ಹುಬ್ಬಳ್ಳಿ: ಭಾರತ್ ಬಂದ್ ಬೆಂಬಲಿಸಿ ಕುಂದಗೋಳ ತಾಲ್ಲೂಕಿನ ಬಾರದ್ವಾಡ ಗ್ರಾಮದ ಯೋಧ ರಮೇಶ, ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೈನಿಕರ ಪೋಷಾಕು ಹಾಕಿಕೊಂಡೇ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ರಜೆಯ ಮೇಲೆ ಊರಿಗೆ ಬಂದಿರುವ ಅವರು ಹೆಗಲ ಮೇಲೆ ಹಸಿರು ಶಾಲು ಹೊದ್ದು, ಕೈಯಲ್ಲಿ ಬಾರುಕೋಲು ಹಿಡಿದಿದ್ದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗಿದರು.
ಯೋಧನ ವಿಚಾರಣೆ ನಡೆಸಿದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದರು.