿಶಿಷ್ಟ ವರ್ಗದ ಮೀಸಲಾತಿ ಕೇಳುವುದು ತಪ್ಪಲ್ಲ. ಕುರುಬರಿಗೆ ಪರಿಶಿಷ್ಟ ಪಂಗಡ ಸೌಲಭ್ಯಗಳನ್ನು ಕೊಡಬೇಕು ಎನ್ನುವ ಚರ್ಚೆ 1935ರಿಂದಲೂ ನಡೆಯುತ್ತಿದ್ದು, ದೆಹಲಿ-ಬೆಂಗಳೂರಿಗೆ ಫೈಲ್ ಓಡಾಡುತ್ತಿದೆ. ಉಪ್ಪಾರ,ಸವಿತಾ ಸಮಾಜ, ಕೋಳಿ ಸಮಾಜದವರೂಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಈಶ್ವರಪ್ಪ ಹೇಳಿದರು.