<p><strong>ಧಾರವಾಡ</strong>: ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕರೆದೊಯ್ಯುವಾಗ ತಪ್ಪಿಸಿಕೊಂಡು ಮೂರಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ಉಪಾಯದಿಂದ<br>ಕೆಳಗಿಳಿಸಿದ್ದಾರೆ.</p><p>ಪ್ರಕರಣವೊಂದರಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿ ವಿಜಯ್ ಉಣಕಲ್ ಎಂಬಾತನನ್ನು ಅಣ್ಣಿಗೇರಿ ಪೊಲೀಸರು ಭಾನುವಾರ ಧಾರವಾಡಕ್ಕೆ ಕರೆತರುವಾಗ ಆತ ತಪ್ಪಿಸಿಕೊಂಡಿದ್ದ. ಮಲಪ್ರಭಾ ನಗರದಲ್ಲಿ ಕಟ್ಟಡ ಏರಿ,<br>ನ್ಯಾಯಾಧೀಶರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದ್ದ. ತಪ್ಪಿದರೆ ಕಟ್ಟಡ<br>ದಿಂದ ಬಿದ್ದು ಸಾಯುವುದಾಗಿ ಹೆದರಿಸಿದ್ದ. ಪೊಲೀಸರು ಉಪಾಯವಾಗಿ ಆತನನ್ನು ಕೆಳಗಿಳಿಸಿ ಜೈಲಿಗೆ ಕಳಿಸಿದ್ದಾರೆ.</p><p>‘ಕೋಟ್ ಧರಿಸಿದ್ದ ಅತಿಥಿ<br>ಉಪನ್ಯಾಸಕರೊಬ್ಬರನ್ನು ಆರೋಪಿಗೆ ತೋರಿಸಿ ನ್ಯಾಯಾಧೀಶರು ಬಂದಿರುವುದಾಗಿ ಹೇಳಿ ಕೆಳಕ್ಕೆ ಇಳಿಸಿದೆವು’ ಎಂದು ಎಸಿಪಿ ಪ್ರಶಾಂತ ಸಿದ್ಧನಗೌಡರ ತಿಳಿಸಿದರು.</p><p>ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕರೆದೊಯ್ಯುವಾಗ ತಪ್ಪಿಸಿಕೊಂಡು ಮೂರಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ಉಪಾಯದಿಂದ<br>ಕೆಳಗಿಳಿಸಿದ್ದಾರೆ.</p><p>ಪ್ರಕರಣವೊಂದರಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿ ವಿಜಯ್ ಉಣಕಲ್ ಎಂಬಾತನನ್ನು ಅಣ್ಣಿಗೇರಿ ಪೊಲೀಸರು ಭಾನುವಾರ ಧಾರವಾಡಕ್ಕೆ ಕರೆತರುವಾಗ ಆತ ತಪ್ಪಿಸಿಕೊಂಡಿದ್ದ. ಮಲಪ್ರಭಾ ನಗರದಲ್ಲಿ ಕಟ್ಟಡ ಏರಿ,<br>ನ್ಯಾಯಾಧೀಶರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದ್ದ. ತಪ್ಪಿದರೆ ಕಟ್ಟಡ<br>ದಿಂದ ಬಿದ್ದು ಸಾಯುವುದಾಗಿ ಹೆದರಿಸಿದ್ದ. ಪೊಲೀಸರು ಉಪಾಯವಾಗಿ ಆತನನ್ನು ಕೆಳಗಿಳಿಸಿ ಜೈಲಿಗೆ ಕಳಿಸಿದ್ದಾರೆ.</p><p>‘ಕೋಟ್ ಧರಿಸಿದ್ದ ಅತಿಥಿ<br>ಉಪನ್ಯಾಸಕರೊಬ್ಬರನ್ನು ಆರೋಪಿಗೆ ತೋರಿಸಿ ನ್ಯಾಯಾಧೀಶರು ಬಂದಿರುವುದಾಗಿ ಹೇಳಿ ಕೆಳಕ್ಕೆ ಇಳಿಸಿದೆವು’ ಎಂದು ಎಸಿಪಿ ಪ್ರಶಾಂತ ಸಿದ್ಧನಗೌಡರ ತಿಳಿಸಿದರು.</p><p>ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>