<p><strong>ಹುಬ್ಬಳ್ಳಿ: </strong>‘ಹೂಗಾರ ಸಮಾಜಾಭಿವೃದ್ದಿ ಪ್ರತಿಷ್ಠಾನದಿಂದ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನವನ್ನು ಜ. 3ರಂದು ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್ನಲ್ಲಿ ಬೆಳಿಗ್ಗೆ 10.30ಕ್ಕೆ ಆಚರಿಸಲಾಗುವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಲೋಚನೇಶ ಹೂಗಾರ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಅವರು ,ಸಾವಿತ್ರಿಬಾಯಿ ಬದುಕು ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಿಕ್ಷಕಿ ಶಾಂತಾ ನೀಲಪ್ಪ ಹೂಗಾರ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ’ ಎಂದರು.</p>.<p>‘ನೀಟ್ ಪರೀಕ್ಷೆಯಲ್ಲಿ 937ನೇ ರ್ಯಾಂಕ್ ಪಡೆದ ಸಿದ್ದಲಿಂಗ ನಿಜಗುಣಿ ಹೂಗಾರ, ವೈದ್ಯಕೀಯ ವಿದ್ಯಾರ್ಥಿ ಉಮೇಶ ಸೋಮಶೇಖರ ಹೂಗಾರ, ಸಿಪಿಐ ಆಗಿ ಬಡ್ತಿ ಹೊಂದಿದ ಎಂ.ಎಸ್. ಹೂಗಾರ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮಾಜದವರನ್ನು ಸನ್ಮಾನಿಸಲಾಗುವುದು’ ಎಂದರು.</p>.<p>ಹೂಗಾರ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ ಹೂಗಾರ, ನಿರ್ದೇಶಕರಾದ ಎಂ.ಎಂ. ಹೂಗಾರ, ನಾಗರಾಜ ಸಂಗಳಕರ, ಅನಿಲ ಹೂಗಾರ ಹಾಗೂ ಪ್ರತಿಷ್ಠಾನದ ಧರ್ಮದರ್ಶಿ ಬಿ.ಡಿ. ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>‘ಹೂಗಾರ ಸಮಾಜಾಭಿವೃದ್ದಿ ಪ್ರತಿಷ್ಠಾನದಿಂದ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನವನ್ನು ಜ. 3ರಂದು ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್ನಲ್ಲಿ ಬೆಳಿಗ್ಗೆ 10.30ಕ್ಕೆ ಆಚರಿಸಲಾಗುವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಲೋಚನೇಶ ಹೂಗಾರ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಅವರು ,ಸಾವಿತ್ರಿಬಾಯಿ ಬದುಕು ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಿಕ್ಷಕಿ ಶಾಂತಾ ನೀಲಪ್ಪ ಹೂಗಾರ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ’ ಎಂದರು.</p>.<p>‘ನೀಟ್ ಪರೀಕ್ಷೆಯಲ್ಲಿ 937ನೇ ರ್ಯಾಂಕ್ ಪಡೆದ ಸಿದ್ದಲಿಂಗ ನಿಜಗುಣಿ ಹೂಗಾರ, ವೈದ್ಯಕೀಯ ವಿದ್ಯಾರ್ಥಿ ಉಮೇಶ ಸೋಮಶೇಖರ ಹೂಗಾರ, ಸಿಪಿಐ ಆಗಿ ಬಡ್ತಿ ಹೊಂದಿದ ಎಂ.ಎಸ್. ಹೂಗಾರ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮಾಜದವರನ್ನು ಸನ್ಮಾನಿಸಲಾಗುವುದು’ ಎಂದರು.</p>.<p>ಹೂಗಾರ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ ಹೂಗಾರ, ನಿರ್ದೇಶಕರಾದ ಎಂ.ಎಂ. ಹೂಗಾರ, ನಾಗರಾಜ ಸಂಗಳಕರ, ಅನಿಲ ಹೂಗಾರ ಹಾಗೂ ಪ್ರತಿಷ್ಠಾನದ ಧರ್ಮದರ್ಶಿ ಬಿ.ಡಿ. ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>