<p>ಹುಬ್ಬಳ್ಳಿ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಅವರನ್ನೊಳಗೊಂಡ ‘ಪ್ರೈಡ್ ಆಫ್ ಇಂಡಿಯಾ’ ತಂಡವು 48.3 ಕಿ.ಮೀ ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷದಲ್ಲಿ ಈಜಿದೆ.</p>.<p>ತಂಡದಲ್ಲಿ ಮುರುಗೇಶ ಚನ್ನಣ್ಣವರ ಜತೆ ಹುಬ್ಬಳ್ಳಿಯ ಕೆಎಂಸಿ–ಆರ್ಐನ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ್ ಕರ್ವ, ರಾಜಬೀರ್, ಆಂಧ್ರಪ್ರದೇಶದ ಅಂಗವಿಕಲ ಈಜುಪಟು ಗಣೇಶ್ ಬಾಳಗ, ಮುಂಬೈನ ಬಿಬಿಎ ವಿದ್ಯಾರ್ಥಿ ಮಾನವ ಮೋರೆ ಇದ್ದರು.</p>.<p>ಚಾನಲ್ ಸ್ವಿಮ್ಮಿಂಗ್ ಅಸೋಸಿಯೇಷನ್ (ಸಿಎಸ್ಎ) ನಿಯಮದಂತೆ ಜೂನ್ 16ರಂದು ಬೆಳಗಿನ ಜಾವ 2.15ಕ್ಕೆ ಇಂಗ್ಲೆಂಡ್ ಸಾಂಫೈರ್ ಹೋಯ್ ದಡದಿಂದ ಆರಂಭವಾದ ಸ್ಪರ್ಧೆ ಮಧ್ಯಾಹ್ನ 3.52ಕ್ಕೆ ಫ್ರಾನ್ಸ್ನ ವಿಸ್ಸಂಟ್ ದಡದಲ್ಲಿ ಕೊನೆಗೊಂಡಿತು. ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಕರ್ಮಾಕರ ತಂಡದ ಮಾರ್ಗದರ್ಶಕರಾಗಿದ್ದರು.</p>.<p>‘ಸ್ಪರ್ಧೆಯ ಸಮಯದಲ್ಲಿ 13ರಿಂದ 16 ಡಿಗ್ರಿಯಷ್ಟು ಚಳಿ ಇತ್ತು. ಅಲ್ಲದೆ, ಅಲೆಗಳ ಏರಿಳಿತವೂ ಹೆಚ್ಚು ಇತ್ತು. ಹೀಗಾಗಿ ಕೆಲವರಿಗೆ ವಾಂತಿ, ತಲೆ ಸುತ್ತುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಿದವು. ಆದರೂ ನಿಗದಿತ ಗುರಿ ತಲುಪಲು ಸಾಧ್ಯವಾಯಿತು’ ಎಂದು ಮುರುಗೇಶ ಚನ್ನಣ್ಣವರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಅವರನ್ನೊಳಗೊಂಡ ‘ಪ್ರೈಡ್ ಆಫ್ ಇಂಡಿಯಾ’ ತಂಡವು 48.3 ಕಿ.ಮೀ ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷದಲ್ಲಿ ಈಜಿದೆ.</p>.<p>ತಂಡದಲ್ಲಿ ಮುರುಗೇಶ ಚನ್ನಣ್ಣವರ ಜತೆ ಹುಬ್ಬಳ್ಳಿಯ ಕೆಎಂಸಿ–ಆರ್ಐನ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ್ ಕರ್ವ, ರಾಜಬೀರ್, ಆಂಧ್ರಪ್ರದೇಶದ ಅಂಗವಿಕಲ ಈಜುಪಟು ಗಣೇಶ್ ಬಾಳಗ, ಮುಂಬೈನ ಬಿಬಿಎ ವಿದ್ಯಾರ್ಥಿ ಮಾನವ ಮೋರೆ ಇದ್ದರು.</p>.<p>ಚಾನಲ್ ಸ್ವಿಮ್ಮಿಂಗ್ ಅಸೋಸಿಯೇಷನ್ (ಸಿಎಸ್ಎ) ನಿಯಮದಂತೆ ಜೂನ್ 16ರಂದು ಬೆಳಗಿನ ಜಾವ 2.15ಕ್ಕೆ ಇಂಗ್ಲೆಂಡ್ ಸಾಂಫೈರ್ ಹೋಯ್ ದಡದಿಂದ ಆರಂಭವಾದ ಸ್ಪರ್ಧೆ ಮಧ್ಯಾಹ್ನ 3.52ಕ್ಕೆ ಫ್ರಾನ್ಸ್ನ ವಿಸ್ಸಂಟ್ ದಡದಲ್ಲಿ ಕೊನೆಗೊಂಡಿತು. ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಕರ್ಮಾಕರ ತಂಡದ ಮಾರ್ಗದರ್ಶಕರಾಗಿದ್ದರು.</p>.<p>‘ಸ್ಪರ್ಧೆಯ ಸಮಯದಲ್ಲಿ 13ರಿಂದ 16 ಡಿಗ್ರಿಯಷ್ಟು ಚಳಿ ಇತ್ತು. ಅಲ್ಲದೆ, ಅಲೆಗಳ ಏರಿಳಿತವೂ ಹೆಚ್ಚು ಇತ್ತು. ಹೀಗಾಗಿ ಕೆಲವರಿಗೆ ವಾಂತಿ, ತಲೆ ಸುತ್ತುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಿದವು. ಆದರೂ ನಿಗದಿತ ಗುರಿ ತಲುಪಲು ಸಾಧ್ಯವಾಯಿತು’ ಎಂದು ಮುರುಗೇಶ ಚನ್ನಣ್ಣವರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>