‘ಹರಿದ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ಸಿಬ್ಬಂದಿ ಒಳಕ್ಕೆ ಬಿಡಲಿಲ್ಲ ಎಂದು ಮಗ ಮನೆಗೆ ಬಂದು ತಿಳಿಸಿದ. ಬಳಿಕ, ನಾನು ಕರೆದುಕೊಂಡು ಹೋಗಿ ಮನವಿ ಮಾಡಿದರೂ ಸಿಬ್ಬಂದಿ ಕೇಳಲಿಲ್ಲ. ಕಡೆಗೆ, ಶಾಲೆ ವಿರುದ್ಧ ದೂರು ಕೊಡಲು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹೋದೆ. ಅಲ್ಲಿ, ಶಾಲೆಯವರೂ ಇದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ, ಇಬ್ಬರಿಗೂ ಬುದ್ಧಿ ಹೇಳಿ ಕಳಿಸಿದರು’ ಎಂದು ವಿದ್ಯಾರ್ಥಿಯ ತಂದೆ ಕುತುಬುದ್ಧೀನ್ ಮುಜಾವರ್ ‘ಪ್ರಜಾವಾಣಿ’ಗೆ ತಿಳಿಸಿದರು.